Saturday 8 January 2022

ಪುಸ್ಸ ಪುನ್ನಮಿ (ಜನವರಿ ತಿಂಗಳ ಹುಣ್ಣಿಮೆ)ಯ ವೈಶಿಷ್ಯತೆಗಳು the significance of January full moon day

      ಪುಸ್ಸ ಪುನ್ನಮಿ (ಜನವರಿ ತಿಂಗಳ ಹುಣ್ಣಿಮೆ)ಯ ವೈಶಿಷ್ಯತೆಗಳು




ಈ ಶುಭದಿನದಂದು ಬುದ್ಧ ಭಗವಾನರು ತಮ್ಮ ಸಂಯಕ್ ಸಂಬೋಧಿಪ್ರಾಪ್ತಿಯ 9 ತಿಂಗಳ ನಂತರ ಜಟಿಲ ಕಸ್ಸಪರಾದ ಉರುವೇಲ ಕಸ್ಸಪ, ಗಯಾಕಸ್ಸಪ, ಮತ್ತು ನದಿ ಕಸ್ಸಪರನ್ನ್ನು ದಮಿಸಿದ ನಂತರ ಅವರು ಮೋದಲ ಬಾರಿಗೆ ಶ್ರೀಲಂಕೆಗೆ ಮೋದಲ ಭೇಟಿ ನೀಡಿದ ದಿನವಾಗಿದೆ. ಇದರ ಬಗ್ಗೆ ಶ್ರೀಲಂಕೆಯ ಇತಿಹಾಸ ಗೃಂಥಗಳು ಬೆಳಕು ಚೆಲ್ಲುತ್ತದೆ. ಈ ಪುಸ್ಸ(ಪುಷ್ಯ) ಹುಣ್ಣಮಿಯು ಸಾಧಾರಣವಾಗಿ ಜನವರಿ ತಿಂಗಳಲ್ಲೆ ಬರುವುದು. 


  ರಾವಣ, ವಿಭೀಷಣರವರ ನಂತರದ ಸಂತಾನವನ್ನು ಯಕ್ಷರು ಎಂದು ಕರೆಯುತ್ತಿದ್ದರು, ಅಲ್ಲಿ ಆಗ ಶ್ರೀಲಂಕೆಯಲ್ಲಿ ಯಕ್ಷರು ಹಾಗೂ ನಾಗರು ವಾಸಿಸುತ್ತಿದ್ದರು. ಈ ನಾಗ ಹಾಗೂ ಯಕ್ಷರ ನಡುವೆ ಆಗ ಸದಾ ಯುದ್ಧಗಳು ಸಂಭವಿಸುತ್ತಿತ್ತು. ಆಗ ಲಂಕೆಯ ದೇವನಾದ ಸುಮನನಿಗೆ ಈ ಕಾದಾಟಗಳಿಗೆ ಅಂತ್ಯವಾಡಲು ಬುದ್ಧಭಗವಾನರಿಂದ ಮಾತ್ರ ಸಾಧ್ಯ ಎಂದು ಅರಿತು ಆತನು ಭಗವಾನ ಬುದ್ಧರ ಬಳಿಗೆ ಬಂದು ಪ್ರಾಥರ್ಿಸುತ್ತಾನೆ. ಆಗ ಭಗವಾನರು ಆತನ ಕೋರಿಕೆಗೆ ಒಪ್ಪಿಗೆ ಸೂಚಿಸಿ, ಇದ್ಧಿಬಲದಿಂದ ಶ್ರೀಲಂಕೆಗೆ ಬರುತ್ತಾರೆ. 


       ಯಕ್ಷರ ದಮನ ಮತ್ತು ದಮ್ಮದ ಆರಂಭ

 ಆ ಸಮಯದಲ್ಲಿ ಯಕ್ಷರು ಮಹಿಯಂಗನದಲ್ಲಿನ ಮಹಾನಾಗ ಉಧ್ಯಾನವನದಲ್ಲಿ ಸಭೆ ಸೇರಿರುತ್ತಾರೆ. ಅಲ್ಲಿ ಭಗವಾನರು ಪ್ರತ್ಯಕ್ಷರಾಗುತ್ತಾರೆ. ಅವರು ಅದ್ವಿತೀಯ ಪ್ರಭಾವಳಿಯಿಂದ ಕೂಡಿ ತಮ್ಮ ಆರು ವರ್ಣಗಳ ಪ್ರಭೆಯಿಂದಾಗಿ ಪರಮದಿವ್ಯರಾಗಿ ಕಾಣಿಸುತ್ತಾರೆ. ಅದರೆ ಆ ಯಕ್ಷರು ಅವರನ್ನು ಯಾರೊ ಆಕ್ರಮಣಕ್ಕೆ ಬಂದಿರುವರು ಎಂದು ಭಾವಿಸಿ, ಅವರೆಲ್ಲರೂ ಶಸ್ತ್ರಗಳನ್ನು ಬೀಸಲು ಸಿದ್ಧರಾದರು. ಆಗ ಭಗವಾನರು ತಕ್ಷಣ ತಮ್ಮ ಇದ್ದಿಬಲದಿಂದ ಮಹಾ ಬಿರುಗಾಳಿ, ಮಳೆ, ಸಿಡಿಲು, ಮಿಂಚುಗಳ ಮಿಶ್ರಿತ ಭೀಕರ ವಾತಾವರಣವನ್ನು ಸೃಷ್ಟಿಸಿದರು. ಆಗ ಯಕ್ಷರಿಗೆ ಭಗವಾನರ ಮಹಾಬಲವೂ ಅರ್ಥವಾಗಿ ಪೂರ್ಣವಾಗಿ ಶರಣು ಹೋದರು, ಅವರೊಂದಿಗೆ ಭಯ, ಭಕ್ತಿಯಿಂದ ನಡೆದುಕೊಂಡರು. ನಂತರ ಭಗವಾನರು ಅಲ್ಲಿನ ವೃಕ್ಷವೊಂದರ ಕೆಳಗೆ ಪತಕಡ ವಸ್ತ್ರವನ್ನು ಹಾಸಿ ಅದರ ಮೇಲೆ ಕುಳಿತು ಅಲ್ಲಿಗೆ ನಾಗರನ್ನು ಕರೆಯಿಸಿ ಯಕ್ಷ ಹಾಗೂ ನಾಗರಲ್ಲಿ ಸಂಧಾನವೆರ್ಪಡಿಸಿ ಅವರಲ್ಲಿ ಮೆತ್ತವನ್ನು ಹರಡಿ ಅವರೆಲ್ಲಾ ಮಿತ್ರತ್ವಭಾವದಿಂದ ಇರುವಂತೆ ಮಾಡಿದರು. ನಂತರ ಗಿರಿದ್ವೀಪವನ್ನು ಹತ್ತಿರ ಬರಮಾಡಿ ಅದರಲ್ಲಿ ಯಕ್ಷರಾಕ್ಷಸರನೆಲ್ಲಾ ಕಳುಹಿಸಿದರು. . ನಂತರ ಯಕ್ಷರು ಅಲ್ಲಿ ತೊಂದರೆ ಮಾಡದೆ ಗಿರಿದೀಪದಲ್ಲಿಯೇ ನೆಲೆಸಲು ಹೋದರು. ಅವರ ಈ ಮೋದಲ ಭೇಟಿಯು ಮುಂದೆ ಅಸೋಕ ಸಾಮ್ರಾಟ್ರವರ ಮಗ ಮಹಿಂದರು ಬುದ್ಧಧಮ್ಮವನ್ನು ಹರಡಲು ಸಹಾಯಕವಾಯಿತು


  ನಂತರ ಅಲ್ಲಿ ನಾಗಪಂಗಡದವರು ಹಾಗೂ ದೇವತೆಗಳು ಆ ನಾಗವನದಲ್ಲಿ ಭಗವಾನರ ಬಳಿ ತಿಸರಣವನ್ನು ಪಡೆದರು. ಮಧ್ಯ ಶ್ರಿಲಂಕೆಯಲ್ನಿ ಬೆಟ್ಟಗಳಲ್ಲಿ ದೇವಗಣವು ವಾಸಿಸುತ್ತಿದ್ದರು, ಅವರ ನಾಯಕನೇ ಸುಮನ ಸಮನ್ ಆತನಿಗೆ ಸೋತಪತ್ತಿ ಫಲವು ದೊರೆಯಿತು. ಬುದ್ಧರ ಬೋಧನೆಯಿಂದ ಸೋತಪನ್ನನಾದ ಮೇಲೆ ಆತನು ಅಪಾರ ಶ್ರದ್ಧೆಯಿಂದ ಕೂಡಿ ಭಗವಾನರ ಬಳಿ ಪೂಜಿಸುವ ದಾತುವನ್ನು ನೀಡುವಂತೆ ಕೋರಿಕೊಂಡನು. ಆಗ ಭಗವಾನರು ಆತನಿಗೆ ಹಿಡಿ ಕೇಶವನ್ನು ಕಿತ್ತು ನೀಡುವರು. ಅದನ್ನು ಆತನು ಸ್ವರ್ಣ ಪಾತ್ರೆಯಲ್ಲಿ ಪಡೆದು ಮಹಿಯಗನ ಚೇತಿಯವನ್ನು ನಿಮರ್ಿಸಿ ಅದರಲ್ಲಿ ಭಗವಾನರ ಪವಿತ್ರ ಕೇಶವನ್ನಿಟ್ಟು ಇಲ್ಲಿಯವರೆವಿಗೂ ಲಂಕಾ ಪ್ರಜೆಗಳು ಪೂಜಿಸುತ್ತ ಬಂದಿರುವರು.  ಬುದ್ಧರ ಕಾಲದಲ್ಲೇ ನಿಮರ್ಿತವಾದ ಮೊದಲ ಲಂಕಾದ ಪಗೋಡವಾಗಿದೆ(ದಬೋಗ). ಈ ಮಹಿಯಗೀನ ದಬೋಗವು ಮಿಯುಗುಣಸೇಯಾ ಎಂದು ಕರೆಯಲ್ಪಡುತ್ತದೆ. ಇದು ಸಹಾ ಮಹಾನಾಗವನದಲ್ಲೆ ಇದೆ. 


   ಈ ಘಟನೆಯ 45ವರ್ಷಗಳ ನಂತರ ಅಂದರೆ ಬುದ್ಧಭಗವಾನರ ಪರಿನಿಬ್ಬಾಣದ ನಂತರ ಪೂಜ್ಯ ಸಾರಿಪುತ್ತರ ಶಿಷ್ಯರಾದಂತಹ ಅರಹಂತ ಸರಭರು ಬುದ್ಧಭಗವಾನರ ಹೆಗಲಿನ ಅಸ್ತಿಯನ್ನು(ಗ್ರೀವ ಧಾತು) ಇಲ್ಲಿಗೆ ತಂದು ಸ್ತೂಪವನ್ನು ನಿಮರ್ಿಸುತ್ತಾರೆ. ನಂತರ ದೇವ ಸುಮನಸಮನ್ರವರು ಆ ಸ್ತೂಪವನ್ನು 12 ಮೊಳದಷ್ಟು (ಒಂದು ಮೋಳ =18 ಇಂಚು)ಎತ್ತರ ನಿಮರ್ಿಸುವರು. ಅಂದರೆ ಸುಮಾರು 18 ಅಡಿಗಳ ಸ್ತೂಪ. ನಂತರ ಬಂದತಹ ರಾಜ ದೇವಾಂಪ್ರಿಯ ತಿಸ್ಸನ ಸೋದರನಾದ ಉದ್ಧ ಚುಲಭಯನು ಅದೇ ಸ್ತೂಪವನ್ನು 30 ಮೊಳದಷ್ಟು(45 ಅಡಿ) ಎತ್ತರವಾದ ಸ್ತೂಪವನ್ನಾಗಿದನು. ಅದಕ್ಕೆ ಕಂಚುಕ ಚೇತಿಯ ಎಂದು ಕರೆದರು.  ನಂತರ ಬಂದಂತಹ ಶ್ರದ್ಧಾಶೀಲ ರಾಜನಾದ ದುಟುಗೆಮೆನು ಈ ಸ್ಥಳದ ಮಹತ್ವವನ್ನು ಅರಿತು ಆ ಸ್ತೂಪದ ಸುತ್ತಲು 80 ಮೊಳ ಎತ್ತರದ ಸ್ತೂಪವನ್ನು ನಿಮರ್ಿಸುವನು. ಅದು ಹಳೆಯ ಸ್ತೂಪದ ಮೇಲೆ ನಿಮರ್ಾಣವಾಯಿತು. ನಂತರವೂ ಕಾಲ ಕಾಲಕ್ಕೇ ಆಲ್ಲಿನ ರಾಜರೂಗಳಾದ ಧಾಟುಸೇನ, ಸಿರಿಸಂಗಬೊ, ಅಗ್ಬೊ, ಮಿಯುಗುಣ ಸೇಯಾ, ರವರು ಅದನ್ನು ಇನ್ನಷ್ಟು ಎತ್ತರ, ಅಗಲ, ಬಲಿಷ್ಟ, ವಿಶಿಷ್ಟವಾಗುವಂತೆ ರಚಿಸಿದ್ದಾರೆ. ಈಗ ಅದನ್ನು ಮಹಿಯಗಣ ಚೇತಿಯಾ ವರ್ಧನ ಸಮಿತಿಯ ನಿರ್ವಹಿಸುತ್ತದೆ.


    ಇಲ್ಲಿಗೆ ಭಕ್ತಗಣವು ಸಮಾನ್ಯವಾಗಿ ಜನವರಿ ತಿಂಗಳಲ್ಲೆ ಹೆಚ್ಚಾಗಿ ಬೇಟಿ ನೀಡುವರು. ಇದು ದುರುತು (ಜನವರಿ) ಮಾಸದ ಹುಣ್ಣಿಮೆದಿನದಂದು ಅಪಾರ ಭಕ್ತ ಸಮೂಹವು ಸೇರುವುದು. ಈ ಸ್ತೂಪವು ಮಹಾವೇಲಿ ನದಿಯ ದಡದಲ್ಲಿದೆ, ಇಲ್ಲಿ ರಾಜಕುಮಾರ ಸಂಘಬೋಧಿಯಿಂದ ಬೋಧಿವೃಕ್ಷವೂ ಸಹಾ ನೆಡಲ್ಪಟ್ಟಿದೆ.

 

    ರಾಜ ಬಿಂಬಸಾರನಿಗೆ ಧಮ್ಮಬೋದನೆ

  ನಂತರ ಭಗವಾನರು ಇದೇ ಸಮಯದಲ್ಲಿ ಅಂದರೆ ಇದೇ ಹುಣ್ಣಿಮೆಯಂದು ರಾಜ ಬಿಂಬಸಾರನಿಗೆ ಧಮ್ಮ ಬೋಧನೆಯನ್ನು ನೀಡಲು ಮಗಧೆಗೆ ಹೋದರು. ಆಗ ಅವರ ಹಿಂದೆ ಕಸ್ಸಪ ಸೋದರರು ಹಾಗೂ ಅವರ ಸಾವಿರಾರು ಶಿಷ್ಯರು ಸಹಾ ಇದ್ದರು. ಆಗ ರಾಜ ಬಿಂಬಸಾರನಿಗೆ ಬುದ್ದರ ಶಿಷ್ಯ ಉರುವೇಳ ಕಸ್ಸಪನೋ, ಅಥವಾ ಉರುವೇಳ ಕಸ್ಸಪನ ಶಿಷ್ಯ ಬುದ್ಧರೊ ಎಂಬ ಅನುಮಾನವಾಯಿತು . ಅವರ ಮನಸ್ಸನ್ನು ಓದಿದ ಭಗವಾನರು ಉರುವೇಳ ಕಸ್ಸಪರಿಗೆ ಹೀಗೆ ಕೇಳಿದರು :  ರೂಪಗಳಲ್ಲಿ, ಶಬ್ಧಗಳಲ್ಲಿ, ರಸಗಳಲ್ಲಿ, ರಮಿಸದೇ ಈ ದೇವಮನುಷ್ಯಗಳ ಲೋಕಗಳಲ್ಲಿ ಇನ್ಯಾವುದರಲ್ಲಿ ನಿನ್ನ ಮನವು ರಮಿಸುವುದು ಕಸ್ಸಪ ?

 ಆಗ ಉರುವೇಳ ಕಸ್ಸಪರು ಭಗವಾನರ ಪ್ರಶ್ನೆಗೇ ಅರ್ಥ ಮಾಡಿಕೊಂಡು ಹೀಗೇ ಉತ್ತರಿಸಿದರು :  ಪರಮಪದವಾಗಿರುವ, ಪರಮಶಾಂತತೆಯ, ಏನೂ ಇಲ್ಲದ , ಆ ನಿಬ್ಬಾಣದ ಮಹತ್ವತೆಯನ್ನು  ಅರಿತು, ಅದರಲ್ಲಿಯೇ ಮನವೂ ಬಾಗಿ, ಅಗ್ನಿ ಆಹುತತೆಯ ಮಾರ್ಗದಲ್ಲಿ ರಮಿಸುತ್ತಿಲ್ಲ, ಅವನ್ನೇಲ್ಲಾ ದುಃಖವಿಮುಕ್ತಿಗೇ ಅಸಹಾಯಕವೆಂದು ಅರಿತು ವಜರ್ಿಸಿದ್ದೇನೆ. ಎಂದು ಹೇಳಿ ಬುದ್ದಭಗವಾನರ ಪಾದಗಳಲ್ಲಿ ಶಿರವಿಟ್ಟು ವಂದಿಸಿ, ಪವಾಡವನ್ನು ಪ್ರದಶಿಸಿ, ಮಹಾಮಮಹೀಮರಾದ ಬುದ್ಧಭಗವಾನರೇ ನನ್ನ ಗುರುವು, ನಾನು ಅವರ ಶಿಷ್ಯನಷ್ಟೇ. ಎಂದು ನುಡಿದರು. 

 ಆಗ ಅಲ್ಲಿರುವ ಜನರಿಗೆಲ್ಲಾ ಹಾಗೂ ರಾಜ ಬಿಂಬಸಾರರಿಗೆ ಬುದ್ಧಭಗವಾನರ ಮಹತ್ವತೆ ಅರಿವಾಯಿತು. ಅವರೆಲ್ಲಾ ತಿಸರಣಕ್ಕೆ ಶರಣಾಗತರಾದರು. ರಾಜ ಬಿಂಬಸಾರನು ಭಗವಾನರಿಗೆ  ಹಾಗೂ ಸಾವಿರ ಅರಹಂತರಿಗೆ ಊಟಕ್ಕೇ ಆಹ್ವಾನಿಸಿದರು ನಂತರ ಪ್ರದಕ್ಷಣೆಮಾಡಿ ವಂದಿಸಿ ಹೋದರು. ರಾಜ ಬಿಂಬಸಾರನು ಸೋತಪನ್ನರಾದರು.

  ನಂತರ ಬಿಂಬಸಾರನು ಅತ್ಯಂತ ಪೂಜ್ಯಭಾವದಿಂದ ಆಹಾರ ಬಡಿಸಿ ಅವರ ಸೇವೆ ಮಾಡಿದನು. ನಂತರ ಅವರಿಗೆ ವೇಳುವನವನ್ನು ದಾನ ಮಾಡಿದನು. ಆಗ ಭೂಮಿಯು ಸಹಾ ಹಷರ್ಿತವಾದಂತೆ ಕಂಪಿತವಾಯಿತು. ನಂತರ ಭಗವಾನರು ಸಹಾ ಅವರ ದಾನವನ್ನು ಪ್ರಶಂಸೆ ಮಾಡಿ ಅವುಗಳ ಫಲವಾಗಿ ಸಾಧಾರಣ ಸುಖ ಆಯುವಿನಿಂದ ನಿಬ್ಬಾಣದವರೆವಿಗೂ ಲಾಭವಿದೆ ಏಂದು ಬೋಧಿಸಿದರು. ನಂತರ ಭಗವಾನರು ಭಿಕ್ಖಗಳಿಗೆ ವಸತಿ ಸ್ವೀಕರಿಸಲು ಅನುಮತಿ ನೀಡಿದರು.

  ಆ ರಾತ್ರಿ ಬಿಂಬಸಾರನಿಗೆ ಪೇತಗಳ ಭೀಕರ ಹಾಗೂ ಕರುಣಾಜನಕ ಶಬ್ದಗಳು ಕೇಳಿಸಿತು. ಅದನ್ನು ಆಲಿಸಿ ಹೆದರಿದ ಬಿಂಬಸಾರರು ಈ ವéಿಷಯದ ಬಗ್ಗೆ ಭಗವಾನರಲ್ಲಿ ಕೇಳಿದರು. ಆಗ ಭಗವಾನರು : ಭಯ ಬೇಡ ಮಹಾರಾಜ, ಇದರಿಂದ ನಿನಗೇನು ಹಾನಿಯಿಲ್ಲ, ಬದಲಾಗಿ ನಿನ್ನ ಉನ್ನತಿಯೇ ಹತ್ತಿರ ಬಂದಿದೆ, ಅವರೆಲ್ಲಾ ನಿನ್ನ ಪೂರ್ವಜರಾಗಿದ್ದಾರೆ, ಈಗ ಪೇತಗಳಾಗಿರುವರು, ನೆನ್ನೆ ಅವರಿಗೇ ನೀನು ದಾನಫಲವನ್ನು ಸಮಪರ್ಿಸದ ಕಾರಣ ದುಃಖಿತರಾಗಿರುವರು. ಈಗ ಪುನಃ ದಾನ ಮಾಡಿ ಅದರ ಫಲವನ್ನು  ಈ ದಾನಗಳ ಫಲವೇಲ್ಲಾ ನನ್ನ ಜ್ಞಾತಿ(ನೆಂಟ)ರಿಗೆ ತಲುಪಲಿ, ಅವರೆಲ್ಲಾ ಸುಖಿಯಾಗಿರಲಿ ಎಂದು ಸಂಕಲ್ಪಿಸು. ಎಂದು ಸಮಾಧಾನ ಮಾಡಿದರು.

  ನಂತರ ಬಿಂಬಸಾರರು ಹಾಗೇಯೆ ದಾನ ಮಾಡಿ ಸಂಕಲ್ಪಿದರು. ಅವರು ಭಗವಾನರ ಇಚ್ಛಾಶಕ್ತಿಯಿಂದಾಗಿ ಅವರು ಸ್ವಯಂ ತಮ್ಮ ಬಂಧುಗಳು ದಾನಗಳ ಫಲದಿಂದಾಗಿ ದೇವತಾ ಸಮಾನವಾದ ಆಹಾರ ಪಾನೀಯಗಳು ಹಾಗೂ ವಸತಿಗಳನ್ನು ಪಡೆಯುವುದನ್ನು ಸ್ವಯಂ ನೋಡಿದರು.

ನಂತರ ಭಗವಾನರು ಅವರಿಗೇ ತಿರೊಕುಡ್ಡ ಸುತ್ತವನ್ನು ಬೋಧಿಸಿದರು. ಇವೆಲ್ಲಾ ಈ ಪುಸ್ಸ ಹುಣ್ಣಮಿಯಂದು ನಡೆದ ಘಟನೆಗಳಾಗಿವೆ.


  

 

Friday 3 December 2021

ಮೊಗ್ಗಲ್ಲಾನರವರ ದುರಂತ ಹಾಗೂ ಪರಿನಿಬ್ಬಾಣ maha moggalana parinibbana in kannada


  ಮೊಗ್ಗಲ್ಲಾನರವರ ದುರಂತ ಹಾಗೂ ಪರಿನಿಬ್ಬಾಣ


ವರ್ಧಮಾನ ಮಹಾವೀರರ ಮರಣದ ನಂತರ ಅವರ ಶಿಷ್ಯರಲ್ಲಿ ಅತಿ ಹಿಂಸಾತ್ಮಕ ಜಗಳವುಂಟಾಯಿತು. ಅವರ ಶಿಷ್ಯರಲ್ಲೇ ಗುರುವಿನ ಬೋಧನೆಯ ಬಗ್ಗೆ ವಾದವಿವಾದಗಳಾದವು. ಹೀಗಾಗಿ ಜನರು ಸಹಾ ಅವರ ಮೇಲೆ ಶ್ರದ್ಧೆ ಕಳೆದುಕೊಂಡರು.  

ಇತ್ತ ಬುದ್ಧ ಧಮ್ಮ ಅತ್ಯಂತ ಉನ್ನತ ಶಿಖರವೇರಿತ್ತು. ಅದಕ್ಕೆ ಕಾರಣ ಬುದ್ಧ ಭಗವಾನರು ಮಾತ್ರವಲ್ಲದೆ ಸಾರಿಪುತ್ತರ ಪ್ರಜ್ಞಾಶೀಲತೆ ಹಾಗೂ ಮೊಗ್ಗಲಾನರ ಇದ್ಧಿ ಶಕ್ತಿ. ಮೊಗ್ಗಲ್ಲಾನರಿಗೆ ಮಹಾಮೊಗ್ಗಲ್ಲಾನ ಎಂದೇ ಕರೆಯುತ್ತಿದ್ದರು. ಏಕೆಂದರೆ ಅಂತಹ ಶ್ರೇಷ್ಠತೆ ಅವರಲ್ಲಿತ್ತು. ಅವರು ವಿವಿಧ ಮನಸ್ಶಕ್ತಿಗಳನ್ನು ಸಂಪಾದಿಸಿದ್ದರು. ಅವರು ಮಾಡದ ಪವಾಡವೇ ಇರಲಿಲ್ಲ. ಸಮಾಧಿ, ಇದ್ದಿಪಾದ ಮತ್ತು ಅಭಿಜ್ಞಗಳಲ್ಲಿ ಅವರು ಪರಿಪೂರ್ಣತೆ ಸಾಧಿಸಿ ಅತ್ಯಂತ ಪರಿಣಿತ ಮಾನಸಶಕ್ತಿ ಸಂಪನ್ನರಾಗಿದ್ದರು. ಹೀಗಾಗಿ ಅವರು ಪಾಪ ಮಾಡಿದವರ ಮುಂದಿನ ಗತಿ ತಿಳಿದುಕೊಂಡು ಜನರಿಗೆ ತಿಳಿಸಿ ಜನರು ಪಾಪ ಮಾಡದಂತೆ ತಡೆಯುತ್ತಿದ್ದರು. ಹಾಗೆಯೇ ದಾನ, ಶೀಲ ಆಚರಿಸಿದವರ ಸುಗತಿ ತಿಳಿದುಕೊಂಡು ಅವರ ಸುಗತಿಯ ಬಗ್ಗೆ ಜನರಿಗೆ ತಿಳಿಸಿ ಅವರನ್ನು ದಾನಿಗಳನ್ನಾಗಿ, ಶೀಲವಂತರನ್ನಾಗಿಸುತ್ತಿದ್ದರು. ಹಾಗೆಯೇ ಸಮಾಧಿವಂತರ ಬ್ರಹ್ಮಲೋಕ, ದಾನಿಗಳ, ಸ್ವರ್ಗಲೋಕ, ಪ್ರಜ್ಞಾರ ಲೋಕೋತ್ತರ ಫಲಗಳನ್ನು ತಿಳಿಸಿ ಅವರಲ್ಲಿ ಸ್ಫೂತರ್ಿ ತುಂಬಿಸುತ್ತಿದ್ದರು. ಇದರಿಂದಾಗಿ ಸರ್ವರು ಬುದ್ಧರ ಶರಣು ಪಡೆಯುತ್ತಿದ್ದರು, ಬೌದ್ಧ ಭಿಕ್ಷುಗಳಿಗೆ ಅತಿಯಾಗಿ ಸತ್ಕಾರ ಮಾಡುತ್ತಿದ್ದರು. ಹೀಗಾಗಿ ಅನ್ಯ ಮತಾವಲಂಬಿಗಳಿಗೆ ತೊಂದರೆಯಾಯಿತು. 

ಆಗ ನಗ್ನ ಸನ್ಯಾಸಿಗಳಾದ ನಿಗಂಠರಿಗೂ ತೊಂದರೆಯಾಯಿತು. ಆಗ ನಿಗಂಠ ಸನ್ಯಾಸಿಗಳು ಸಭೆ ಸೇರಿ ಹೀಗೆ ಚಚರ್ಿಸಿಕೊಂಡರು. ಸೋದರರೇ, ನಮಗೆ ಸತ್ಕಾರ ಕ್ಷೀಣವಾಗಿದೆ, ಕೇವಲ ಬೌದ್ಧ ಭಿಕ್ಷುಗಳಿಗೆ ಆದರ ಸತ್ಕಾರ ಗೌರವಗಳು ಹೇರಳವಾಗಿ ಸಿಗುತ್ತಿವೆ. ಇದಕ್ಕೆಲ್ಲಾ ಕಾರಣ ಯಾರೆಂದರೆ ಮೊಗ್ಗಲ್ಲಾನರವರೇ. ಏಕೆಂದರೆ ಅವರು ತಮ್ಮ ಅತೀಂದ್ರಿಯ ಶಕ್ತಿಯಿಂದ ನರಕಗಳಲ್ಲಿ, ಸ್ವರ್ಗಗಳಲ್ಲಿ, ಬ್ರಹ್ಮಲೋಕಗಳಲ್ಲಿ ಸಂಚರಿಸುವವರಾಗಿದ್ದಾರೆ. ಹೀಗಾಗಿ ಇಲ್ಲಿ ಬಂದು, ಇಂತಹ ವ್ಯಕ್ತಿ ಅಲ್ಲಿ ಹೇಗೆ ಜನಿಸಿದ್ದಾನೆ. ಇಂತಹ ಸುಖವನ್ನು ಅನುಭವಿಸುತ್ತಿದ್ದಾನೆ ಎಂದು ತಿಳಿಸುವವರಾಗಿದ್ದಾರೆ. ಆದ್ದರಿಂದಾಗಿ ಬೌದ್ಧ ಭಿಕ್ಷುಗಳಿಗೆ ಅಧಿಕ ಸತ್ಕಾರಗಳು ಸಿಗುತ್ತಿವೆ. ನಮಗೆ ನೋಡುವವರೇ ಇಲ್ಲವಾಗಿದ್ದಾರೆ. ನಮ್ಮ ದಾರಿಗೆ ಮುಳ್ಳಾಗಿರುವ ಈ ಮೊಗ್ಗಲ್ಲಾನರನ್ನು ಯಾವುದೇ ರೀತಿಯಲ್ಲಾಗಲೀ ಕೊಲ್ಲೋಣ ಅಥವಾ ಕೊಲ್ಲಿಸೋಣ. ಆಗ ಮಾತ್ರ ನಾವು ಸುಖವಾಗಿರಬಲ್ಲೆವು, ಏನೆನ್ನುವಿರಿ? ಎಲ್ಲರೂ ಇದಕ್ಕೆ ಒಪ್ಪಿಗೆ ಸೂಚಿಸಿದರು.

ನಂತರ ಅವರು ಅಲೆದಾಡುವ ಶ್ರಮಣಗುಪ್ತನೆಂಬ ಕಳ್ಳರಿಗೆ ಸಾವಿರ ಚಿನ್ನದ ನಾಣ್ಯಗಳನ್ನು ನೀಡಿ, ಮೊಗ್ಗಲ್ಲಾನರಿಗೆ ಮುಗಿಸಲು ಯೋಜನೆ ಮಾಡಿದರು. ಹೋಗಿ, ಮೊಗ್ಗಲ್ಲಾನರು ಕರಿಬಂಡೆಯ ಬಳಿ ವಾಸವಾಗಿದ್ದಾರೆ, ಅಲ್ಲಿಗೆ ಹೋಗಿ ಮುಗಿಸಿಬಿಡಿ ಎಂದು ಆಜ್ಞಾಪಿಸಿ ಕಳುಹಿಸಿದರು. 

ಆಗ ಮೊಗ್ಗಲ್ಲಾನರು ಕರಿಬಂಡೆ(ಕಾಲಾ ಶಿಲ)ಯ ಬಳಿಯಲ್ಲಿನ ವಾಸಸ್ಥಳದಲ್ಲಿ ಧ್ಯಾನಿಸುತ್ತಿದ್ದರು. ಕಳ್ಳರೆಲ್ಲರೂ ಸುತ್ತುವರೆದರು. ಆದರೆ ಮೊಗ್ಗಲ್ಲಾನರು ಬೀಗದ ಕೈ ಹಾಕುವ ಕಿಂಡಿಯಿಂದ ಸೂಕ್ಷ್ಮರೂಪ ಪಡೆದು ಅಲ್ಲಿಂದ ತಪ್ಪಿಸಿಕೊಂಡರು. ಮತ್ತೊಂದು ದಿನ ವಾಸಸ್ಥಳವನ್ನು ಸುತ್ತುವರೆದಾಗ, ಮೊಗ್ಗಲ್ಲಾನರು ಛಾವಣಿಯ ರಂಧ್ರದಿಂದ ಸೂಕ್ಷ್ಮ ರೂಪ ಪಡೆದು ಅಗೋಚರವಾಗಿ ಹಾರಿ ತಪ್ಪಿಸಿಕೊಂಡರು. ಇದೇರೀತಿಯಾಗಿ ಆರು ದಿನಗಳು ಅವರ ಕೈಗೆ ಸಿಗದೆ ಮೊಗ್ಗಲ್ಲಾನರು ಯಶಸ್ವಿಯಾದರು. ಅರಹಂತರಾದ ಅವರಿಗೆ ದೇಹವನ್ನು ರಕ್ಷಿಸಿಕೊಳ್ಳಬೇಕೆಂಬ ಆಸೆ ಏನೂ ಇರಲಿಲ್ಲ. ಅದರೆ ಅವರನ್ನು ಕೊಂದವರಿಗೆ ಭೀಕರ ದುರ್ಗತಿ ಸಿಗುವುದೆಂಬ ಕಾರಣಕ್ಕಾಗಿ , ಕೊಲೆಗಾರರ ಮೇಲಿನ ಕರುಣೆಯು ಅವರನ್ನು ಹೀಗೆ ತಪ್ಪಿಸಿಕೊಳ್ಳಲು  ಮುಖ್ಯ ಕಾರಣವಾಗಿತ್ತು.

ಆದರೆ ಯಾವಾಗ 7ನೆಯ ದಿನ ಬಂದಿತೋ, ಆಗ ಪೂಜ್ಯ ಮೊಗ್ಗಲ್ಲಾನರಿಗೆ ತಾವು ಕಲ್ಪಗಳ ಹಿಂದೆ ಮಾಡಿದ ಪಾಪದ ಕರ್ಮವು ನೆನಪಿಗೆ ಬಂದಿತು. ಅದು ಹೀಗಿತ್ತು.

      *******     *********     *********      ***********

   ಅತೀತ ಕಾಲದಲ್ಲಿ ಬಹು ಜನ್ಮಗಳ ಹಿಂದೆ, ಈ ಮೊಗ್ಗಲ್ಲಾನರು ಉತ್ತಮ ಕುಟುಂಬದಲ್ಲಿ ಜನಿಸಿದ್ದರು. ತಂದೆ ತಾಯಿಗಳ ಸೇವೆ ಮಾಡಿಕೊಂಡು ಚೆನ್ನಾಗಿಯೇ ಇದ್ದರು. ಆಗ ತಂದೆ ತಾಯಿಗಳು ಆತನಿಗೆ ವಿವಾಹಕ್ಕೆ ಬಲವಂತ ಮಾಡಿದಾಗ ಮೊದಮೊದಲು ವಿವಾಹಕ್ಕೆ ಆ ಯುವಕನು ನಿರಾಕರಿಸಿದನು: ಅದರ ಅವಶ್ಯಕತೆ ಏಕೆ, ನಾನೇ ನಿಮಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ, ಮುಂದೆ ಹಾಗೆಯೇ ಚೆನ್ನಾಗಿ ನೋಡಿಕೊಳ್ಳುವೆನು ಎನ್ನುತ್ತಿದ್ದರು. ಆದರೂ ತಾಯ್ತಂದೆಯರು ಆತನಿಗೆ ಚೆಂದದ ಸ್ತ್ರೀಯೊಂದಿಗೆ ವಿವಾಹ ಮಾಡಿಸಿದ್ದರು.

ಮೊದಮೊದಲು ಆ ಸೊಸೆಯು ಅತ್ತೆ-ಮಾವಂದಿರನ್ನು ಚೆನ್ನಾಗಿಯೇ ನೋಡಿಕೊಂಡಳು. ನಂತರ ಆಕೆಗೆ ಅವರನ್ನು ಕಂಡರೆ ಅಸಹ್ಯವಾಗತೊಡಗಿತು. ನಾನು ನಿಮ್ಮ ಅಂಧರಾಗಿರುವ ಮುದಿ ತಂದೆ-ತಾಯಿಗಳೊಂದಿಗೆ ಇರಲು ಸಾಧ್ಯವಿಲ್ಲ, ಹೀಗೆಯೇ ಒಂದೇ ಮನೆಯಲ್ಲಿ ಇರಲು ಸಾಧ್ಯವೇ ಇಲ್ಲ ಎಂದಳು. ಆದರೆ ಆ ಯುವಕನು ಅದನ್ನೆಲ್ಲ ಕಿವಿಗೆ ಹಾಕಿಕೊಳ್ಳಲಿಲ್ಲ. ಇದರಿಂದ ಆಕೆಯು ಉಪಾಯವೊಂದನ್ನು ಮಾಡಿದಳು. ಅಕ್ಕಿಯ ಗಂಜಿಯನ್ನು ಅಲ್ಲಲ್ಲಿ ಸಿಂಪಡಿಸಿ, ಗಂಡನು ಮನೆಗೆ ಬಂದಾಗ ನೋಡಿ, ನಿಮ್ಮ ತಂದೆ-ತಾಯಿ ಮಾಡಿರುವುದನ್ನು, ಅವರು ಮನೆಯೆಲ್ಲಾ ಹೀಗೆ ಗಲೀಜು ಮಾಡುತ್ತಾರೆ, ದಿನಾ ನಾನೇ ಇದನ್ನೆಲ್ಲಾ ಶುಚಿಗೊಳಿಸಬೇಕು. ಅಬ್ಬಾ, ಇವರೊಂದಿಗೆ ನಾನು ಇನ್ನೂ ಒಟ್ಟಿಗೆ ಇರಲು ಸಾಧ್ಯವಿಲ್ಲ. ಎಂದಳು. ಹೀಗೆ ಆಕೆ ಪದೇ ಪದೇ ಅಸಹ್ಯ ತೋಡಿಕೊಂಡಾಗ, ಆತನಂತಹ ಶುದ್ಧ ಜೀವಿಯಲ್ಲೂ ಕಲುಶತೆ ಮೂಡಿತು. ಸರಿ ಅವರಿಗೆ ಏನಾದರೂ ವ್ಯವಸ್ಥೆ ಮಾಡುವೆನು ಎಂದನು.

ಮಾರನೆಯದಿನ ಆ ಯುವಕನು ತನ್ನ ತಂದೆ ತಾಯಿಗಳೊಂದಿಗೆ ಅಪ್ಪ-ಅಮ್ಮ, ಇಂತಹ ಊರಿನಲ್ಲಿ ನಿಮ್ಮ ಸಂಬಂಧಿಕರು ನಿಮಗೆ ನೋಡಲು ಹಾತೊರೆಯುತ್ತಿದ್ದಾರೆ, ನಿಮ್ಮನ್ನು ಕರೆತರಲು ಕೇಳಿಕೊಂಡಿದ್ದಾನೆ ಎಂದು ಹೇಳಿ ಬಂಡಿ ಸಿದ್ಧಪಡಿಸಿ ದಟ್ಟ ಅರಣ್ಯದೊಳಗೆ ಕರೆದೊಯ್ದನು. ನಂತರ ಒಂದೆಡೆ ನಿಲ್ಲಿಸಿ, ತನ್ನ ತಂದೆಗೆ ಬಂಡಿಯ ಎತ್ತುಗಳ ಹಗ್ಗವನ್ನು ನೀಡಿ, ಇಲ್ಲಿ ಕಳ್ಳರ ಕಾಟವೆಂದು ಹೇಳಿ ಅವರೇ ಮುಂದುವರೆಯುವಂತೆ ಹೇಳಿದನು. ನಂತರ ಕಳ್ಳರು ಆಕ್ರಮಣ ಮಾಡಿರುವ ಹಾಗೆ ಶಬ್ದಗಳನ್ನು ಮಾಡಿದನು. ಆ ಶಬ್ದಗಳನ್ನು ಕೇಳಿದ ತಾಯಿ-ತಂದೆಯರು ಮಗು, ನೀನು ಊರಿಗೆ ಸೇರಿಬಿಡು, ನೀನಿನ್ನೂ ಯುವಕ, ನಮಗೆ ವಯಸ್ಸಾಗಿದೆ, ನೀನು ಜೀವ ಉಳಿಸಿಕೋ ಹೋಗು ಎಂದರು. ಆದರೆ ಮನಸ್ಸನ್ನು ಕಲ್ಲು ಮಾಡಿಕೊಂಡಿದ್ದ ಆತನಿಗೆ ಅದರಿಂದ ಯಾವ ಪರಿಣಾಮವೂ ಆಗಲಿಲ್ಲ. ಆತನು ಕಳ್ಳರಂತೆ ಶಬ್ದಗಳನ್ನು ಮಾಡುತ್ತ ಅವರನ್ನು ಹಿಂಸಿಸಿ, ಕೊಂದು ಅರಣ್ಯದಲ್ಲಿ ಎಸೆದು ಊರಿಗೆ ಹಿಂತಿರುಗಿದನು. 

   *********          **********          *********        **********

ಇದರ ಪರಿಣಾಮವಾಗಿ ಆತನು ನರಕದಲ್ಲಿ ಸಾವಿರಾರು ವರ್ಷ ನೋವು ಅನುಭವಿಸಿದನು. ನಂತರ ನೂರಾರು ಜನ್ಮಗಳಲ್ಲಿ ಹೀಗೆಯೇ ಹಿಂಸೆಗೆ ಒಳಗಾಗಿ ಮರಣವನ್ನಪ್ಪಿದನು. ಆದ್ದರಿಂದಲೇ ಈ ಅಂತಿಮ ಜನ್ಮದಲ್ಲೂ ಹೀಗೆ ಭೀಕರವಾಗಿ ಚಿತ್ರಹಿಂಸೆಯುತ ನೋವನ್ನು ಅನುಭವಿಸಿದನು.

ಆ ಕರ್ಮಫಲದ ಪ್ರಬಲ ಶಕ್ತಿಯಿಂದಾಗಿ ಅವರ ಪವಾಡ ಶಕ್ತಿಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ನಂದೋಪನಂದರನ್ನು ದಮನ ಮಾಡಿದಂತಹ, ಅನೇಕ ನಾಗರನ್ನು ದಮನ ಮಾಡಿದ , ಇಂದ್ರನ ವೈಜಯಂತವನ್ನು ಅಲುಗಾಡಿಸಿದಂತಹ, ಇದ್ದಿ ಹಾಗೂ ಅಭಿಜ್ಞಾಗಳಲ್ಲಿ ಬುದ್ಧರ ನಂತರ ಇಡೀ ಲೋಕಗಳಿಗೆ  ದ್ವಿತೀಯರಾದಂತಹ ಮೊಗ್ಗಲಾನರು ಕಮ್ಮಫಲದ ಮುಂದೆ ಏನೂ ಇಲ್ಲದೆ ಹೋದರು. ಏಳಲು ಅಸಮರ್ಥರಾದರು, ತಪ್ಪಿಸಿಕೊಳ್ಳಲು ಅಸಮರ್ಥರಾದರು. ಅದೇ ಸಮಯಕ್ಕೆ ಕಳ್ಳರು ಅವರನ್ನು ಹಿಡಿದುಕೊಂಡರು. ಅಂಗಗಳನ್ನೆಲ್ಲಾ ಕತ್ತರಿಸಿ ಹಾಕಿದರು, ಮೂಳೆಗಳನ್ನೆಲ್ಲ ಪುಡಿ ಪುಡಿ ಮಾಡಿದರು. ಇವರು ಸತ್ತಿದ್ದಾರೆ ಎಂದು ಭಾವಿಸಿ ಅವರು ಮೊಗ್ಗಲ್ಲಾನರ ಅವಶೇಷಗಳನ್ನು ಪೊದೆಯಲ್ಲಿ ಬಿಸಾಡಿ ಹೊರಟರು.

ಅವರು ಹೊರಟ ನಂತರ ಮೊಗ್ಗಲ್ಲಾನರಿಗೆ ತಮ್ಮ ಅತೀಂದ್ರಿಯ ಶಕ್ತಿಯ ಚಾಲನಶಕ್ತಿ ಪುನಃ ಪೂರ್ಣವಾಗಿ ವಶಕ್ಕೆ ಬಂದಿತು. ಆಗ ಅವರು ಹೀಗೆ ಯೋಚಿಸಿದರು. ನನ್ನ ನಿಬ್ಬಾಣದ ಸಮಯ ಸನ್ನಿಹಿತವಾಯಿತು. ಪರಿನಿಬ್ಬಾಣಕ್ಕೆ ಮುನ್ನ ಭಗವಾನರಿಗೆ ಗೌರವಿಸುವುದು ಒಳ್ಳೆಯದು ಎಂದು ತಕ್ಷಣ ಅವರು ತಮ್ಮ ಅತೀಂದ್ರಿಯ ಶಕ್ತಿಯಿಂದಾಗಿ ಇಡೀ ದೇಹವನ್ನು ಪುನಃ ಒಂದಾಗಿಸಿ ಸರಿಪಡಿಸಿಕೊಂಡು ಗಾಳಿಯಲ್ಲಿ ಹಾರಿಕೊಂಡು ಭಗವಾನರ ಬಳಿಗೆ ಬಂದರು. ಅವರನ್ನು ಪೂಜಿಸಿ ಹೀಗೆ ಹೇಳಿದರು: ಭಗವಾನ್, ನನ್ನ ಆಯು ಸಂಖಾರ ಕ್ಷೀಣವಾಗಿದೆ. .ನಾನು ಪರಿನಿಬ್ಬಾಣ ಪಡೆಯಲು ನಿರ್ಧರಿಸಿದ್ದೇನೆ.

ಹೌದೆ? ಯಾವ ಸ್ಥಳವನ್ನು ಆಯ್ಕೆಮಾಡಿರುವೆ ?

ಕರಿಬಂಡೆಯ ಬಳಿ.

ಸರಿ ಮೊಗ್ಗಲ್ಲಾನ, ಅದಕ್ಕೆ ಮುನ್ನ ಧಮ್ಮ ಬೋಧನೆಯನ್ನು ಭಿಕ್ಷುಗಳಿಗೆ ಮಾಡುವವನಾಗು, ನಿನ್ನಂತಹ ಶ್ರೇಷ್ಠ ಶಿಷ್ಯ ಮುಂದೆ ಗೋಚರಿಸಲಾರ.

ಹಾಗೇ ಆಗಲಿ ಭಂತೆ ಎಂದು ನುಡಿದು ಗೌರವಿಸಿ, ಪ್ರದಕ್ಷಿಣೆ ಮಾಡಿದರು. ನಂತರ ಗಾಳಿಯಲ್ಲಿ ತೇಲಿಕೊಂಡು, ಎಲ್ಲಾ ಬಗೆಯ ಇದ್ಧಿಶಕ್ತಿಯ, ಅತೀಂದ್ರಿಯ ಪವಾಡಗಳನ್ನು ಪ್ರದಶರ್ಿಸಿದರು. ಅದು ಅತ್ಯದ್ಭುತ ದೃಶ್ಯವಾಗಿತ್ತು. ಏಕೆಂದರೆ ಬುದ್ಧರ ನಂತರ ಅಂತಹ ಶ್ರೇಷ್ಠತೆಯ ಮಾನಸಶಕ್ತಿಯಿಂದ ಮಾಡುವ ಅಚ್ಚರಿಗಳನ್ನು ಅವರು ಮಾತ್ರ ಮಾಡುವಂತಹದಾಗಿತ್ತು. ನಂತರ ಧಮ್ಮ ಬೋಧಿಸಿ ಕರಿಬಂಡೆಯ ಬಳಿ ಪರಿನಿಬ್ಬಾಣ ಪ್ರಾಪ್ತಿ ಮಾಡಿದರು.

ಕೂಡಲೇ ಎಲ್ಲಾ ಲೋಕಗಳಲ್ಲಿ  ಏಕಕಾಲದಲ್ಲಿ ನಮ್ಮ ಆಚಾರ್ಯರ ಪರಿನಿಬ್ಬಾಣವಾಯಿತು ಎಂದು ಆಕ್ರಂದನ ಉಂಟಾಯಿತು. ಬ್ರಹ್ಮರು ,ದೇವದೇವತೆಗಳು, ಮಾನವರು ದಿವ್ಯ ಸುಗಂಧಗಳಿಂದ, ವಿವಿಧ ಪುಷ್ಪಗಳ ಮಾಲೆಗಳಿಂದ, ಸುಗಂಧಿತ ಧೂಪಗಳಿಂದ, ಇತ್ಯಾದಿಗಳಿಂದ ಅವರ ಚಿತಾ ಸ್ಥಳವೂ ಸಿದ್ಧವಾಯಿತು. 99ರತ್ನಗಳಷ್ಟು ಎತ್ತರದ ಚಿತೆಯು ಸಿದ್ಧವಾಯಿತು. ಸ್ವತಃ ಭಗವಾನರೇ ಅವರ ಶರೀರವನ್ನು ಚಿತೆಯ ಮೇಲೆ ಇಟ್ಟರು. ಚಿತೆಯ ಸುತ್ತಲೂ ಒಂದು ಯೋಜನದಷ್ಟು ವಿಸ್ತಾರದಲ್ಲಿ ಅಂತರಿಕ್ಷದಿಂದ ಪುಷ್ಪವೃಷ್ಟಿಯಾಯಿತು. ದೇವತೆಗಳ ಮಧ್ಯೆ ಮಾನವರು, ಮಾನವರ ಮಧ್ಯೆ ದೇವತೆಗಳು ನಿಂತಿದ್ದರು. ಏಳು ದಿನಗಳವರೆಗೆ ಎಲ್ಲರೂ ಬಂದು ಪೂಜಿಸಿ ಸಾಧು ಕ್ರಿಯೆಗಳನ್ನು ಮಾಡುತ್ತಿದ್ದರು. ನಂತರ ವೇಲೂವನದ ದ್ವಾರದಲ್ಲಿ  ಭಗವಾನರ ಸಮ್ಮುಖದಲ್ಲಿ ಅವರ ಚೈತ್ಯ ನಿಮರ್ಾಣವಾಯಿತು.

ಅವರ ಮೇಲೆ ಮಾರಣಾಂತಿಕ ಹಲ್ಲೆ ಆದ ಸುದ್ದಿ  ತಕ್ಷಣ ಬೆಂಕಿಯಂತೆ ಹಬ್ಬಿತು. ರಾಜ ಅಜಾತಶತ್ರುವು ಎಲ್ಲೆಡೆ ಗೂಢಾಚಾರರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆಹಚ್ಚಲು ತಕ್ಷಣ ನೇಮಿಸಿದನು. ಆಗ ಕೊಲೆಗಾರರು ಕುಡಿದ ಅಮಲಿನಲ್ಲಿ ಈ ವಿಷಯವನ್ನು ತಾವೆ ಮಾಡಿದ್ದು ಎಂದು ಬೀಗುವಾಗ, ಪತ್ತೆದಾರರು ತಕ್ಷಣ ಅವರನ್ನು ಬಂಧಿಸಿ ರಾಜನ ಮುಂದೆ ನಿಲ್ಲಿಸಿದರು. ರಾಜನು ಪ್ರಶ್ನಿಸಿದಾಗ, ತಾವೇ ಮಾಡಿರುವುದಾಗಿ ತಿಳಿಸಿದರು. ನಿಮಗೆ ಹೀಗೆ ಮಾಡಲು ಪ್ರೇರೇಪಣೆ ನೀಡಿದ್ದು ಯಾರು? ಎಂದು ರಾಜನು ಪ್ರಶ್ನಿಸಿದಾಗ, ನಿಗಂಠ ನಗ್ನ ಸನ್ಯಾಸಿಗಳು ಎಂದು ಉತ್ತರಿಸಿದರು. ಆಗ ರಾಜನಿಗೆ ಕೋಪವುಂಟಾಗಿ ಆ ಕಳ್ಳರಿಗೂ ಮತ್ತು ಕಾರಣಕರ್ತರಾದ 500 ನಗ್ನ ನಿಗಂಠರಿಗೂ ಬಂಧಿಸಿ ಅವರನ್ನೆಲ್ಲಾ ಸೊಂಟದವರೆಗೂ ಹೂತ ನಂತರ ಮೇಲ್ಭಾಗಕ್ಕೆ ಹುಲ್ಲುಗಳನ್ನು ಜೋಡಿಸಿ, ಅಗ್ನಿಗೆ ಆಹುತಿ ಮಾಡಿಸಿದನು. ನಂತರ ಉಳಿದ ಶವದ ಅವಶೇಷಗಳನ್ನು ಭೂಮಿಯಲ್ಲಿ ನೇಗಿಲಿನಿಂದ ಹೂಳಿಸಿದನು.

ಆ ಸಮಯದಲ್ಲಿ ಭಿಕ್ಷುಗಳು ಮೊಗ್ಗಲ್ಲಾನರವರ ಬಗ್ಗೆಯೇ ಚಚರ್ಿಸತೊಡಗಿದ್ದರು. ಆಗ ಅಲ್ಲಿಗೆ ಬಂದ ಭಗವಾನರು ಹೀಗೆ ಅವರನ್ನು ಕೇಳಿದರು: ಭಿಕ್ಷುಗಳೇ, ನೀವು ಮೊಗ್ಗಲ್ಲಾನರವರ ವರ್ತಮಾನದ ಬದುಕಿನ ಬಗ್ಗೆಯೇ ಪರಿಗಣನೆ ತೆಗೆದುಕೊಳ್ಳುವುದಾದರೆ, ಖಂಡಿತವಾಗಿ ಅವರು ಹಿಂಸೆಗೆ ಅರ್ಹರಾಗುತ್ತಿರಲಿಲ್ಲ. ಆದರೆ ವಾಸ್ತವವಾಗಿ ಹೇಳುವುದಾದರೆ ಅವರ ಇಂದಿನ ಅನಾಹುತಕ್ಕೆ ಅವರ ಹಿಂದಿನ ಜನ್ಮವೊಂದರ ಕೃತ್ಯವೇ ಕಾರಣವಾಗಿತ್ತು. 

ಆಗ ಭಿಕ್ಷುಗಳು ಭಗವಾನ್ ದಯವಿಟ್ಟು ಈ ವಿವರವನ್ನೆಲ್ಲಾ ಭಗವಾನರು ಹೇಳುವಂತಾಗಲಿ.

ಆಗ ಭಗವಾನರು ಆ ಹಿಂದಿನ ಜನ್ಮದ ಘಟನೆಯನ್ನು ತಿಳಿಸಿದರು. ಹಾಗೂ ಹೀಗೆ ನುಡಿದರು. ಇದರ ಪರಿಣಾಮವಾಗಿ ಆತನು ನರಕದಲ್ಲಿ ಸಾವಿರಾರು ವರ್ಷ ನೋವು ಅನುಭವಿಸಿದನು. ನಂತರ ನೂರಾರು ಜನ್ಮಗಳಲ್ಲಿ ಹೀಗೆಯೇ ಹಿಂಸೆಗೆ ಒಳಗಾಗಿ ಮರಣವನ್ನಪ್ಪಿದನು. ಆದ್ದರಿಂದಲೇ ಈ ಅಂತಿಮ ಜನ್ಮದಲ್ಲೂ ಹೀಗೆ ಭೀಕರವಾಗಿ ಚಿತ್ರಹಿಂಸೆಯುತ ನೋವನ್ನು ಅನುಭವಿಸಿದನು. ಆದರೆ ಪರಿನಿಬ್ಬಾಣ ಸಾಧಿಸಿದ್ದರಿಂದಾಗಿ ದುಃಖಪೂರಿತ ಸಂಸಾರದಿಂದ ಪೂರ್ಣವಿಮುಕ್ತಿ ಸಾಧಿಸಿದ್ದಾನೆ. ಆದ್ದರಿಂದಾಗಿ ಮಾತೃಹತ್ಯೆ ಮತ್ತು ಪಿತೃಹತ್ಯೆ ಯಾರೂ ಮಾಡಬಾರದು. ಅದು ಅತ್ಯಂತ ಭೀಕರ ಕರ್ಮಫಲ ನೀಡುತ್ತದೆ. ಹಾಗೆಯೇ ನಿರಪರಾಧಿಗಳ ಮೇಲೆ ಹಿಂಸೆ ಮಾಡುವವರು ಮುಂದೆ ವಿಕೋಪ ಸ್ಥಿತಿಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿ ಈ  ಗಾಥೆಗಳನ್ನು ನುಡಿದರು. 

"ಯಾರು ಮುಗ್ಧರಾದ, ದಂಡಿಸಬಾರದವರನ್ನು ದಂಡಶಸ್ತ್ರಗಳಿಂದ ಹಿಂಸಿಸುವನೋ, ತಪ್ಪು ಮಾಡದವರನ್ನು ನೋಯಿಸುವನೋ, ಅಂತಹವನು ಶೀಘ್ರದಲ್ಲೇ ಈ ಹತ್ತು ಸ್ಥಿತಿಗಳಲ್ಲಿ ಒಂದನ್ನು ಪಡೆಯುತ್ತಾನೆ. (137)

ಆತನು ತೀಕ್ಷ್ಣವಾದ ನೋವು, ಮಹಾದುರಂತ, ಶಾರೀರಿಕ ತೀವ್ರಗಾಯ ಅಥವಾ ಕಡುಕಾಯಿಲೆ ಅಥವಾ ಚಿತ್ತ ನಿಯಂತ್ರಣ ತಪ್ಪಿ ಹುಚ್ಚನಾಗುವಿಕೆ, ಅಥವಾ ಸಕರ್ಾರದಿಂದ ರಾಜನಿಂದ ದಂಡನೆ ಅಥವಾ ಘೋರ ಆಪಾದನೆ ಅಥವಾ ಬಂಧು ಬಳಗದವರ ಸಾವು, ಐಶ್ವರ್ಯವೆಲ್ಲಾ ನಾಶವಾಗುವಿಕೆ ಅಥವಾ ಮಹಾ ಅಗ್ನಿಯ ಆಹುತತೆ ಹಾಗು ಸಾವಿನ ನಂತರ ಅಂತಹ ದುಪ್ರಜ್ಞನು ನಿರಯದಲ್ಲಿ ಹುಟ್ಟುತ್ತಾನೆ." (138, 139, 140)

 

Tuesday 31 August 2021

ಪೋಷಕರು ಮತ್ತು ಮಕ್ಕಳು parents and children by Most Venerable bhikkhu Narada Maha Thera

                       ಪೋಷಕರು ಮತ್ತು ಮಕ್ಕಳು

(ಈ ಲೇಖನವನ್ನು ನನ್ನ ಮಾನಸ ಗುರುಗಳಾದ ಪರಮಪೂಜ್ಯ ನಾರದ ಮಹಾ ಥೇರರಿಂದ ರಚಿಸಲ್ಪಟ್ಟಿದೆ. ಇದನ್ನು ಅನುವಾದಿಸಲು ಅವಕಾಶ ದೊರೆತಿದ್ದು ನನ್ನ ಪುಣ್ಯ ಎಂದು ಭಾವಿಸುವೆ.)



 


ಪುಣ್ಯದ ನಾಲ್ಕು ಕ್ಷೇತ್ರಗಳಿವೆ ಎಂದು ಬುದ್ಧರು ಹೇಳುತ್ತಾರೆ. ಅವೆಂದರೆ 

1) ಬುದ್ಧ ಭಗವಾನರು 

2) ಅರಹಂತರು

  3) ತಾಯಿ ಮತ್ತು 

4) ತಂದೆ.

ಬುದ್ಧರು ಮಾನವತೆಗೆ ಅನುಪಮ ಪುಷ್ಟವಾಗಿದ್ದಾರೆ.  ಅವರು ಅಪರೂಪಕ್ಕೊಮ್ಮೆ ಈ ಜಗದಲ್ಲಿ ಹುಟ್ಟಿ ಬರುತ್ತಾರೆ.  ಅಂತಹ ಬುದ್ಧ ಯುಗದಲ್ಲಿ ಸಂತಶಿಷ್ಯರು ಅಭಿವೃದ್ಧಿ ಹೊಂದುತ್ತಾರೆ.  ಅರಹಂತರು ಸಹಾ ವಿರಳವೆ.  ಬುದ್ಧರ ಸನ್ನಿಹದಲ್ಲಿ ಬಹುಪಾಲು ಅರಹಂತರಾದರೂ ನಂತರ ಅಪರೂಪಕ್ಕೊಮ್ಮೆ ಯಾರಾದರೂ ಅತಿ ನಿಷ್ಟರು ಅರಹಂತ ರಾಗುತ್ತಾರೆ.  ಆದರೆ ದಯಾಮಯಿ ಮಾತರೆ ಮತ್ತು ವಾತ್ಸಲ್ಯ ಭರಿತ ತಂದೆ ಪ್ರತಿಯೊಬ್ಬ ಮನೆಯಲ್ಲೂ ಇರುತ್ತಾರೆ.  ಖಂಡಿತವಾಗಿಯೂ ಅವರು ಫಲವತ್ತಾದ ಪುಣ್ಯಭೂಮಿ ಆಗಿದ್ದಾರೆ.  ಯಾರಿಗೆಂದರೆ ಕೃತಜ್ಞತೆಯುಳ್ಳ ಮತ್ತು ಕರ್ತವ್ಯಶೀಲ ಮಕ್ಕಳಿಗೆ ಪುಣ್ಯನಿಧಿಯಾಗಿದ್ದಾರೆ.  ಈ ಪುಣ್ಯ ಕ್ಷೇತ್ರದಲ್ಲಿ ಸ್ವಲ್ಪವನ್ನು ಬಿತ್ತಿದರೂ ಅಪಾರ ಫಲರಾಶಿಯು ಸಿಗುವುದು.  ಯಾರ ಮನೆಯಲ್ಲಿ ತಂದೆ ತಾಯಿಯರಿಗೆ ಅಕ್ಷಯ ಭಕ್ತಿ ನೀಡುತ್ತಿರುವರೋ ಮತ್ತು ಅಪಾರ ಕೃತಜ್ಞತೆ ತೋರುತ್ತಿರುವರೋ ಅಂತಹ ಮಗ ಅಥವಾ ಮಗಳು ಧನ್ಯರೇ ಸರಿ.

ಬುದ್ಧರ ಪ್ರಕಾರ ಮಕ್ಕಳು ತಮ್ಮ ತಾಯಿಗಳಿಗೆ ಅಪಾರ ಚಿರಋಣಿ ಗಳಾಗಿರುತ್ತಾರೆ. ಅವರು ತಮ್ಮ ತಂದೆ ತಾಯಿಗಳಿಗೆ ಹೆಗಲಲ್ಲಿ ಹೊತ್ತುಕೊಂಡು ನೂರು ವರ್ಷಗಳ ಕಾಲ ಅವರ ಸೇವೆ ಮಾಡಿದರೂ ಸಹಾ ಅವರ ಋಣವನ್ನು ತಾವು ತೀರಿಸಲು ಸಾಧ್ಯವಾಗುವುದಿಲ್ಲ.  ಅಷ್ಟೇ ಅಲ್ಲ, ಅವರು ತಮ್ಮ ತಂದೆ ತಾಯಿಯರನ್ನು ರತ್ನಗಳ ರಾಶಿಯಲ್ಲಿ ಕುಳ್ಳಿರಿಸಿದರೂ ಇಡೀ ಜಗತ್ತಿನ ಸಾರ್ವಭೌಮತ್ವವನ್ನು ನೀಡಿದರೂ ಸಹಾ ಅವರಿಗೆ ಋಣಿ ಗಳಾಗಿಯೇ ಇರುತ್ತಾರೆ. 

ದರ್ಮಗೃಂಥಗಳಲ್ಲಿ ಒಂದೆಡೆ ಹೀಗೆ ಹೇಳಲ್ಪಟ್ಟಿದೆ. ಒಬ್ಬ ಧರ್ಮಗುರು, ನೂರು ಸಾಧಾರಣ ವಿದ್ಯೆಗಳ ಗುರುಗಳಿಗೆ ಸಮ, ಒಬ್ಬ ತಂದೆ ನೂರು ಧರ್ಮಗುರುಗಳಿಗೆ ಸಮ, ಆದರೆ ಒಬ್ಬ ತಾಯಿಯು ನೂರು ತಂದೆಗಳಿಗೆ ಸಮ.

ಏಕೆ ಸನಾತನ ಗುರುಗಳು ತಂದೆ ತಾಯಿಗಳಿಗೆ ಈ ರೀತಿ ಅತಿಯಾಗಿ ಹೊಗಳುತ್ತಾರೆ ಎಂದು ಆಶ್ಚರ್ಯವಾಗಬಹುದು.  ಆದರೆ ಇದಕ್ಕೆ ಕಾರಣಗಳೂ ಸಹಾ ಇವೆ.  ತರ್ಕಕ್ಕೆ ಅವು ಹೊರತಾದುದು ಅಲ್ಲ.  ತಂದೆಯು ಅಪಾರ ಕರುಣಾಭರಿತರಾಗಿ ತಮಗೆ ಸಾಧ್ಯವಾಗುವ ಮಟ್ಟಿಗೆ ತಮ್ಮದೆಲ್ಲವನ್ನು ಅಪರ್ಿಸುತ್ತಾರೆ.  ಅವರು ತಮ್ಮ ಹಿತಾಸುಖಗಳೆಲ್ಲವನ್ನು ಮರೆತು, ಮಕ್ಕಳ ಬಗ್ಗೆಯೆ ಚಿಂತಿಸುತ್ತಾರೆ ಹಾಗೂ ದುಡಿಯುತ್ತಾರೆ.  ಅವರು ತಾವು ಕಷ್ಟಪಟ್ಟು ಸಂಪಾದಿಸಿದ ಐಶ್ವರ್ಯವೆಲ್ಲಾ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧಾರಾಳವಾಗಿ ಸುರಿಯುತ್ತಾರೆ.  ಅವರ ಏಕೈಕ ಗುರಿಯೆಂದರೆ ಮಕ್ಕಳ ಉನ್ನತಿಯನ್ನು ಕಾಣುವುದು ಮತ್ತು ಮಕ್ಕಳ ಸುಖ ಶಾಂತಿಯನ್ನು ಕಾಣುವುದೇ ಆಗಿದೆ.  ಕರುಣಾಮಯಿ ಮಾತೆಯರು ತಮ್ಮ ಮುದ್ದು ಮಗುವಿಗಾಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.  ಅದು ಆ ಮಗುವಿನ ಮುಖ ದರ್ಶನಕ್ಕೆ ಮೊದಲೇ ಜೀವ ಬಿಟ್ಟಿರುತ್ತಾರೆ.  ಅವರು ತಮ್ಮ ಮಕ್ಕಳಿಗೆ ತಮ್ಮ ರಕ್ತವನ್ನು ನೀಡಿ ಘೋಷಿಸುತ್ತಾರೆ.  ಎಷ್ಟೋ ರಾತ್ರಿಗಳನ್ನು ನಿದ್ರೆಯಿಲ್ಲದೆ ಮಕ್ಕಳಿಗಾಗಿ ಎಚ್ಚರವಾಗಿದ್ದು ಕಾಪಾಡುತ್ತಾರೆ.  ಮಕ್ಕಳಿಗೆ ರೋಗ ಬಂದರೆ ಅವರಿಗೆ ಆರೈಕೆ ಮಾಡುತ್ತಾರೆ.  ಮಕ್ಕಳ ನೋವು ಅವರ ನೋವು ಆಗಿರುತ್ತದೆ.  ಮಕ್ಕಳ ಸುಖ ಅವರ ಸುಖ ಆಗಿರುತ್ತದೆ.  ಮಕ್ಕಳೇ ಅವರ ಪಾಲಿಗೆ ಸರ್ವಸ್ವವಾಗಿರುತ್ತಾರೆ, ಅವರ ಭಾಗವಾಗಿರುತ್ತಾರೆ. ಅವರ ಪಾಲಿಗೆ ಅನರ್ಘ ಐಶ್ವರ್ಯವಾಗಿರುತ್ತಾರೆ.  ಮಕ್ಕಳ ಹೊರತು ಅವರು ದುಃಖಿಗಳಾಗಿರುತ್ತಾರೆ, ಶೋಕದಿಂದ ಇರುತ್ತಾರೆ.  

ಪಾಲಕರ ಈ ವಾತ್ಸಲ್ಯಕ್ಕೆ ಪ್ರತಿಯಾಗಿ ನೀಡುವಂತಹದು ಏನಾದರೂ ಇದೆಯೇ? ಹೌದು ಖಂಡಿತವಾಗಿದೆ. ಏನೆಂದರೆ ತಂದೆ ತಾಯಿಯವರನ್ನು ಪಾಪದಿಂದ ಪಾರಾಗಲು ಪ್ರೋತ್ಸಾಹಿಸುವುದು ಮತ್ತು ಪುಣ್ಯ ಕಾರ್ಯಗಳನ್ನು ಮಾಡುವಂತೆ ಸ್ಫೂತರ್ಿ ನೀಡುವುದು.  ಹಾಗು ನಾವು ಸಹಾ ಪುಣ್ಯ ಮಾಡುವುದು, ಒಳ್ಳೆಯವರಾಗಿರುವುದು ಮತ್ತು ಆದರ್ಶ ಭೌತಿಕ ಸವಲತ್ತುಗಳನ್ನು ಸುಖಗಳನ್ನು ನೀಡುವುದಷ್ಟೇ ಅಲ್ಲ, ಅವರಿಗೆ ಪರಿಚಯವಿಲ್ಲದ ಧಾಮರ್ಿಕ ಐಶ್ವರ್ಯವನ್ನು ನೀಡಬೇಕಾಗಿದೆ. 

ಆದ್ದರಿಂದ ಓ ಸುಚಾರಿತ್ರ್ಯ ಮಕ್ಕಳೇ, ಸದಾ ನಿಮ್ಮ ತಂದೆ ತಾಯಿಗಳಿಗೆ ವಿಧೇಯರಾಗಿ, ಅವರೇ ನಿಮ್ಮ ಶ್ರೇಷ್ಠ ಸರ್ವಸ್ವ, ರಾಜರಿಗೆ ಗೌರವಿಸಿ ಮತ್ತು ಎಂದಿಗೂ ಅವರ ಭಾವನೆಗಳಿಗೆ ನೋವಾಗದ ಹಾಗೆ ನಡೆದುಕೊಳ್ಳಿ.  ಅವರಿಗೆ ವರವಾಗಿ ಮತ್ತು ಎಂದಿಗೂ ಶಾಪವಾಗದಿರಿ.  ನಿಮ್ಮ ಸುಚ್ಚಾರಿತ್ರ್ಯದಿಂದ ಅವರ ಘನತೆಯನ್ನು ಉಳಿಸಿ, ಬೆಳೆಸಿ, ನಿಮ್ಮ ನಡವಳಿಕೆಯಿಂದ ನೀವು ಅರ್ಹ ತಂದೆತಾಯಿಗಳಿಗೆ ಅರ್ಹ ಮಕ್ಕಳು ಎಂದು ತೋರಿಸಿ, ವಿಶೇಷವಾಗಿ ಅವರ ಅನುಪಸ್ಥಿತಿಯಲ್ಲಿ ಅಂದರೆ ಅವರ ಮರಣದ ನಂತರವೂ ಅವರ ಗೌರವಯುತ ಹೆಸರಿಗೆ ಭಂಗ ತರಬೇಡಿ.  

ವಾತ್ಸಲ್ಯಭರಿತ ತಂದೆ

ಮಕ್ಕಳು ಬಹಳಷ್ಟು ಬಾರಿ ತಮ್ಮ ಪೋಷಕರ ತ್ಯಾಗ ಮತ್ತು ವಾತ್ಸಲ್ಯದ ಹೊಳೆಯನ್ನು ಅರಿಯಲಾರರು.  ಮಕ್ಕಳ ಭಕ್ತಿಗಿಂತ ತಾಯ್ತಂದೆಯರ ವಾತ್ಸಲ್ಯವೇ ಶ್ರೇಷ್ಠವಾದದು.  ಇದು ಸಹಜವೇ, ಒಬ್ಬನು ಅಪಕ್ವ ಅನನುಭವಿ ಮಕ್ಕಳಿಂದ ಪೋಷಕರಿಂದ ಕರ್ತವ್ಯಭರಿತ ವಾತ್ಸಲ್ಯವನ್ನು ನಿರೀಕ್ಷಿಸಲಾಗವುದಿಲ್ಲ.  ಆ ಮಕ್ಕಳು ತಾವು ತಾಯಿ ಅಥವಾ ತಂದೆ ಆದಾಗ ಮಾತ್ರ ಅವರು ಪೋಷಕರ ವಾತ್ಸಲ್ಯ ಏನು ಎಂಬುದನ್ನು ಅರಿಯುತ್ತಾರೆ.  ಇದಕ್ಕೆ ಉದಾಹರಣೆಯಾಗಿ ಈ ಚಿತ್ತಾಕರ್ಷಕ ಘಟನೆಯನ್ನು ನೋಡಿ.

ರಾಜಕುಮಾರ ಅಜಾತಶತ್ರುವು ದೇವದತ್ತ ಥೇರನ ದುಬರ್ೊಧನೆಗೆ ವಶವಾಗಿ ತನ್ನ ತಂದೆಗೆ ಕೊಲ್ಲಲು ಪ್ರಯತ್ನಿಸಿ, ಸಿಂಹಾಸನ ಕಬಳಿಸಲು ಸಂಚು ಹೂಡಿದನು.  ಆದರೆ ಸಾಕ್ಷಿ ಸಮೇತ ಸಿಕ್ಕಿಹಾಕಿಕೊಂಡುಬಿಟ್ಟನು.  ಆದರೆ ವಾತ್ಸಲ್ಯಭರಿತ ತಂದೆ ಆತನ ಹೇಯಕೃತ್ಯಕ್ಕೆ ಶಿಕ್ಷಿಸುವ ಬದಲು ಆತನಿಗೆ ರಾಜ್ಯವನ್ನು ನೀಡಿ ಕಿರೀಟಧಾರಣೆ ಮಾಡಿದನು. 

ಆದರೆ ಕೃತಘ್ನ ರಾಜಕುಮಾರನು ತನ್ನ ತಂದೆಗೆ ಕೃತಜ್ಞತೆ ಅಪರ್ಿಸುವ ಬದಲು ತನ್ನ ತಂದೆಗೆ ಆಹಾರ ನೀಡದೆ ಕಾರಾಗೃಹ ಶಿಕ್ಷೆ ವಿಧಿಸಿದನು.  ಆದರೆ ತಾಯಿಗೆ ಮಾತ್ರ ಭೇಟಿ ಮಾಡಲು ಅವಕಾಶ ನೀಡಿದನು.  ಪತಿವ್ರತೆ ಸಂಪನ್ನಳಾದ ರಾಣಿಯು ತನ್ನ ವಸ್ತ್ರದಲ್ಲಿ ಆಹಾರನ್ನು ಅಡಗಿಸಿಕೊಂಡು ಹೋಗುತ್ತಾ ತನ್ನ ಪತಿಗೆ ಆಹಾರ ನೀಡುತ್ತಿದ್ದಳು.  ಇದಕ್ಕೂ ಅಜಾತಶತ್ರು ವಿರೋಧ ವ್ಯಕ್ತಪಡಿಸಿದನು.  ನಂತರ ಆಕೆ ತನ್ನ ಪತಿಗೆ ತನ್ನ ಜಡೆಯಲ್ಲಿ ಆಹಾರವನ್ನು ಅಡಗಿಸಿಕೊಂಡು ನೀಡುತ್ತಿದ್ದಳು.  ಇದಕ್ಕೂ ಭೀಕರವಾಗಿ ಅಜಾತಶತ್ರು ಪ್ರತಿಭಟಿಸಿದನು.  ನಂತರ ಆಕೆ ಸುಗಂಧಿತ ನೀರಿನಿಂದ ತನ್ನ ದೇಹವನ್ನು ಸ್ಮಾನ ಮಾಡಿಕೊಂಡು ಜೇನು, ಬೆಣ್ಣೆ, ತುಪ್ಪ, ಕಾಕಂಬಿಗಳ ಮಿಶ್ರಣವನ್ನು ತನ್ನ ಚರ್ಮಕ್ಕೆ ಲೇಪಿಸಿಕೊಂಡು ತನ್ನ ಪತಿಯ ಬಳಿ ಹೋಗುತ್ತಿದ್ದಳು.  ಆಗ ಪತಿಯು ಆಕೆಯ ಶರೀರವನ್ನು ನೆಕ್ಕಿ ತನ್ನ ಜೀವವನ್ನು ರಕ್ಷಿಸಿಕೊಳ್ಳುತ್ತಿದ್ದನು.  ಈ ವಿಷಯ ಪತ್ತೆಹಚ್ಚಿದ ಅಜಾತಶತ್ರುವು ತನ್ನ ತಾಯಿಗೆ ತನ್ನ ತಂದೆಯ ಬಳಿ ಹೋಗದಂತೆ ನಿರ್ಬಂಧ ಮಾಡಿದನು.  

ಆದರೆ ತಂದೆಯಾದ ರಾಜ ಬಿಂಬಸಾರನು ಅದಕ್ಕಾಗಿ ಯಾವ ವ್ಯಥೆಯು ಪಡದೆ ನಡೆದಾಡುವ ಧ್ಯಾನ ಮಾಡುತ್ತಾ ಧರ್ಮಸುಖದಲ್ಲಿ ತಲ್ಲೀನನಾಗಿ ಸೋತಾಪನ್ನ ಸ್ಥಿತಿ ಪ್ರಾಪ್ತಿ ಮಾಡಿದನು.  ಕೊನೆಗೆ ನೀಚನಾದ ಅಜಾತಶತ್ರು ತನ್ನ ತಂದೆಯನ್ನು ಕೊಲ್ಲಲು ನಿರ್ಧರಿಸಿದನು.  ಅತ್ಯಂತ ಕ್ರೂರಿಯಾದ ಆತನು ತನ್ನ ಕ್ಷೌರಿಕನಿಗೆ ತನ್ನ ತಂದೆಯ ಅಂಗಾಲನ್ನು ಸೀಳಿಸಿ ಅದಕ್ಕೆ ಉಪ್ಪು ಹಾಗು ಎಣ್ಣೆ ಹಾಕಿಸಿ ಕೆಂಡಗಳ ಅಗ್ನಿಯಲ್ಲಿ ನಡೆಯಲು ಆಜ್ಞೆ ಮಾಡಿಸಿದನು. 

ಬಿಂಬಸಾರನು ಕ್ಷೌರಿಕನನ್ನು ಕಂಡು ಈ ರೀತಿ ಯೋಚಿಸಿದನು, ಓ ನನ್ನ ಮಗ ತನ್ನ ಮೂರ್ಖತನವನ್ನು ಅರಿತು ನನಗೆ ಬಿಡುಗಡೆ ಮಾಡಲು ಮತ್ತು ಕ್ಷೌರ ಮಾಡಿಸಲು ಈತನಿಗೆ ಕಳುಹಿಸಿದ್ದಾನೆ ಎಂದು ಆನಂದಿಸಿದನು.  ಆದರೆ ಆತನ ಇಚ್ಛಗೆ ವಿರುದ್ಧವಾಗಿ, ರಾಜಕುಮಾರನ ಆಜ್ಞೆಯಂತೆ ಆ ಕ್ರೂರ ಕ್ಷೌರಿಕ ಸಹಾ ಆ ಹೀನ ಕೃತ್ಯವನ್ನು ಮಾಡಿದನು.  ವಾತ್ಸಲ್ಯವುಳ್ಳ ಆ ತಂದೆ ಮೃತ್ಯವಶವಾದನು.  ಅದೇ ವೇಳೆಯಲ್ಲಿ ಅಜಾತಶತ್ರುವಿಗೆ ಮಗ ಹುಟ್ಟಿದನು.  ಈ ಎರಡು ಘಟನೆಗಳ ಪತ್ರಗಳು ಏಕಕಾಲದಲ್ಲಿ ಅರಮನೆಗೆ ಮುಟ್ಟಿದವು.

ಮೊದಲು ಆತನ ಸುಖದ ವಾತರ್ೆ ಓದಿದನು, ಆಗ ಅಜಾಶತ್ರುವಿನಲ್ಲಿ ವಾತ್ಸಲ್ಯ ಹುಟ್ಟಿತು.  ತನ್ನ ಪುತ್ರನ ಮೇಲೆ ಅತಿ ಪ್ರೀತಿ ಉಂಟಾಗಿ ಆನಂದಭರಿತನಾದನು.  ಆ ಸುಖವು ಆತನ ನರನಾಡಿಗಳಲ್ಲೆಲ್ಲಾ ಹಬ್ಬಿತು. ತಕ್ಷಣ ಆತನಿಗೆ ತಂದೆಯ ಪ್ರೀತಿ ಜ್ಞಾಪಕಕ್ಕೆ ಬಂದು ಓಡಿ ಮತ್ತು ನನ್ನ ತಂದೆಯನ್ನು ಬಿಡುಗಡೆ ಮಾಡಿ ಎಂದು ಕಿರುಚಿದನು.  ಆದರೆ ತಂದೆ ಎಂದೋ ಕಣ್ಮುಚ್ಚಿದ್ದನು. ಆಗ ಆತನಿಗೆ ದುವರ್ಾತೆಯ ಪತ್ರವನ್ನು ನೀಡಲಾಯಿತು.  ತಕ್ಷಣ ಅದನ್ನು ಓದಿ ತಾಯಿ ಬಳಿಗೆ ಓಡಿಬಂದನು, ಹಾಗು ಪ್ರಶ್ನಿಸಿದನು ಅಮ್ಮ ನಾನು ಬಾಲಕನಾಗಿದ್ದಾಗ ನನ್ನ ತಂದೆ ನನಗೆ ಪ್ರೀತಿಸಿದ್ದರೆ?

ಎಂತಹ ಪ್ರಶ್ನೆಯನ್ನು ಕೇಳುತ್ತಿದ್ದೀಯಾ ಮಗು, ನೀನು ಗರ್ಭದಲ್ಲಿರುವಾಗಲೇ ನಿನ್ನ ತಂದೆಯ ಬಲಗೈಯ ರಕ್ತ ಕುಡಿಯಲು ನನಗೆ ಬಯಕೆಯಾಗುತ್ತಿತ್ತು.  ಆದರೆ ನಾನು ಕೇಳಲು ಧೈರ್ಯ ಮಾಡಲಿಲ್ಲ.  ಪರಿಣಾಮವಾಗಿ ನಾನು ಕೃಶಳಾದೆ, ಕೊನೆಗೆ ನನಗೆ ಒತ್ತಾಯಿಸಲು ನಾನು ನಿಜವನ್ನು ನುಡಿದೆ.  ಆದರೆ ನಿನ್ನ ತಂದೆ ಸಂತೋಷವಾಗಿ ಆ ಆಸೆ ಪೂರೈಸಿದರು.  ನಂತರ ಜ್ಯೋತಿಷಿಗಳು ನೀನು ನಿನ್ನ ತಂದೆಯ ಶತ್ರುವಾಗುವೆ ಎಂದು ಭವಿಷ್ಯ ನುಡಿದರು, ಆಗ ನಿನ್ನ ಹೆಸರನ್ನು ಅಜಾತಶತ್ರು ಎಂದು ನಾಮಕರಣ ಮಾಡಲಾಯಿತು. (ಜಾತ-ಹುಟ್ಟುವುದಕ್ಕೆ ಮುಂಚೆಯೇ ಶತ್ರು-ಅಜಾತಶತ್ರು) ನಾನು ಆಗ ಗರ್ಭಪಾತ ಮಾಡಿಕೊಳ್ಳಲು ಬಯಸಿದೆ.  ಆಗ ನಿನ್ನ ತಂದೆಯೇ ಅದನ್ನು ತಡೆದರು.  ನೀನು ಹುಟ್ಟಿದ ನಂತರವು ನಾನು ನಿನ್ನನ್ನು ಕೊಲ್ಲಲು ಇಷ್ಟಪಟ್ಟೆ, ಆದರೆ ನಿನ್ನ ತಂದೆಯೆ ತಡೆದರು.  ಇನ್ನೊಂದು ಘಟನೆ ಹೇಳುವೆ ಕೇಳು. ನೀನು ಬಾಲಕನಾಗಿದ್ದಾಗ ನಿನ್ನ ಬೆರಳಿಗೆ ಬೊಬ್ಬೆ ಎದ್ದು ನೀನು ಅಪಾರ ನೋವು ಅನುಭವಿಸುತ್ತಿದ್ದೆ.  ಯಾರು ನಿನಗೆ ಮಲಗಿಸಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ, ಆದರೆ ನಿನ್ನ ತಂದೆ ರಾಜಾಸ್ಥಾನದಲ್ಲಿ ನಿನ್ನನ್ನು ಮಡಿಲಲ್ಲಿ ಇಟ್ಟುಕೊಂಡು ನಿನಗೆ ಸಮಾಧಾನ ನೀಡುತ್ತಿದ್ದರು.  ಆಗ ಬಾಯಿಯಲ್ಲೆ ನಿನ್ನ ಗಾಯ ಒಡೆದು ರಕ್ತ, ಕೀವು ಬಾಯಿಯಲ್ಲೆ ಹರಿಯಿತು.  ಮಗೂ....ಆ ರಕ್ತ ಮತ್ತು ಕೀವುವನ್ನು ನಿನ್ನ ಮೇಲಿನ ಅಕ್ಕರೆಯಿಂದ ನಿನ್ನ ತಂದೆ ಆನಂದದಿಂದ ನುಂಗಿದರು ಎಂದು ತಾಯಿ ನುಡಿದಾಗ... ಅಜಾತಶತ್ರು ಕಣ್ಣೀರನ್ನು ಹಾಕಿಕೊಂಡನು.

ಪ್ರೀತಿಯ ಮಕ್ಕಳೇ, ಆತನ ಭಾವನೆಗಳನ್ನು ನೀವು ಚೆನ್ನಾಗಿ ಕಲ್ಪಸಿಕೊಳ್ಳುತ್ತೀರಿ. 

ಪೋಷಕರು ಎಲ್ಲಾ ಸನ್ನಿವೇಶಗಳಲ್ಲಿ ಮಗುವಿನ ಆಂತರಿಕ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುತ್ತಾ ಇರುತ್ತಾರೆ. ಏಕೆಂದರೆ ಅಂತಹವನ್ನೆಲ್ಲಾ ಅವರು ದಾಟಿ ಬಂದಿದ್ದಾರೆ.  ಆದ್ದರಿಂದಲೇ ಅವರು ಮಗುವಿನ ತಪ್ಪುಗಳಲ್ಲಿ ಸಹಾನುಭೂತಿ ಮತ್ತು ಕ್ಷಮೆಯನ್ನು ತೋರುತ್ತಾರೆ.  ಅವರು ಸದಾ ತಮ್ಮ ಮಕ್ಕಳ ತಪ್ಪುಗಳನ್ನು ಕ್ಷಮಿಸಿ ಸಹಿಸಿಕೊಳ್ಳುತ್ತಾರೆ.  ಅರಿತೋ ಅಥವಾ ಅರಿಯದೆಯೋ ಮಕ್ಕಳು ಅವರು ಭಾವನೆಗಳಿಗೆ ನೋಡು ತರುತ್ತಾರೆ.  ಕೆಲವು ಸಾರಿ ಅಪಾರ್ಥಕ್ಕೆ ಒಳಗಾಗಿ ಪೋಷಕರ ಮೇಲೆ ಕೃತಘ್ನರಾಗುತ್ತಾರೆ.  ತಮ್ಮ ದಡ್ಡತನದ ಅಸಹನೆಯಿಂದ ಅವರು ದುಃಖವನ್ನು ತರುತ್ತಾರೆ.  ಅವರು ಒಳಿತಿಗೆ ಹಾಕಿದ ಗೆರೆಯನ್ನು ಮೀರಿ ನಡೆಯುತ್ತಾರೆ.  ಎಲ್ಲರೀತಿಯ ಇಕ್ಕಟ್ಟಿನಲ್ಲೂ, ಲೋಪದಲ್ಲೂ, ಅಧಿಕಾರದಲ್ಲೂ, ತಪ್ಪುಗಳಲ್ಲೂ ಸಹಾನುಭೂತಿಯ ಪೋಷಕರು ಕ್ಷಮಿಸುತ್ತಾರೆ.  ಕಷ್ಟಗಳಲ್ಲಿದ್ದಾಗ ಅವರು ಕೇಳದಿದ್ದರೂ ತಾವೇ ಬಂದು ಸಹಾಯ ಮಾಡುತ್ತಾರೆ.  ಪ್ರತಿಕೂಲ ಸಂದರ್ಭವಿದ್ದಾಗ ಪರೋಕ್ಷವಾಗಿಯಾದರೂ ಸಹಾಯ ಮಾಡುತ್ತಾರೆ. 

ಅಂತಹ ಪರೋಪಕಾರ ಪ್ರವೃತ್ರಿಯು ದಯಾ ಮತ್ತು ಜ್ಞಾನಿಗಳಾದ ಪೋಷಕರಲ್ಲಿರುತ್ತದೆ.

ಆದರೆ ಮಕ್ಕಳು ತಮ್ಮ ಪೋಷಕರ ವೇದನೆಗಳನ್ನು ಅರ್ಥಮಾಡಿಕೊಂಡು ತಮ್ಮ ತಾಯ್ತಂದೆಯರಲ್ಲಿ ಕರ್ತವ್ಯಬದ್ಧರಾಗುವರೆ ?

ಅವರು ಪೋಷಕರಾಗುವವರೆಗೂ ಇದು ಅಸಾಧ್ಯ, ಕೇವಲ ಪೋಷಕರೆ ವಾತ್ಸಲ್ಯಭಾವ ಅರ್ಥಮಾಡಿಕೊಳ್ಳಲು ಸಾಧ್ಯ.  ಅಜಾತಶತ್ರುವೇ ಇದಕ್ಕೆ ಉದಾಹರಣೆ.  ಹಾಗೆಯೆ ಮಕ್ಕಳು ತಮ್ಮ ಕರ್ತವ್ಯವನ್ನು ಚೆನ್ನಾಗಿ ಮಾಡುವಂತಾಗಲಿ.

ವಾತ್ಸಲ್ಯಭರಿತ ತಾಯಿ

ಸೋಣದಂಡ ಜಾತಕದಲ್ಲಿ ಬೋದಿಸತ್ವರು ತಾಯಿಯ ಸದ್ಗುಣಗಳ ಬಗ್ಗೆ ಈ ಸುಂದರ ಗಾಥೆಗಳನ್ನು ಹಾಡಿದ್ದಾರೆ.

ಅನುಕಂಪಭರಿತಳು, ದಯಾಮಯಿ ತಾಯಿಯೇ

ನಮ್ಮ ಆಶ್ರಯವು, ನಮಗೆ ಹಾಲು ಉಣಿಸುವವಳು

ಸ್ವರ್ಗಕ್ಕೆ ದಾರಿಯು, ತಾಯಿಯೇ

ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುವವಳು

ಸಲಹುವವಳು, ರಕ್ಷಣೆ ನೀಡಿದವಳು ಮತ್ತು 

ಉತ್ತಮ ಉಡುಗೊರೆಗಳನ್ನು ನೀಡಿದವಳು

ಆಕೆಯ ಸುಗತಿಗೆ ಮಾರ್ಗ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸಿದವಳು

ಮಗುವಿಗಾಗಿ ಹಂಬಲಿಸುತ್ತಾ ಪ್ರತಿ ಪವಿತ್ರ ಸ್ಥಳಗಳಲ್ಲಿ ಶಿರಬಾಗಿದವಳು

ಪ್ರತಿ ಋತುಗಳಲ್ಲೂ ಲಾಲಿ ಹಾಡಿದವಳು

ಗಭರ್ಾವಸ್ಥೆಯಲ್ಲಿ ಪ್ರತಿ ಬೆಳವಣಿಗೆಯಲ್ಲೂ ಪ್ರಿಯ ವೇದನೆ ಅನೂಭವಿಸಿದವಳು, ನಂತರ ಮುಗ್ಧ ಮಗುವಿಗೆ ತನ್ನ ಮಿತ್ರ ಯಾರೆಂದು ತಿಳಿಯುತ್ತದೆ.  ತನ್ನ ಐಶ್ವರ್ಯವನ್ನು ತಾಯಿಯು ವರ್ಷಗಳವರೆಗೆ ಗಂಭೀರವಾಗಿ ಕಾಪಾಡುತ್ತಾಳೆ.  ನಂತರ ಮಗುವನ್ನು ಹೆಡೆದು ತಾಯಿಯ ಹೆಸರು ಪಡೆಯುತ್ತಾಳೆ. 

ಹಾಲು ಉಣಿಸುತ್ತಾ, ಲಾಲಿ ಹಾಡುತ್ತಾ, ಮಗುವನ್ನು

ಬೆಚ್ಚನೆಯ ಮಡಿಲಲ್ಲಿ ಸಮಾಧಾನಪಡಿಸುತ್ತಾ

ಗಾಳಿ ಅಥವಾ ಉಷ್ಣಗಳಿಂದ ಮಗುವನ್ನು ಕಾಪಾಡುತ್ತಾ

ತನ್ನ ಆರೋಗ್ಯವನ್ನು ಕ್ಷೀಣಿಸುತ್ತಾ

ಆಶೀವರ್ಾದಗಳನ್ನು ಹಾರೈಸುವಳು ಮಗುವನ್ನು.

ಯೋಚಿಸುವಳು ಒಂದು ದಿನ ನನ್ನ ಮುದ್ದು ಮಗುವೇ

ಇದು ನಿನಗೆ ಸಿಗುವುದು

ಇದನ್ನು ಮಾಡು ಇದನ್ನು ಮಾಡಬೇಡ ಎಂದು 

ಚಿಂತಿಸುವು, ರಾತ್ರಿ ನಿಧಾನವಾದರೆ ಏನಾಯಿತು 

ಏಕಿನ್ನು ಬರಲಿಲ್ಲ ಎಂದು ವ್ಯಾಕುಲ ಪಡುವಳು

ಹೀಗಿರುವ ತಾಯಿಯನ್ನು ಅಲಕ್ಷಿಸಬೇಕೆ ?

ಆತನು ನರಕವನ್ನೇ ಅಪೇಕ್ಷಿಸುತ್ತಿದ್ದಾನೆ.

ಯಾರು ತಾಯಿರನ್ನು ಕಡೆಗಣಿಸುತ್ತಾರೋ

ಆತನ ಐಶ್ವರ್ಯವೆಲ್ಲವೂ ನಾಶವಾಗುತ್ತದೆ.

ಯಾರು ತಂದೆಯನ್ನು ಅಲಕ್ಷಿಸುತ್ತಿದ್ದಾನೊ,

ಅದಕ್ಕಾಗಿ ಆತನು ಪಶ್ಚಾತ್ತಾಪ ಪಡುತ್ತಾನೆ.

ಅವರಿಗೆ ಸದಾ ಪ್ರಿಯವಚನ, ಉಡುಗೊರೆ,

ಗೌರವ ಆದರಗಳಿಂದ ಸಲಹಲಿ

ಸರ್ವಕಾಲಕ್ಕೂ ಸರ್ವ ಅವಸ್ಥೆಯಲ್ಲೂ

ಸರ್ವ ಸ್ಥಳಗಳಲ್ಲೂ ಗೌರವ ನೀಡಿಲಿ

ಶಾಂತತೆಯಿಂದಿರಲಿ, ಸಮದರ್ಶತ್ವದಿಂದಿರಲಿ,

ರಥದ ಚಕ್ರಕ್ಕೆ ಕೀಲು ಪ್ರಮುಖವಾಗಿರುವಂತೆ

ಜಗಕ್ಕೆ ಈ ಸದ್ಗುಣಗಳು ಇವೆ

ತಾಯಿಗೆ ಚಕ್ರವತರ್ಿನಿ ಎಂತೆ ಗೌರವಿಸಲಿ

ಮಾತೃಭಕ್ತಿಯುಳ್ಳವಗೆ ಋಷಿಗಳು ಗೌರವಿಸುವರು

ಆತನೇ ಮಾನವ

ಹೀಗಾಗಿ ಪೋಷಕರು ಸದಾ ಪ್ರಶಂಸನೀಯರು.

ಸನಾತನ ಸಂತರುಗಳು ತಾಯ್ತಂದೆಯರಿಗೆ

ಬ್ರಹ್ಮ (ಶ್ರೇಷ್ಟ ಎಂದರ್ಥ)ಎಂದು ಕರೆದರು.

ಅವರ ಸ್ಥಾನ ಅಷ್ಟು ಮೆರುವಿನಂತಹುದು.

ಕರುಣಾಳು ತಾಯ್ತಂದೆಯರು

ಮಕ್ಕಳಿಂದ ಸದಾ ಗೌರವ ಪಡೆವರು

ಯಾರು ಜ್ಞಾನಿಯೋ ಆತನು ತನ್ನ

ತಾಯ್ತಂದೆಯರಿಗೆ ಸದಾ ಗೌರವ ಸೇವೆ ಸಲ್ಲಿಸಲಿ.

ಅವರಿಗೆ ಆಹಾರ, ಪಾನಿಯ, ಹಾಸಿಗೆ ಸಿದ್ಧಪಡಿಸಲಿ

ಅವರಿಗೆ ಸ್ನಾನ ಮಾಡಿಸಲಿ, ಪಾದಗಳನ್ನು ತೊಳೆಯಲಿ

ಅಂತಹ ಸೇವೆಗಳನ್ನು ಸಂತರು ಸದಾ ಪ್ರಶಂಸಿಸುವರು.

ಅಂತಹವನು ಇಹದಲ್ಲಿ ಆನಂದ ಪರದಲ್ಲಿ

ಸುಗತಿ ಪಡೆಯುವನು                (ಜಾತಕ 173, 174)

ಮನೆಯಲ್ಲಿ ಅತ್ಯುತ್ತಮ ಮಿತ್ರನ್ಯಾರು

ಎಂದು ದೇವತೆಯೊಬ್ಬಳು ಕೇಳಿದ ಪ್ರಶ್ನೆಗೆ

ಬುದ್ಧರು ಈ ರೀತಿ ಉತ್ತರಿಸುವರು

ತಾಯಿಯೆ ಮನೆಯಲ್ಲಿ ಅತ್ಯುತ್ತಮ ಮಿತ್ರ.



ಪೋಷಕರ ಕರ್ತವ್ಯಗಳು

ಮಕ್ಕಳ ಕ್ಷೇಮವೇ ಪೋಷಕರ ಕರ್ತವ್ಯವಾಗಿದೆ.  ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಕರ್ತವ್ಯಭರಿತ ಮತ್ತು ವಾತ್ಸಲ್ಯಮಯಿ ತಾಯ್ತಂದೆಯರು ತಮ್ಮ ಹೆಗಲಲ್ಲಿ ಕರ್ತವ್ಯದ ಭಾರ ಸಂತೋಷವಾಗಿ ಹೊರುವರು.  ಹಾಗಿರುವಾಗಲು ಕೆಲವು ಕೃತಘ್ನ ಮಕ್ಕಳು ಕರುಣಾಮಯಿ ಪೋಷಕರ ಅಮೂಲ್ಯ ಸೇವೆಗಳನ್ನು ಮರೆತು, ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸುತ್ತಿದ್ದಾರೆ.  ತಮ್ಮ ಕರ್ತವ್ಯಗಳನ್ನು ಅಲಕ್ಷಿಸುತ್ತಿದ್ದಾರೆ.  ಆದರೂ ತಾಯಿ ತಂದೆಯರು ಮಕ್ಕಳಿಗೆ ಅವರು ಮನೆಯಲ್ಲಿ ಇದ್ದಾಗಲು ನಂತರ ಮನೆಬಿಟ್ಟು ಕುತಂತ್ರರಾದಾಗಲು ಸಹಾ ತಮ್ಮ ಕೈಲಾದ ಸಹಾಯ ಮಾಡುವರು. 

ಗರ್ಭದಿಂದ ಜನ್ಮದವರೆಗೂ ನಂತರ ಅವರು ವಿವಾಹವಾಗುವರೆಗೂ ಮಕ್ಕಳನ್ನು ಪೋಷಕರು ಅತ್ಯಂತ ಜಾಗರೂಕತೆಯಿಂದ ಸಲಹುವರು ಮತ್ತು ಆದರ್ಶ ಪುತ್ರರನ್ನಾಗಿ ಮಾಡುವರು.  

ಪೋಷಕರು ನಿಜವಾಗಿ ತಮ್ಮ ಮಕ್ಕಳನ್ನು ಆದರ್ಶ ಮಕ್ಕಳಾಗಿ ನೋಡಲು ಇಷ್ಟಪಡುತ್ತಾರೆ.  ಮಕ್ಕಳು ಪ್ರತಿಯೊಂದು ವಿಧದಲ್ಲೂ ತಮ್ಮನ್ನು ಅನುಕರಿಸಲಿ ಅಥವಾ ಮೀರಿಸಲಿ ಎಂದು ಅವರು ಆನಂದಿಸುವರು.  ಆದರೆ ಮಕ್ಕಳು ತಮಗಿಂತ ಕಡಿಮೆ ಮಟ್ಟದವರಾದಾಗ ಅವರಿಗೆ ದುಃಖವಾಗುತ್ತದೆ.  ಮಕ್ಕಳಿಗೆ ಸರಿಯಾದ ಮಾರ್ಗದಲ್ಲಿ ತರಲಿಚ್ಛಿಸುವ ತಂದೆತಾಯಿಗಳು ಮೊದಲು ತಾವು ಆದರ್ಶಯುತವಾದ ಜೀವನ ನಡೆಸಬೇಕು.  ಅನರ್ಹ ಪೋಷಕರಿಂದ ಅರ್ಹ ಪುತ್ರರನ್ನು ಅಪೇಕ್ಷಿಸುವುದು ಅಸಾಧ್ಯವಾಗಿದೆ.  ಹಿಂದಿನ ಜನ್ಮಗಳ ಕರ್ಮದ ಪ್ರವೃತ್ತಿಗಳನ್ನು ಮಕ್ಕಳು ವಂಶವಾಹಿಯಾಗಿ ಪಡೆದಿರುತ್ತಾರೆ ಹಾಗು ತಾಯ್ತಂದೆಯರ ಗುಣಗಳನ್ನು ಪಡೆಯುತ್ತಾರೆ.  ಹೊಣೆಗಾರಿಕೆಯ ತಾಯ್ತಂದೆಯರು ಯಾವುದೇ ರೀತಿಯ ಕಲ್ಮಶಗಳು ಮಕ್ಕಳಲ್ಲಿ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು.

ಸಿಗಾಲೊವಾದ ಸುತ್ತದಲ್ಲಿ ಪೋಷಕರಿಗೆ 5 ಬಗೆಯ ಕರ್ತವ್ಯಗಳಿರುತ್ತವೆ : 


1. ಪಾಪ ಮಾಡದಂತೆ ಮಕ್ಕಳನ್ನು ತಡೆಯುವುದು


ಮನೆಯೇ ಮೊದಲ ಶಾಲೆ ಮತ್ತು ಪೋಷಕರೇ ಮೊದಲ ಗುರುಗಳಾಗಿರುವರು.  ಮಕ್ಕಳು ಸಾಮಾನ್ಯವಾಗಿ ತಮ್ಮ ಪ್ರಾಥಮಿಕ ಪಾಠಗಳನ್ನು ತಮ್ಮ ಸ್ನೇಹಮಯಿ ಪೋಷಕರಿಂದಲೇ ಪಡೆಯುವವು; ಅಲಕ್ಷ್ಯವುಳ್ಳ ಪೋಷರು ನೇರವಾಗಿಯೇ ಅಥವಾ ಪರೋಕ್ಷವಾಗಿಯೋ ಮಕ್ಕಳು ಹೇಳುವ ಸುಳ್ಳಿಗೆ, ವಂಚನೆಗೆ, ಅಪ್ರಮಾಣಿಕತೆಗೆ, ಚಾಡಿ ಹೇಳುವಿಕೆಗೆ, ಸೇಡು, ಭಯ, ಇತ್ಯಾದಿ ಗುನಗಳಿಗೆ ಕಾರಣಕರ್ತರಾಗುತ್ತಾರೆ.  ಆದ್ದರಿಂದಾಗಿ ಮಕ್ಕಳ ಮನಸ್ಸಿನಲ್ಲಿ ಅಂತಹ ಕಲ್ಮಶಗಳು ಪ್ರಭಾವ ಬೀರಬಾರದೆಂದು ಇಚ್ಛಿಸಿದರೆ ತಾವು ಮೊದಲು ಆದರ್ಶ ಗುಣಗಳನ್ನು ಉದಾಹರಣೆಯಾಗಿ ತೋರಿಸಬೇಕು, ಪಾಲಿಸಬೆಕು. 

ಪೋಷಕರು ಯಾವ ರೀತಿಯಲ್ಲಿ ವತರ್ಿಸಬೇಕೆಂದರೆ ಮಕ್ಕಳು ಅವರ ಮೇಲೆ ನಿಸ್ಸಂಶಯ ಶ್ರದ್ಧೆಯಿಡಬೇಕು.   ಅವರು ಅವರಿಗೆ ಮೋಸ ಮಾಡಬಾರದು.  ಮಕ್ಕಳು ವಸ್ತುಗಳ ಮೇಲೆ ಆಸೆಪಟ್ಟು ಅಳುವಂತೆ ಪ್ರೋತ್ಸಾಹಿಸಬಾರದು.  ಮಕ್ಕಳು ಕೇಳುವ ಮುನ್ನವೇ ಅವರಿಗೆ ಅಗತ್ಯವಾದವುಗಳನ್ನು ನೀಡಿದಾಗ ಅದು ಅವರ ಮೇಲೆ ಉತ್ತಮ ಪ್ರಭಾವ ಬೀರುತ್ತದೆ.  ಜೊತೆಗೆ ಪೋಷಕರು ತಾವು ಹೊಂದಿರುವುದನ್ನು ನಿರಾಕರಿಸುವುದರ ಮೂಲಕ ದೊಡ್ಡ ತಪ್ಪು ಮಾಡುತ್ತಾರೆ ಮತ್ತು ಬೇರೆ ಅಣ್ಣ ಅಥವಾ ತಂಗಿಗೆ ಅದನ್ನು ನೀಡಿದಾಗ ಮಕ್ಕಳು ಸುಳ್ಳು ಮತ್ತು ಮೋಸದ ಪ್ರಥಮ ಪಾಠ ಕಲಿಯುತ್ತವೆ.  ಮುಂದೆ ಈ ಬಗೆಯ ಕುಖ್ಯಾತ ಕಲೆಗಳಲ್ಲಿ ನಿಸ್ಸೀಮರಾಗಿ ತಮ್ಮ ಗುರುಗಳನ್ನು ಮೋಸ ಮಾಡಿ, ಮೀರಿಸುತ್ತಾರೆ. 

ಸೇಡಿನ ಬಗ್ಗೆ ಏನನ್ನೋಣ ? ಅದು ಬಹಳಷ್ಟು ಬಾರಿ ಮನೆಯಲ್ಲೆ ಕಲಿಯುತ್ತಾರೆ.  ಬಹಳಷ್ಟು ಬಾರಿ ತಮ್ಮ ಸಹಾನುಭೂತಿಯು ತಾಯಿಯಿಂದಲೇ ಕಲಿಯುತ್ತಾರೆ.  ಮಗುವು ನೆಲದ ಮೇಲೆ ಬಿದ್ದಾಗ ಅಳುತ್ತದೆ, ತಾಯಿಯು ಓಡಿಬಂದು ಮಗುವನ್ನು ಎತ್ತಿ, ನೆಲಕ್ಕೆ ಕಾಲಿನಿಂದ ಒದ್ದಾಗ ಮಗು ಅಳು ನಿಲ್ಲಿಸುತ್ತದೆ. ಅದು ಸೇಡಿಗೆ ಸೇಡು ಎಂಬ ಪಾಠ ಕಲಿಯುತ್ತದೆ. 

ಮಕ್ಕಳನ್ನು ಭಯದ ವಾತಾವರಣದಲ್ಲಿ ಬೆಳೆಸಬಾರದು, ಅವು ಸ್ವಲ್ಪ ಅತ್ತರೆ ತೊಂದರೆಯಿಲ್ಲ.  ಆದರೆ ಭಯದಿಂದ ಅಳುವುದನ್ನು ನಿಲ್ಲಿಸುವುದು ಮಾಡಬಾರದು.  

ವಿಧೇಯತೆ, ಗೌರವ, ನಮ್ರತೆಗಳು ಭಯದಿಂದ ರಹಿತವಾಗಿರಬೇಕು.  ಬೌದ್ಧ ಧಮ್ಮದ ಪ್ರಕಾರ ಭಯವು ಅಜ್ಞಾನದಿಂದ ಉದಯಿಸುತ್ತದೆ.  ಒಬ್ಬನು ಪಾಪಕ್ಕೆ ಹೆದರಲಿ, ವ್ಯಕ್ತಿಗಲ್ಲ.  ಅನಗತ್ಯ ಭಯದಿಂದ ಮಕ್ಕಳು ಭೀತರಾಗುತ್ತಾರೆ ಮತ್ತು ಪರೋಕ್ಷವಾಗಿ ಕೀಳರಿಮೆಯಿಂದ ವ್ಯಕ್ತಿತ್ವವುಳ್ಳವರಾಗುತ್ತಾರೆ.  ಅವರು ಕತ್ತಲಿಗೆ ಮತ್ತು ಗೊತ್ತಿಲ್ಲದಂತಹ ಪ್ರತಿಯೊಂದಕ್ಕೂ ಹೆದರುತ್ತವೆ. ಅವರು ಒಂಟಿಯಾಗಿರಲು ಮತ್ತು ಒಂಟಿ ಹೋಗಲು ಹೆದರುತ್ತಾರೆ.

ಮಕ್ಕಳಿಗೆ ಧೈರ್ಯಶಾಲಿಗಳಾದ ರಾಜಕುಮಾರ ಪಂಚಾಯುಧರಾದ ದುಟುಗೆಮುನು ಮತ್ತು ರಾಜಕುಮಾರಿ ವಿಹಾರ, ಮಹಾದೇವಿಯರ ಕಥೆಗಳನ್ನು ಓದಿಸಿರಿ.

ರಾಜಕುಮಾರ ಪಂಚಾಯುಧ ಕೇವಲ 16 ವರ್ಷದ ಯುವಕ ಆದರೂ ಸಹಾ ಭಯಾನಕ ಯಕ್ಷನೊಂದಿಗೆ ಹೋರಾಡಲು ಹೆದರಲಿಲ್ಲ.  ರಾಜಕುಮಾರ ಕಾಡಿನಲ್ಲಿ ಪ್ರವೇಶಿಸಿದಾಗ ಪ್ರತಿಯೊಬ್ಬರು ಅಲ್ಲಿಗೆ ಹೋಗಬೇಡಿ ಎಂದು ಬುದ್ಧಿವಾದ ನೀಡಿದರು.  ಆಗ ರಾಜಕುಮಾರ ಈ ರೀತಿ ಉತ್ತರಿಸುವನು, ಒಳ್ಳೆಯದು, ಹಾಗಾದರೆ ನಾನು ಕೇವಲ ಒಮ್ಮೆ ಮಾತ್ರ ಸಾಯುತ್ತೇನೆ ಅವರು ಕಾಡಿನಲ್ಲಿ ಅಭಯರಾಗಿ ಹೋಗಿದ್ದು ಅಲ್ಲದೆ ಯಕ್ಷನನ್ನು ಗೆದ್ದರು. 

ರಾಜಕುಮಾರಿ ವಿಹಾರ ಮಹಾದೇವಿ ಯುವತಿಯಾಗಿದ್ದಳು.  ತನ್ನ ತತ್ವಗಳಿಗಾಗಿ ತನ್ನ ಜೀವನ ತ್ಯಾಗ ಮಾಡಿದಳು.

ದುಟುಗೆಮುನು ಎಂಬ ವಿರೋಚಿತ ಪುತ್ರನನ್ನು ಧೈರ್ಯವಂತ ತಾಯಿಯೆ ಜನ್ಮ ನೀಡಿರುತ್ತಾಳೆ.

ಒಂದುವೇಳೆ ಮಗು ತಪ್ಪು ಮಾಡುತ್ತಿದ್ದರೆ ಅದಕ್ಕೆ ಅಲ್ಲೆ, ಆಗಲೆ ತಿದ್ದಬೇಕು.  ಹಾಗೆಯೇ ಜನರ ಮುಂದೆ ಮಗುವಿಗೆ ಧಿಕ್ಕರಿಸುವುದು ಒಳ್ಳೆಯದಲ್ಲ.  ಹಾಗೇನಾದರೂ ಮಾಡಿದರೆ ಮಕ್ಕಳು ಇನ್ನಷ್ಟು ಮೊಂಡು ಹಿಡಿದು ಮತ್ತಷ್ಟು ಹಠಮಾರಿಗಳಾಗುವ ಸಾಧ್ಯತೆ ಇರುತ್ತದೆ.  ಎಲ್ಲಾ ಮಕ್ಕಳು ಒಳ್ಳೆಯವರೇ ಆಗಿರುತ್ತಾರೆ.  ಅವರ ಸ್ವಭಾವಗಳನ್ನು ನಾವು ಮೊದಲು ಅರಿಯಬೇಕು ಮತ್ತು ಅವಕ್ಕೆ ಸೂಕ್ತವಾದ ಪರಿಹಾರಗಳನ್ನು ಅನ್ವಯಿಸಬೇಕು.  ಕೆಲವೊಮ್ಮೆ ಒಂದೇ ಒಂದು ಪದವು ಸಂಪೂರ್ಣ ಪರಿವರ್ತನೆ ಮಾಡಬಲ್ಲದು.  

ಜಾತಕ ಕಥೆಯೊಂದರಲ್ಲಿ ಒಬ್ಬ ರಾಜನಿಗೆ ಒಬ್ಬ ಹಠಮಾರಿ ಕೋಪಿಷ್ಟ ರಾಜಕುಮಾರನಿದ್ದನು.  ರಾಜ ಆತನಿಗೆ ಪರಿವರ್ತನೆಯುಂಟು ಮಾಡಲು ರಾಜೋಧ್ಯಾನದಲ್ಲಿ ನೆಲೆಸಿದ್ದ ಖುಷಿಯ ಬಳಿ ಕರೆದೊಯ್ದರು.  ನಂತರ ರಾಜಕುಮಾರರು ಖುಷಿಯೊಂದಿಗೆ ಉದ್ಯಾನವನದಲ್ಲಿ ಸುತ್ತಾಡಲು ಹೊರಟರು.  ಆಗ ಅಲ್ಲಿದ್ದ ಪುಟ್ಟ ಜೀವಿತ ಗಿಡವನ್ನು ಏನೆಂದು ರಾಜಕುಮಾರನು ಕೇಳಿದನು.  ಅದಕ್ಕೆ ಬುದ್ಧಿವಂತ ಋಷಿಯು ತಿಂದು ಪರೀಕ್ಷಿಸು ಎಂದಾಗ, ಅದರ ಎಲೆ ತಿಂದು ಕಹಿಯನ್ನು ತಾಳಲಾರದೆ ಉಗಿದು ಈ ಚಿಕ್ಕ ಗಿಡದಲ್ಲೆ ಇದ್ದು ಕಹಿಯಿದ್ದರೆ ನಂತರ ದೊಡ್ಡದಾಗಿ ಮತ್ತಷ್ಟು ಕಹಿ ನೀಡಬಲ್ಲದು.  ಆದ್ದರಿಂದ ಇದನ್ನು ಬೇರು ಸಮೇತ ಕಿತ್ತುಹಾಕಿ ಎಂದು ಆಜ್ಞೆ ಮಾಡಿದನು.  ಆಗ ಋಷಿಯು ಒಂದು ಕ್ಷಣ ಇರು ಓ ರಾಜಕುಮಾರ - ಜನರಿಗೂ ನಿನ್ನ ಬಗ್ಗೆ ಹೀಗೆಯೇ ಅಭಿಪ್ರಾಯವಿದೆ.  ಬಾಲ್ಯದಲ್ಲೆ ಹೀಗೆ ಕ್ರೂರಿಯಾಗಿರುವ ಈತ ಮುಂದೆ ರಾಜನಾದರೆ ಹೇಗೆ? ಎಂದು.  ತಕ್ಷಣ ವಿವೇಕಿ ರಾಜಕುಮಾರ ಅದರ ಅರ್ಥ ಗ್ರಹಿಸಿ ಇಡೀ ವ್ಯಕ್ತಿತ್ವ ಮಾರ್ಪಡಿಸಿಕೊಂಡನು, ಸ್ನೇಹಮಯಿಯಾದನು.

2. ಎರಡನೆಯ ಕರ್ತವ್ಯವೇನೆಂದರೆ ಒಳ್ಳೆಯದು ಮಾಡಲು ಪ್ರೋತ್ಸಾಹಿಸುವುದು

ಪಾಲಕರೇ ಮನೆಯಲ್ಲಿ ಗುರುಗಳು ಮತ್ತು ಗುರುಗಳೇ ಶಾಲೆಯಲ್ಲಿ ಪೋಷಕರು.  ಹೀಗಾಗಿ ಪೋಷಕರು ಮತ್ತು ಗುರುಗಳು ಮಕ್ಕಳ ಉತ್ತಮ ಭವಿಷ್ಯಕ್ಕೆ ಕಾರಣಕರ್ತರಾಗುತ್ತಾರೆ.  ಅವರು ಇಚ್ಛಿಸಿದಂತೆ ಅವರ ನಿಮರ್ಾಣವಾಗುತ್ತದೆ.  ಅವರು ಈಗಿರುವಂತೆ ಮುಂದೆಯೂ ಆಗಬಲ್ಲರು.  ಬಾಲ್ಯದಲ್ಲಿರುವ ಈ ಮಕ್ಕಳು ಪ್ರಭಾವಕ್ಕೆ ಒಳಗಾಗುವ ಸ್ಥಿತಿಯಲ್ಲಿರುತ್ತಾರೆ.  ನಾವು ನೀಡುವಂತೆ ಅವು ಸ್ವೀಕರಿಸುತ್ತವೆ.  ಅವರು ಕೇವಲ ನಮ್ಮ ಹೆಜ್ಜೆಗಳನ್ನು ಹಿಂಬಾಲಿಸುವವು.  ಆ ಮಕ್ಕಳು ನಮ್ಮ ಕ್ರಿಯೆ, ನುಡಿ ಮತ್ತು ಯೋಚನೆಗಳಿಂದ ಪ್ರಭಾವಕ್ಕೆ ಒಳಗಾಗುವವು.  ಆದ್ದರಿಂದ ಉತ್ತಮ ಮನೆ ವಾತಾವರಣ ಮತ್ತು ಉತ್ತಮ ಶಾಲೆಯ ವಾತಾವರಣದಲ್ಲಿ ಮಕ್ಕಳನ್ನು ಇಡುವುದು ಪಾಲಕರ ಆದ್ಯಕರ್ತವ್ಯವಾಗಿದೆ. 

ಮಕ್ಕಳನ್ನು ಅಸಂಸ್ಕೃತ ದಾದಿಯರು ಮತ್ತು ಸೇವಕರ ನಡುವೆ ಪಾಲನೆಗೆ ಬಿಡಬೇಡಿ.  ಇದರಿಂದಾಗಿ ಅವರು ತಮ್ಮ ಪೋಷಕರಿಗಿಂತ ತಮ್ಮ ದಾದಿಯರಿಗೆ ಹೆಚ್ಚಾಗಿ ಅವಲಂಬಿಸುತ್ತವೆ.  ಈ ಎಲ್ಲಾ ಕಾರಣದಿಂದ ಬದಲಾವಣೆ ಅತ್ಯವಶ್ಯಕವಾಗಿದೆ.

ಸರಳತೆ, ವಿಧೆಯತೆ, ಸಹಕಾರ, ಐಕ್ಯತೆ, ಧೈರ್ಯ, ತ್ಯಾಗ, ಪ್ರಮಾಣಿಕತೆ, ನೇರತೆ, ಸೇವೆ, ಶ್ರದ್ಧೆ, ದಯೆ, ಮಿತವ್ಯಯ, ಸಂತೃಪ್ತಿ, ಸುವರ್ತನೆ, ಧಾಮರ್ಿಕಾಸಕ್ತಿ ಮತ್ತು ಇತರ ಸದ್ಗುಣಗಳನ್ನು ಹಂತಹಂತವಾಗಿ ತುಂಬಬೇಕು.  ಕೆಟ್ಟ ಕಳೆಗಳಾದರೂ ಬೇಗನೆ ಬೆಳೆದು ಫಲ ನೀಡುವ ವೃಕ್ಷಗಳಾಗುತ್ತದೆ. 

ಅವರು ಧರ್ಮ ವರ್ತನೆಯಲ್ಲಿ ಕೊನೇ ಪಕ್ಷ ಪಂಚಶೀಲ ಪಾಲಿಸುವಂತೆ ಆಗಬೇಕು.

ಮೊದಲ ಶೀಲ ಪಾಲನೆಯಿಂದ ಅವರು ಜೀವಿಗಳನ್ನು ಕೊಲ್ಲದೆ, ಅಹಿಂಸೆ ಮತ್ತು ಕರುಣೆಯನ್ನು ಪಾಲಿಸುತ್ತಾರೆ.  ಆಗ ಅವರು ಜೀವದ ಪವಿತ್ರತೆ ಅರಿಯುತ್ತಾರೆ.

ಎರಡನೆಯ ಶೀಲವಾದ ಕಳ್ಳತನ ತ್ಯಾಗದಿಂದ ಅವರು ಋಜುವಾಗಿ, ಪ್ರಮಾಣೀಕರಾಗುತ್ತಾರೆ.  ಜೂಜು, ಪ್ಲೇಯಿಂಗ್ ಕಾಡರ್್ ಆಡುವುದು ಸಹಾ ಪ್ರೋತ್ಸಾಹಿಸಬಾರದು.  ಮಕ್ಕಳನ್ನು ರೇಸ್ಕೋಸರ್ಿಗೆ ಕರೆದೊಯ್ಯುವುದು ಸಹಾ ಕೆದಕಿ ಆಗಿದೆ.  ಅದರಿಂದಾಗಿ ಅವರು ಭವಿಷ್ಯದಲ್ಲಿ ಅನಿರೀಕ್ಷಿತ ಆಗುಹೋಗುಗಳಲ್ಲಿ ಸಿಲುಕಿ ದುಃಖಿತರು ಆಗುವರು. 

ಮೂರನೆಯ ಶೀಲವು ಉತ್ತಮ ಶೀಲಕ್ಕೆ ಸಂಬಂಧಿಸಿದೆ.  ಮಕ್ಕಳಿಗೆ ಪರಿಶುದ್ಧತೆ ಮತ್ತು ಬ್ರಹ್ಮಚಾರ್ಯ ಕಲಿಸಬೆಕು.  ಅವರು ಕೆಟ್ಟ ಸಂಗಗಳಲ್ಲಿ ಬೆರೆಯದಂತೆ ನೋಡಿಕೊಳ್ಳಬೇಕು ಮತ್ತು ರಾತ್ರಿಗೆ ಮುಂಚೆ ಮನೆಗೆ ಹಿಂತಿರುಗುವಂತೆ ನೋಡಿಕೊಳ್ಳಬೇಕು.  ಇದಕ್ಕಾಗಿ ಪೋಷಕರೆ ಆದರ್ಶಪ್ರಾಯರಾಗಿ ನಡೆದುಕೊಳ್ಳಬೇಕು.  ಇಲ್ಲದಿದ್ದರೆ ಮಕ್ಕಳು ತಂದೆ ತಾಯಿಯರಂತೆ ಆಗುವರು.  ಅನೀತಿಯುತ ತಂದೆತಾಯಿಗಳು ಮಕ್ಕಳಲ್ಲಿ ಶೀಲ ನಿರೀಕ್ಷಿಸಲಾರರು.  ಶೀಲವಂತರಾದ ಪೋಷಕರಿಂದಲೇ ಮಕ್ಕಳ ಮಂಗಳವೂ ಆಗುತ್ತದೆ.  ಹಾಗಿಲ್ಲದೆ ದುಶ್ಶೀಲತೆಯ ಪೋಷಕರಿಂದ ಅವರು ಮತ್ತು ಮಕ್ಕಳು ಎರಡು ಗುಂಪುಗಳು ಹಾಳಾಗುವುವು. 

ಮಕ್ಕಳಿಗೆ ಸದಾ ಸತ್ಯವಂತರಾಗಲು ಕಲಿಸಬೇಕು.  ಇದೇ ನಾಲ್ಕನೆಯ ಶೀಲ.  ಅವರೇನಾದರೂ ತಪ್ಪು ಮಾಡಿದರೆ ಅದನ್ನು ಮುಚ್ಚಿದರೆ ಒಪ್ಪಿಕೊಂಡು ಮತ್ತೊಂದು ತಪ್ಪು ಮಾಡದಿರಲಿ.  ಮಕ್ಕಳನ್ನು ಯಾವರೀತಿ ತರಬೇತಿ ನೀಡಬೇಕೆಂದರೆ ಅವರಿಂದ ಪೋಷಕರೇ ಹೆಮ್ಮ ತಾಳಬೇಕು.

ಓ ನಮ್ಮ ಮಕ್ಕಳು ಎಂದಿಗೂ ಸುಳ್ಳಾಡುವುದಿಲ್ಲ ಹಾಗಲ್ಲದೆ ಮಗು ಈಗ ನಿಜ ಹೇಳು, ಸುಳ್ಳು ಹೇಳಬೇಡ ಎಂಬ ಅವಹೇಳನ ಸ್ಥಿತಿ ಉಂಟಾಗದಿರಲಿ.

ಓ ಪ್ರಿಯ ಮಕ್ಕಳೇ, ಯಾರು ಸತ್ಯಸಂಧರೋ ಅವರು ಪೂಜ್ಯರು, ತಮಾಷೆಗಾಗಿಯೂ ಸಹಾ ಮಕ್ಕಳೇ ಮಿಥ್ಯವನ್ನು ಹೇಳಬೇಡಿ.

ಮಕ್ಕಳಲ್ಲಿ ಚಾಡಿ ಹೇಳುವುದು ಸಹಾ ಬಾಲ್ಯದಲ್ಲೇ ಚಿವುಟಿ ಹಾಕಬೇಕು, ಮಕ್ಕಳು ತಪ್ಪಿಗಾಗಿ ಶಿಕ್ಷೆ ಅನುಭವಿಸುವಾಗ ಚಾಡಿ ಹೇಳಿ ಪರರಿಗೂ ಸಿಲುಕಿಸುವುದು ಸಾಮಾನ್ಯ.  ಅದಕ್ಕೆಲ್ಲಾ ಪ್ರೋತ್ಸಾಹಿಸಬಾರದು. 

ಹಾಗೆಯೇ ಕಟುನುಡಿ ಮತ್ತು ಕಾಡುಹರಟೆಯನ್ನು ನಿಲ್ಲಿಸಬೇಕು.  ಸಿಹಿಯಾದ ಮಕ್ಕಳಲ್ಲಿ ಸಿಹಿಯಾದ ಮಾತುಗಳನ್ನು ಬೆಳೆಸಬೇಕು.  ಅವರು ಅವಿಧೇಯ ಮಾತುಗಳನ್ನು ಆಡುವುದು ಮತ್ತು ಮನಸ್ಸಿಗೆ ಬಂದಂತೆ ಅಲಕ್ಷ್ಯದಿಂದ ಏನು ಬೇಕಾದರೂ ಆಡುವುದನ್ನು ತಡೆಯಬೇಕು.  ಮಕ್ಕಳಿಗೆ ಸದಾ ಸತ್ಯ, ಸದಾ ಹಿತವಾದ, ಒಳ್ಳೆಯದಾದ ಮಾತುಗಳನ್ನು ನುಡಿಯಲು ಕಲಿಸಬೇಕು. ಅವರ ನಾಲಿಗೆ ಬಾಲ್ಯದಿಂದ ಸಂಯಮದಿಂದ ಕೂಡಿರಲಿ, ಅರಕ್ಷಿತ ನಾಲಿಗೆಯು ಆಟಂಬಾಂಬ್ಗಿಂತ ನಾಶಕಾರಿ, ಸಂಯಮಿತ ರಕ್ಷಿತ ನಾಲಿಗೆಯು ಮಿಲಿಯನ್ ಗಟ್ಲೆ ಜನರಿಗೆ ಒಳಿತನ್ನು ಮಾಡಬಲ್ಲದು.

ಪೋಷಕರು ಕುಡಿತದ, ಮಾದಕ ದ್ರವ್ಯದ ಹಾಗು ಧೂಮಪಾನದ ದುಷ್ಟರಿಣಾಮಗಳನ್ನು ಅರಿಯಬೇಕು, ಕೆಲವರು ಎರಡೂ ಒಂದು ಸಾರಿ ಅತ್ಯಲ್ಪ ಮದ್ಯ ಹಾನಿಯಲ್ಲ ಎಂದು ಮಿಥ್ಯಾದೃಷ್ಟಿ ಹೊಂದಿದ್ದಾರೆ.  ಗುಟುಕು ತೆಗೆದುಕೊಳ್ಳುವ ಪಾಶ್ಚಾತ್ಯರೀತಿಯ ಸಭ್ಯತೆ ಕಾಣಬಹುದು.  ಆದರೆ ನಂತರ ಮದ್ಯದಲ್ಲಿ ವ್ಯಸಿನವಾಗಿ ಅಂತ್ಯದಲ್ಲಿ ಬಿಡಲಾರದ ಚಟವಾಗಿ ಭೀಕರತೆ ಉಂಟಾಗುತ್ತದೆ.  ತಂದೆ ತಾಯಿಗಳು ಮಕ್ಕಳ ಮೇಲೆ ಒಂದು ಕಣ್ಣು ಇಟ್ಟಿರರಲೇ ಬೇಕು.  ಏಕೆಂದರೆ ಪಾಟರ್ಿ, ಮತ್ತಲ್ಲೊ ಕುತೂಹಲದಿಂದಲೊ ಒತ್ತಾಯದಿಂದಲೂ ಸರ್ವನಾಶದ ಕಡೆಗೆ ಹೋಗಬಹುದು.  ಇದಕ್ಕೆ ಸಂಬಂಧಿಸಿದಂತೆ ಪೋಷಕರೆ ಮುಂದೆ ಸಂಯಮಯುತರಾಗಿ ಅಂತಹ ಯಾವುದೇ ಚಟ ಇಲ್ಲದೆ ಬಾಳಿ, ಮಕ್ಕಳು ಬುದ್ಧಿವಾದ ನೀಡಬೇಕು.

3. ಪೋಷಕರ ಮೂರನೆಯ ಕರ್ತವ್ಯ ಏನೆಂದರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು.  

ಯೋಗ್ಯವಾದ ಶಿಕ್ಷಣವೇ ಪೋಷಕರು ನೀಡುವಂತಹ ಅತ್ಯುತ್ತಮ ಆಸ್ತಿಯಾಗಿದೆ.  ಯಾವ ಐಶ್ವರ್ಯ ಇಲ್ಲದಿದ್ದರೂ ಮಕ್ಕಳಿಗೆ ಹಾರೈಕೆಯನ್ನಾದರೂ ನೀಡಲಿ, ಪುತ್ರರಿಗೆ, ಪುತ್ರಿಯರಿಗೆ ಹಾರೈಕೆ ಸದಾ ಒಳಿತುಂಟುಮಾಡುತ್ತಿದೆ. 

ವಿದ್ಯಾಭ್ಯಾಸ ಅವರಿಗೆ ನೀಡಲೇಬೇಕು.  ಪ್ರಾರಂಭದಲ್ಲಿ ಅವರಿಗೆ ಧಾಮರ್ಿಕ ವಾತಾವರಣದಲ್ಲೆ ಬೆಳೆಸಬೇಕು.  ಇದು ಮಗುವಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.  ಅವರಿಗೆ ಸುಸಂಸ್ಕೃತರಾದ, ಹೊಣೆಗಾರಿಕೆ ಬಲ್ಲ ಗುರುಗಳ ಬಳಿ ಶಿಕ್ಷಣ ನೀಡಬೇಕು.  ಆಗಾಗ ಜ್ಞಾನಯುತ ಮತ್ತು ಧಾಮರ್ಿಕ ಭಿಕ್ಷುವಿನ ಬಳಿಗೂ ಕರೆತರಬೇಕು.  ಇದರಿಂದಾಗಿ ಅವರ ಚಾರಿತ್ರ್ಯ ಶ್ರೇಷ್ಠಮಟ್ಟದ್ದಾಗುತ್ತದೆ.  ರಾಜ ಸಿರಿ ಸಂಘಬೋಧಿಯು ತನ್ನ ಚಿಕ್ಕಪ್ಪ ಆಗಿದ್ದ ಹಿರಿಯ ಭಿಕ್ಷು (ಥೇರ)ವಿನ ಬುದ್ಧಿವಾದದಿಂದಲೇ ಶ್ರೇಷ್ಠ ರಾಜ ಎನಿಸಿಕೊಂಡನು. (ಹಾಗೆಯೇ ಸಾಮ್ರಾಟ್ ಆಶೋಕ ಸಹ). 

ಮಕ್ಕಳು ಮನೆಯಿಂದ ದೂರದಲ್ಲಿ ವಿದ್ಯಾಭ್ಯಾಸ ಹೊಂದುವಾಗ ಅಲ್ಲಿನ ವಾತಾವರಣದ ಬಗ್ಗೆ ಮುನ್ನೆಚ್ಚರಿಕೆ ಹೊಂದಬೇಕು.

ಬೌದ್ಧರ ವಿದ್ಯಾಭ್ಯಾಸದಲ್ಲಿ ಶೀಲದ ಅಥವಾ ಧರ್ಮದ ಶಿಕ್ಷಣ ಕಡ್ಡಾಯವಾಗಿದೆ.  ಧಮ್ಮವು ಲೌಕಿಕ ಶಿಕ್ಷಣವನ್ನು ನಿರಾಕರಿಸಬಾರದು.  ಭೌತಿಕ ಉನ್ನತಿ ಮತ್ತು ಧಮ್ಮದ ಅಭಿರುಚಿ ಜೊತೆ ಜೊತೆಯಲ್ಲೇ ಸಾಗಬೇಕು.  ಪುಸ್ತಕದ ಜ್ಞಾನಕ್ಕಿಂತ ಆಚರಣೆ ಉತ್ತಮ.  ವಂಚನೆಗಾಗಿ ಕಲಿಯದಿರಲಿ, ಅವರು ಪೋಷಕರಿಗೆ ಮತ್ತು ಗುರುಗಳಿಗೆ ತೋರಿಸಲು ತೋರಿಕೆಯ (ಡಾಂಬಿಕ) ಭಕ್ತಿ (ಕಲಿಯುವಿಕೆ) ಮಾಡದಿರಲಿ.  ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವರು ಧಮ್ಮವನ್ನು ಕಲಿಯದಿರಲಿ.  ಧಮ್ಮಜ್ಞಾನ ಪಾಲನೆಗಾಗಿ ಕಲಿಯಲಿ.  ಧಮ್ಮಪದದ ಗಾಥೆಯು ಹೀಗೆ ಹೇಳುತ್ತದೆ. 

ಯಾರು ಧಮ್ಮವನ್ನು ತಿಳಿದು ಅದಕ್ಕೆ ಅನುಗುಣವಾಗಿ ಆಚರಣೆ ಮಾಡುವುದಿಲ್ಲವೋ ಅಂತಹವರು ಪರರ ಗೋವುಗಳನ್ನು ಎಣಿಸುವ ಗೋಪಾಲಕನಂತೆ ವ್ಯರ್ಥ.

ಈಗಿನ ಕಾಲದಲ್ಲಿ ಅಸಂಬದ್ಧ ವಿಷಯಗಳನ್ನು ಕಲಿಸಲಾಗುತ್ತಿದೆ.  ಅವು ದೀರ್ಘಕಾಲದ ಓಟಕ್ಕೆ ಅನುಪಯುಕ್ತವಾಗಿದೆ.  ನಮ್ಮ ಶಕ್ತಿಯನ್ನು ಆಸಕ್ತ ಹಾಗು ಲಾಭಕಾರಿಯುಂಟು ಮಾಡುವ ವಿಷಯಗಳಲ್ಲಿ ಬಳಸುವುದು ಉತ್ತಮವಲ್ಲವೆ ? ಹೆಣ್ಣು ಮಕ್ಕಳಿಗೆ ಸಂಬಂಧಿಸಿದಂತೆ ಅವರು ವಿದ್ಯಾಭ್ಯಾಸ ಜೊತೆಗೆ ಆದರ್ಶ ಪತ್ನಿ ಹಾಗು ಆದರ್ಶ ತಾಯಿ ಆಗುವುದನ್ನು ಮರೆಯಬಾರದು. 

ಹಾಗೆಯೇ ವಿದ್ಯಾಭ್ಯಾಸದ ಗುಂಗಿನಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಬಾರದು, ರೋಗಭರಿತ ವಿದ್ಯಾವಂತರು ಯಾವ ಸಮಾಜಕ್ಕೂ ಅಥವಾ ದೇಶಕ್ಕೂ ಮೌಲ್ಯಯುತ ಆಸ್ತಿಯಾಗುವುದಿಲ್ಲ.

4.  ನಾಲ್ಕನೆಯ ಕರ್ತವ್ಯ ಏನೆಂದರೆ ಅನುಗುಣವಾದ ಸಂಗಾತಿಯೊಂದಿಗೆ ವಿವಾಹ ಮಾಡುವುದು. 

ಸಿಂಹಳ ಭಾಷೆಯಲ್ಲಿ ವಿವಾಹದ ಬಗ್ಗೆ ದೀಗೆ ಯಾನವ ಎನ್ನುತ್ತಾರೆ.  ಅಂದರೆ ದೀರ್ಘಯಾನ ಅಂದರೆ ದೀರ್ಘ (ಉದ್ದವಾದ) ಹಾದಿಯಲ್ಲಿ ಹೋಗುವಿಕೆ.  ಏಕೆಂದರೆ ವಿವಾಹವು ಇಂತಹ ಕ್ರಿಯೆ ಎಂದರೆ ನಾವು ಇಡೀ ಜೀವನ ಬಾಳುವಂತಹುದು.  ಮಕ್ಕಳಿಂದ ನಡೆಯುವ ಕ್ರಿಯೆಯಂತು ಅನಂತವಾದುದು.  ವಿವಾಹ ಬಾಂಧವ್ಯವು ಸುಲಭವಾಗಿ ಮುರಿಯಲಾಗದಂಹುದು.  ಆದ್ದರಿಂದ ಮದುವೆಯನ್ನು ಪ್ರತಿಯೊಬ್ಬರ ದೃಷ್ಟಿಕೋನಗಳಿಂದ ವೀಕ್ಷಿಸಿ ಸರ್ವರಿಗೂ ತೃಪ್ತಿಯಾಗುವಂತಿರಬೇಕು.  ನಂತರ ಪೋಷಕರು ವೃತ್ತಿಗೆ, ಕರ್ತವ್ಯ ಪಾಲನೆಗೆ, ಒತ್ತಾಯಿಸುವರು.  ಮಕ್ಕಳು ಹಕ್ಕುಗಳಿಗಾಗಿ ಒತ್ತಾಯಿಸುವರು.  ಸಂಸ್ಕೃತಿಯಂತೆ ಕರ್ತವ್ಯದ ಸ್ಥಾನವನ್ನು ಹಕ್ಕುಗಳು ಪಡೆಯುತ್ತದೆ.  ಎರಡು ಬಣದವರು ಗಟ್ಟಿಯಾಗದೆ ಯಾವುದು ಒಂದು ಯೋಗ್ಯ ನಿಧರ್ಾರಕ್ಕೆ ಬಂದು ಪರಿಹರಿಸಿಕೊಳ್ಳಬೇಕು, ಇಲ್ಲದಿದ್ದಲ್ಲಿ ಪರಸ್ಪರ ತೆಗಳುವಿಕೆ ಎಲ್ಲಾ ಮೂಡುತ್ತದೆ.

ಪತ್ನಿಯ ಆಯ್ಕೆಯ ಬಗ್ಗೆ ಮಹಾಮಂಗಳ ಜಾತಕದಲ್ಲಿ ಈ ರೀತಿ ಬರುತ್ತದೆ. 

ಯಾರ ಪತ್ನಿಯು ಸ್ನೇಹಮಯಿಯೋ

ಮತ್ತು ಸಮಾನ ವಯಸ್ಕಳೋ

ಶ್ರದ್ಧಾವಂತಳು ಮತ್ತು ಶೀಲವಂತಳೋ

ಮತ್ತು ಸುಜಾತಳೋ ಅದೇ ಪತ್ನಿಯಿಂದ

ಉಂಟಾಗುವ ಮಂಗಳಗಳು*

(*ಮಾನವನಿಗೆ ಭೂಮಿಯ ಮೇಲೆ ಸಿಗುವ ಉತ್ತಮ ಉಡುಗೊರೆ ಎಂದರೆ ಒಳ್ಳೆಯ ಪತ್ನಿ, ಹಾಗೆಯೇ ಕಹಿಯಾದ ಶಾಪವೆಂದರೆ ಕೆಟ್ಟ ಪತ್ನಿ) ಹಾಗೆಯೇ ಕೆಟ್ಟ ಗಂಡುಗಳನ್ನು ಆಯ್ಕೆ ಮಾಡಬಾರದು ಎಂದು ವಸಲ ಸುತ್ತದಲ್ಲಿ ವಿವರಿಸಲಾಗಿದೆ.

ವ್ಯಭಿಚಾರಿ, ಕುಡುಕ, ಜೂಜುಗಾರ ಮತ್ತು ದುಂದುವೆಚ್ಚ ಮಡುವವನು ಇಂತಹವರ ಆಯ್ಕೆಯನ್ನು ತಡೆಯಬೇಕು.

ಆರೋಗ್ಯವು ವಿವಾಹಕ್ಕೆ ಅತ್ಯಂತ ಅವಶ್ಯಕ ಇಲ್ಲದಿದ್ದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಶಾಪವಾಗಿರುತ್ತಾರೆ. 


5. ತಂದೆ ತಾಯಿಗಳ ಕರ್ತವ್ಯ ಏನೆಂದರೆ ಸರಿಯಾದ ಕಾಲದಲ್ಲಿ ತಮ್ಮ ಆಸ್ತಿಯನ್ನು ಅವರಿಗೆ ನೀಡುವುದು.


  ಮಾನವರು (ಪೋಷಕರು) ತಮ್ಮ ಮಕ್ಕಳಿಗೆ ತಮ್ಮ ಅಡಿಯಲ್ಲಿರುವಾಗ ಮಾತ್ರ ಪ್ರೀತಿಸುವುದಿಲ್ಲ, ಜೊತೆಗೆ ಅವರ ಭವಿಷ್ಯದ ಸುಖ ಮತ್ತು ಕ್ಷೇಮಕ್ಕೂ ಸಿದ್ಧತೆ ನಡೆಸುತ್ತಾರೆ.  ಅವರು ತಮ್ಮ ವ್ಯಕ್ತಿಗತವಾಗಿ ಸುಖಿಸದಿದ್ದರೂ ತಾವು ಸಂಗ್ರಹಿಸಿದ ಐಶ್ವರ್ಯವೆಲ್ಲಾ ಸಂತೋಷದಿಂದ ಮಕ್ಕಳಿಗೆ ನೀಡುವರು.  ತಿಪಿಟಕದಲ್ಲಿ ವಿಶಾಖೆಗೆ ಆಕೆಯ ತಂದೆಯು ಕೆಲವು ಹಿತವಚನ ನೀಡುತ್ತಾನೆ.  ಬಹುಶಃ ಇದು ಪೋಷಕರು ತಮ್ಮ ಮಗಳಿಗೆ ನೀಡಬಹುದಾದ ಉಚ್ಛ ಉಡುಗೊರೆಯಾಗಿದೆ (ವರದಕ್ಷಿಣೆ).

1. ಒಳಗಿನ ಬೆಂಕಿಯನ್ನು ಹೊರಗಡೆ ತೆಗೆದುಕೊಂಡು ಹೋಗಬಾರದು.

2. ಹೊರಗಿನ ಬೆಂಕಿಯನ್ನು ಒಳಗಡೆ ತರಬೇಡಿ.

3. ಯಾರು ಕೊಡುತ್ತಾರೋ ಅವರಿಗೆ ನೀಡು.

4. ಯಾರು ಕೊಡುವುದಿಲ್ಲವೋ ಅವರಿಗೆ ನೀಡಬೇಡ

5. ಯಾರು ಕೊಡುತ್ತಾರೋ ಮತ್ತು ಕೊಡುವುದಿಲ್ಲವೋ ಇಬ್ಬರಿಗೂ 

ನೀಡು. 

6. ಸುಖಿಯಾಗಿ ಕುಳಿತುಕೋ.

7. ಸುಖಿಯಾಗಿ ತಿನ್ನು

8. ಸುಖಿಯಾಗಿ ನಿದ್ರಿಸು

9. ಅಗ್ನಿಯನ್ನು ನೋಡಿಕೋ

10. ಗೃಹ ದೇವತೆಗಳಿಗೆ ಗೌರವಿಸು.

ಇವುಗಳ ಅರ್ಥ ಹೀಗಿದೆ :

1. ಬೆಂಕಿ ಎಂದರೆ ಚಾಡಿ ಹೇಳುವಿಕೆ.  ಅಂದರೆ ಪತ್ನಿಯು ತನ್ನ ಪತಿಯ ಮತ್ತು ಅತ್ತೆ ಮಾವಂದಿರ ಬಗ್ಗೆ ಕೆಟ್ಟದ್ದನ್ನು ಪರರ ಬಳಿ ಹೇಳಬಾರದು. ಹಾಗೆಯೇ ಅವರ ಆದಾಯ, ನಷ್ಟ ಅಥವಾ ಅವರ ಜಗಳಗಳು ಬೇರೆಡೆ ಹೇಳಬಾರದು.

2. ಪತ್ನಿಯು ಪರಗೃಹಸ್ಥರ ಕತೆಗಳಾಗಲಿ, ಸುದ್ದಿಗಳಾಗಲಿ ಕೇಳಬಾರದು.

3. ಯಾರು ಸಾಲವನ್ನು ಹಿಂದಿರುಗಿಸುತ್ತಾರೋ ಅಂತಹವರಿಗೆ ಮಾತ್ರ ಸಾಲ ನೀಡಬೇಕು.

4. ಯಾರು ಸಾಲವನ್ನು ಹಿಂದಿರುಗಿಸುವುದಿಲ್ಲವೋ ಅಂತಹವರಿಗೆ ಏನನ್ನು ನೀಡಬಾರದು.

5. ಬಡವರು, ಬಂಧುಗಳು ಮತ್ತು ಮಿತ್ರರು ಅವರಿಗೆ ಅವರು ಹಿಂತಿರುಗಿಸದಿದ್ದರೂ ಸಹಾಯ ಮಾಡಬೇಕು.

6. ಪತ್ನಿಯು ದಾರಿಯಲ್ಲಿ ಕೂರಬಾರದು, ಏಕೆಂದರೆ ಮಧ್ಯೆ ತನ್ನ ಅತ್ತೆ, ಮಾವ ಕಾಣುತ್ತಿದ್ದರೆ ಆಕೆ ಎದ್ದು ನಿಲ್ಲುತ್ತಾ ಮತ್ತೆ ಕೂರಬೇಕಾಗುತ್ತದೆ.  ಇದು ಹಿರಿಯರ ಬಗ್ಗೆ ಇರುವ ಗೌರವ ಸೂಚಿಸುತ್ತದೆ. 

7. ಪತ್ನಿಯು ತಾನು ಉಣುವ ಮೊದಲು ತನ್ನ ಪತಿ ಮತ್ತು ಅತ್ತೆ ಮಾವಂದಿರು ಹಾಗು ಸೇವಕರು ಉಂಡಿದ್ದಾರೆಯೇ ಗಮನಿಸಬೇಕು ನಂತರ ನಿರಾತಂಕವಾಗಿ ತಿನ್ನಬೇಕು.

8. ಇದರ ಅರ್ಥ ಪತ್ನಿಯು ಇಷ್ಟಪಟ್ಟಷ್ಟು ನಿದ್ರಿಸಲಿ ಎಂದಲ್ಲ, ಆಕೆ ಮಲಗುವ ಮುನ್ನ ಎಲ್ಲಾ ಬಾಗಿಲುಗಳು ಮುಚ್ಚಿದ್ದಾರೆಯೆ, ಪೀಠೋಪಕರಣಗಳು, ಸುರಕ್ಷಿತವಾಗಿದೆಯೇ, ಸೇವಕರು ತಮ್ಮ ವೃತ್ತಿಯನ್ನು ಚೆನ್ನಾಗಿ ಮಾಡಿದ್ದಾರೆಯೇ ಹಾಗು ಅತ್ತೆ ಮಾವಂದಿರು ನಿದ್ರಿಸಲು ಹೋಗಿದ್ದಾರೆಯೆ ಎಂದು ಪರೀಕ್ಷಿಸಿ ನಿದ್ರಿಸಬೇಕು.  ಪತ್ನಿಯು ಮುಂಜಾನೆಯೇ ಏಳಬೇಕು ಮತ್ತು ಅನಾರೋಗ್ಯದ ಹೊರತು ಹಗಲು ನಿದ್ರೆ ಮಾಡಬಾರದು.

9. ಗಂಡ ಮತ್ತು ಅತ್ತೆ ಮಾವಂದಿರನ್ನು ಬೆಂಕಿಯಂತೆ ಜಾಗರೂಕತೆಯಿಂದ ನೋಡಿಕೊಳ್ಳಬೇಕು. 

10. ಪತಿ ಮತ್ತು ಅತ್ತೆ ಮಾವಂದಿರನ್ನು ಗೃಹದೇವತೆಗಳಂತೆ ಕಾಣಬೇಕು.

ಬುದ್ಧರೇ ಅತ್ತೆ ಮಾವಂದಿರನ್ನು ಸಾಸ್ಸುದೇವ ಎಂದು ಕರೆದಿದ್ದಾರೆ. 

ಪೂರ್ವತ್ವ ಸಂಪ್ರದಾಯದಂತೆ ಪತ್ನಿಯು ಪತಿಗೆ ದೇವರಂತೆ ಗೌರವಿಸಬೇಕು.  ಬುದ್ಧ ವಚನದಲ್ಲಿ ಪತ್ನಿಯು ಪತಿಗೆ ಅತ್ಯುತ್ತಮ ಹಿತಕಾರಿಯಂತೆ ವತರ್ಿಸಬೇಕು. ಹಾಗು ಆಕೆಯನ್ನು ತನ್ನ ಎರಡನೆಯ ವ್ಯಕ್ತಿತ್ವದಂತೆ ಪರಿಗಣಿಸಬೇಕು.  ನಿಷ್ಠಾವಂತ ಪತ್ನಿಯು ತನ್ನ ಪತಿಗೆ ಹಿತಕಾರಿ ರಕ್ಷಕಳಂತೆ ನೋಡಿಕೊಳ್ಳುವಳು.  ಹಾಗೆಯೇ ಪತ್ನಿಯು ತನ್ನ ಧಾಮರ್ಿಕ ಕರ್ತವ್ಯಗಳನ್ನು ಮಾಡಬೇಕು.  ಭಿಕ್ಷುಗಳು ಮತ್ತು ಸಂತರು ಮನೆಗೆ ಬಂದರೆ ಅವರನ್ನು ಗೌರವದಿಂದ ನೋಡಿಕೊಂಡು ಆತಿಥ್ಯ ನೀಡಬೇಕು. 

ಮಕ್ಕಳ ಕರ್ತವ್ಯಗಳು

ತಂದೆ-ತಾಯಿಗಳು ಮಕ್ಕಳಿಗಾಗಿ ಪ್ರತಿ ಸಾಧ್ಯವಾದ ವಿಧದಲ್ಲಿ ಸಹಾಯ ಮಾಡಿದ್ದಕ್ಕಾಗಿ, ಅವರನ್ನು ಬೆಳಕಿನೆಡೆಗೆ ಕರೆದೊಯ್ಯುವುದಕ್ಕಾಗಿ ಮಕ್ಕಳು ಸದಾ ಋಣಿಗಳಾಗಿರುತ್ತಾರೆ.  ನಿಜಕ್ಕೂ ಅವರು ತಮ್ಮ ಪ್ರಾಣವನ್ನು ಅವರಿಗೆ ಅಪರ್ಿಸಿದರೂ ಸಹಾ ಅವರ ಋಣ ತೀರಿಸಲಾಗದು. 

ಬೌದ್ಧ ಧಮ್ಮದಂತೆ ಮೂರು ವಿಧದ ಮಕ್ಕಳು ಇರುತ್ತಾರೆ, ಅವೆಂದರೆ 1. ಮಕ್ಕಳು ತಮ್ಮ ಪೋಷಕರಿಗೆ ಸರ್ವರೀತಿಯಲ್ಲಿ ಕಡಿಮೆಯಿರುತ್ತಾರೆ (ಅವಜಾತ) 2. ಮಕ್ಕಳು ತಮ್ಮ ಪೋಷಕರಿಗೆ ಸಮಾನ ಹಂತದಲ್ಲಿರುತ್ತಾರೆ (ಅನುಜಾತ) 3. ಮಕ್ಕಳು ಎಲ್ಲಾ ರೀತಿಯಲ್ಲೂ ತಮ್ಮ ತಂದೆ ತಾಯಿಗಳಿಗೆ ಮೀರಿಸಿರುತ್ತಾರೆ (ಅತಿಜಾತ).  ಪ್ರತಿ ಮಕ್ಕಳು ತಮ್ಮ ತಂದೆ ತಾಯಿಯರನ್ನು ಶೀಲದಲ್ಲಿ, ಅಂತಸ್ತಿನಲ್ಲಿ ಸೇವೆಯಲ್ಲಿ ಪ್ರತಿಯೊಂದರಲ್ಲೂ ಮೀರಿಸಬೇಕು.  ಹೀಗಾಗದಿದ್ದಲ್ಲಿ ಮಕ್ಕಳು ನಿಂದೆಗೆ ಗುರಿಯಾಗುತ್ತಾರೆ.  ಮಕ್ಕಳು ಸ್ವಾಭಾವಿಕವಾದ ಅವಕಾಶಗಳಲ್ಲಿ ಆನಂದಿಸುತ್ತದೆ.  ಒಂದುವೇಳೆ ಮಕ್ಕಳು ತಂದೆತಾಯಿಗಳಿಗೆ ಮೀರಿಸದಿದ್ದಲ್ಲಿ ಕೊನೆ ಪಕ್ಷ ಅವರಿಗೆ ಅನುಕರಿಸಿ ಸಮಾನ ಹಂತಕ್ಕಾದರೂ ಹೋಗಬೇಕು.  ಆದರೆ ಎಂದಿಗೂ ಹೀನರಾಗಬಾರದು.  

ಸಿಗಾಲೊವಾದ ಸುತ್ತದ ಪ್ರಕಾರ ಮಕ್ಕಳು ತಮ್ಮ ಪೋಷಕರಲ್ಲಿ ಈ ಐದು ಕರ್ತವ್ಯ ಪೂರೈಸಬೆಕು.

1. ತಮ್ಮ ತಂದೆ ತಾಯಿಗಳಿಗೆ ಸಹಾಯ ಮಾಡುವುದು.  ಈ ಪರಮಾತ್ಯ ಕರ್ತವ್ಯಕ್ಕೆ ಯಾವ ಟೀಕೆಯೇ ಬೇಕಾಗಿಲ್ಲ.  

ಬೌದ್ಧ ಸಂಪ್ರದಾಯಂತೆ ಮಕ್ಕಳು ಪ್ರತಿದಿನ ತಿಸರಣ ಮತ್ತು ಪಂಚಶೀಲದ ಪ್ರತಿಜ್ಞೆ ನಂತರ ಪೋಷಕರ ಪಾದಗಳಿಗೆ ವಂದಿಸಬೇಕು.

ಇದು ಸನಾತನ ವಿಧದ ಗೌರವ :

ಓ ತಾಯಿಯೇ ! ನನಗಾಗಿ ಗರ್ಭದರಿಸಿ ಅಪಾರ ದುಃಖ ಅನುಭವಿಸಿದ ಮಾತೆಯೆ ನಿನಗೆ ಕೈಗಳನ್ನು ಹಣೆಗೆ ಜೋಡಿಸಿ ನಾನು ನಮಸ್ಕರಿಸುವೆ ನನ್ನ ಎಲ್ಲಾ ತಪ್ಪುಗಳನ್ನು ಕ್ಷಮಿಸು.

ನಾನು ಅತ್ತಾಗ ನನಗೆ ಲಾಲಿ ಹಾಡಿಸಿ, ಪ್ರೀತಿಯಿಂದ ನಿದ್ದೆಗೆ ಜಾರಿಸಿದೆ.  ನನ್ಮ ಮಾಲಿನ್ಯಗಳನ್ನು ಅಮೂಲ್ಯ ವಸ್ತುಗಳಂತೆ ಸೌಗಂಧದಂತೆ ಮುಟ್ಟು ಸ್ವಚ್ಛಗೊಳಿಸಿದೆ, ನಿನ್ನ ಎಲ್ಲಾ ಅನಂತ ಸೇವೆಗಳಿಂದ ಹಾಗು ಅಪಾರ ಕರುಣೆಯಿಂದಾಗಿ ಓ ಪ್ರಿಯ ಉದಾತ್ತ ತಾಯಿಯೇ ನೀನು ಸಮ್ಮ ಸಂಬುದ್ದಳಾಗಲಿ ಹಾಗು ಜಗತ್ತನ್ನು ದುಃಖದಿಂದ ಪಾರುಮಾಡುವಂತಾಗಲಿ

(ಬೋಸತ್)

ಬಹಳಷ್ಟು ವಾಚಕರು ರಾಜ ಅಗ್ರಬೋಧಿಯ ಬಗ್ಗೆ ಕೇಳಿರಬಹುದು.  ಆತನ ವರ್ತನೆಯು ಸರ್ವ ಮ್ಕಳಿಗೂ ಆದರ್ಶಪ್ರಾಯವಾಗಿದೆ. 

ಮಳ ವಂಶದಲ್ಲಿ ತಾಯಿಯ ಪೂಜೆಯ ಬಗ್ಗೆ ಈ ರೀತಿ ಸಿಗುತ್ತದೆ. 

ರಾಜನೊಬ್ಬನು ತನ್ನ ಮಾತೆಗೆ ಸೇವೆ ಮಾಡಲು ಹಗಲು ರಾತ್ರಿ ಸಂತೋಷಿಸುತ್ತಿದ್ದನು.  ಮುಂಜಾನೆ ಆಕೆಗೆ ಸ್ನಾನ ಮಾಡಿಸಿ, ವಸ್ತ್ರ ತೊಡಿಸಿ ಪುಷ್ಪಗಳಿಂದ ಪೂಜಿಸಿ ಪಾದ ನೀರನ್ನು ತನ್ನ ತಲೆಗೆ ಸಿಂಪಡಿಸಿ, ಮೂರು ಬಾರಿ ವಂದಿಸಿ, ಮೂರು ಪ್ರದಕ್ಷಿಣೆ ಮಾಡಿ, ಉತ್ತಮ ಆಹಾರ ಉಣಿಸಿ, ಆಕೆಯ ಮಲಗುವ ಕೋಣೆಯನ್ನು ಸುಗಂಧಯುತವನ್ನಾಗಿ ಮಾಡಿ, ಆಕೆಯ ಪಾದ ತೊಳೆದು, ಮಲಗಿಸಿ, ಮಂಚಕ್ಕೆ 3 ಬಾರಿ ಪ್ರದಕ್ಷಿಣೆ ಮಾಡಿ ಸೇವಕರಿಗೆ ಕಾವಲು ಕಾಯಲು ಆಜ್ಞೆ ಮಾಡುತ್ತಿದ್ದನು.  ಯಾವ ಸ್ಥಳದಲ್ಲಿ ಆಕೆ ಕಾಣುತ್ತಿದ್ದರೂ ಅಲ್ಲಿ ಗೌರವ ಸೂಚಿಸುತ್ತಾ ಆಕೆ ಇರುವವರೆಗೂ ಇದೇ ರೀತಿಯಲ್ಲಿ ಮಾತೃಸೇವೆ ಮಾಡುತ್ತಿದ್ದನು. (ಚುಳವಂಶ)

ಸಾಮ ಜಾತಕದಲ್ಲಿ ಬೋಧಿಸತ್ವರು ಬಾಣದಿಂದ ಗಾಯಾಳು ಆಗಿ ಬೀಳುವಾಗ ತಮ್ಮ ತಲೆಯನ್ನು ತಮ್ಮ ಪೋಷಕರ ದಿಕ್ಕಿಗೆ ಗೌರದಿಂದ ತಿರುಗಿಸಿ ಮೂಛರ್ೆ ಹೋದರು.

ರಾಜಕುಮಾರ ಜಲಿ ಮತ್ತು ರಾಜಕುಮಾರಿ ಕೃಷ್ಣಜಿನರು ತಮ್ಮ ತಂದೆ ತಾಯಿಗಳಿಗೆ ಅತ್ಯಂತ ನಿಷ್ಠರಾಗಿದ್ದರು.  ಈ ಮಕ್ಕಳಿಗೆ ರಾಜ ವಸ್ಸಂತರ ಕೊಳದಲ್ಲಿ ಅಡಗಿಸಿ ಇಡುತ್ತಾನೆ. ಏಕೆಂದರೆ ವೃದ್ಧ ಮನುಷ್ಯ ಇವರಿಗಾಗಿ ಬರಬಹುದೆಂದು.  ಆದರೆ ತಂದೆಯು ಕೂಗಿದಾಗ ಸಂಕೋಚವಿಲ್ಲದೆ, ಭಯವಿಲ್ಲದೆ ಮುಂದೆ ಬಂದು ನಿಲ್ಲುತ್ತಾರೆ.

ರಾಜಕುಮಾರ ರಾಮರ ವಿಧೇಯತೆಯು ಆದರ್ಶಪ್ರಾಯವಾದುದು, ಮಲತಾಯಿಯರ ಇಚ್ಛೆಗೆ ತಂದೆಯ ವಚನ ಪೂರೈಕೆಗೆ ಅವರು 14 ವರ್ಷ ವನವಾಸ ಮಾಡುವರು.  ಕೆಲವು ವರ್ಷಗಳ ನಂತರ ರಾಜನು ಮೃತ್ಯವನ್ನಪ್ಪಿದಾಗ ಮಂತ್ರಿಗಳು ರಾಜ್ಯವಾಳಲು ಆಹ್ವಾನಿಸಿದಾಗ ಕಾಲ ಪೂತರ್ಿ ಆಗುವವರೆಗೆ ಸಾಧ್ಯವಿಲ್ಲ ಎಂದು ತಿಳಿಸುತ್ತಾರೆ.

ಆದ್ದರಿಂದ ವಿಧೇಯತೆಯು ಮಕ್ಕಳ ಪ್ರಧಾನ ಲಕ್ಷಣವಾಗಬೇಕು.  ಅವರು ತಂದೆ ತಾಯಿಗಳೊಂದಿಗೆ ಯಾವುದಕ್ಕೂ ಕೆಟ್ಟದಾಗಿ ನಡೆದುಕೊಳ್ಳಬಾರದು.  ಕೆಟ್ಟ ಸ್ವಭಾವದ ಪತ್ನಿಯು ವೃದ್ಧ ತಂದೆತಾಯಿಗಳ ಬಗ್ಗೆ ವಿಷ ತುಂಬಬಾರದು.  ಅವರು ರೋಗಿಗಳಾದಾಗ ಮತ್ತು ವೃದ್ಧರು ಆದಾಗ ಅವರನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕು.  ಅವರನ್ನು ಮಹಾನ್ ಪುಣ್ಯಕ್ಷೇತ್ರವೆಂದು ಭಾವಿಸಿ ಸೇವೆ ಗೈಯಬೇಕು.  

2. ಮಕ್ಕಳ ಅಗತ್ಯದ ಎಲ್ಲಾ ಕರ್ತವ್ಯಗಳನ್ನು ಮಾಡಬೇಕು :


 ಮಕ್ಕಳು ತಂದೆತಾಯಿಗಳ ನಿರೀಕ್ಷೆ ಅರ್ಥ ಮಾಡಿಕೊಳ್ಳಬೇಕು ಮತ್ತು ಅವರಿಗೆ ತೃಪ್ತಿಯಾಗುವಂತೆ ಕರ್ತವ್ಯ ಪಾಲಿಸಬೇಕು. ಪೋಷಕರ ಹಿತ ಮತ್ತು ಸುಖವನ್ನು ಕಾಣುವುದು ಮಕ್ಕಳ ಕರ್ತವ್ಯವಾಗಿದೆ.  ಅವರು ಅದಕ್ಕಾಗಿ ತಮ್ಮ ಸುಖವನ್ನು ತ್ಯಜಿಸಲಿ.  ಜಾತಕ ಕಥೆಗಳಲ್ಲಿ ಬೋದಿಸತ್ವರು ತಮ್ಮ ಪೋಷಕರಿಗೋಸ್ಕರ ತಮ್ಮ ಪ್ರಾಣವನ್ನೇ ಅಪರ್ಿಸಿದ್ದಾರೆ.  ಅದಕ್ಕೆ ತಾವೇ ಧನ್ಯ ಎಂದು ಭಾವಿಸಿದ್ದಾರೆ.

ಯಾವ ಮಾನವರು ಧರ್ಮಪಾಲರೊ ಅವರು ಮಾತಾಪಿತರ ಸೇವೆ ಮಾಡಲಿ.  ದೇವತೆಗಳು ಅವರ ಭಕ್ತಿ ಗಮನಿಸಿ ಅವರ ರೋಗವನ್ನು ಗುಣಪಡಿಸುವರು.  ಯಾವ ಮಾನವರು ಧರ್ಮಪಾಲರೋ ಅವರು ಮಾತಾಪಿತರ ಸೇವೆ ಮಾಡಲಿ, ದೇವತೆಗಳು ಇದಕ್ಕಾಗಿ ಪ್ರಶಂಸಿಸುವರು ಮತ್ತು ಮುಂದೆ ಸುಗತಿಯಲ್ಲಿ ಅವರು ಆನಂದಿಸುವರು 

(ತಮಯ ಜಾತಕ)

ಮಕ್ಕಳ ಕರ್ತವ್ಯವು ಕೇವಲ ಭೌತಿಕ ಸುಖ ಸವಲತ್ತು ನೀಡುವುದಲ್ಲ, ಜೊತೆಗೆ ಧಾಮರ್ಿಕ ಸುಖವನ್ನು ನೀಡುವುದು.  ಅವರು ತಮ್ಮ ಶೀಲ, ದಾನ, ಭಕ್ತಿ, ಪ್ರಜ್ಞೆ ಇತ್ಯಾದಿಗಳಿಂದ ವೃದ್ಧಿಸಬೇಕು ಹಾಗು ಪೋಷಕರು ಇದನ್ನು ಪಾಲಿಸುವಂತೆ ಪ್ರೋತ್ಸಾಹಿಸಬೇಕು.  ಹೀಗಾಗಿ ಅವರು ನಿತ್ಯ ಸುಖವನ್ನು ಮತ್ತು ಪುಣ್ಯವನ್ನು ಪ್ರಾಪ್ತಿ ಮಾಡುತ್ತಾರೆ.

3. ಮೂರನೆಯ ಕರ್ತವ್ಯ ಏನೆಂದರೆ ವಂಶದ ಪರಂಪರೆ ಮುಂದುವರೆಸುವುದು : 


ಮಕ್ಕಳ ವಂಶಗತಾ ಆಸ್ತಿಯನ್ನು ದುಂದುವೆಚ್ಚದಿಂದ ಪೋಲು ಮಾಡಬಾರದು, ಬಹಳಷ್ಟು ಮಿತವ್ಯಯ ಪಾಲಕರು ಅಪಾರ ಶ್ರಮದಿಂದ ಐಶ್ವರ್ಯ ಸಂಗ್ರಹಿಸಿರುತ್ತಾರೆ.  ಯಾವುದನ್ನು ಅವರು ನಿರಂತರ ಪ್ರಯತ್ನದಿಂದ ಗಳಿಸಿದ್ದರೋ ಅದನ್ನು ಆಧುನಿಕತೆಯ ನೆನಪಲ್ಲಿ ಖಚರ್ು ಮಾಡಿ ಸ್ವಲ್ಪ ಕಾಲದಲ್ಲೆ ದುಃಖಭರಿತ ಜೀವನ ನಡೆಸುತ್ತಾರೆ. 

ಮಕ್ಕಳು ತಮ್ಮ ಪೋಷಕರ ಉತ್ತಮ ಕೆಲಸಗಳನ್ನು ಮುಂದುವರೆಸಿ ಕೊಂಡು ಹೋಗಬೇಕು.  ಕಾಲಕ್ಕೆ ತಕ್ಕಂತೆ ಆಹಾರ, ದಾನ, ಧಾಮರ್ಿಕ ಸಂಸ್ಥೆಗಳಿಗೆ ಆಥರ್ಿಕ ಸಹಾಯ, ರೋಗಿಗಳ ಮತ್ತು ಬಡವರಿಗೆ ಸಹಾಯ ಇತ್ಯಾದಿಗಳನ್ನು ಪೋಷಕರಂತೆ ತಾವು ಸಹಾ ಅಲಕ್ಷಿಸದೆ ಮುಂದುವರೆಸಬೇಕು.

4. ಮಕ್ಕಳ ನಾಲ್ಕನೆಯ ಕರ್ತವ್ಯವೇನೆಂದರೆ ತಮ್ಮ ವಂಶಕ್ಕೆ ಅರ್ಹರಾಗುವಂತೆ ವತರ್ಿಸುವುದು.  


ಪೋಷಕರ ಗೌರವಾರ್ಹ ಹೆಸರು ಅರ್ಹ ಪುತ್ರರಿಂದ ನಿಲ್ಲುತ್ತದೆ.  ಸುಸಂಸ್ಕೃತ ಮಕ್ಕಳು ಪೋಷಕರ ಹೆಸರು ಸಾರ್ಥಕ ಮಾಡುತ್ತಾರೆ.  ಯಾವುದನ್ನು ತನ್ನ ತಂದೆ ತಾಯಿಯ ಬಳಿ ಹೇಳಲು ನಾಚಿಕೆ ಆಗುತ್ತದೆಯೋ ಅದನ್ನು ಬಹಿರಂಗವಾಗಲಿ ಅಥವಾ ರಹಸ್ಯದಲ್ಲಿ ಆಗಲಿ ಮಾಡಬಾರದು.

5. ಮಕ್ಕಳು ತಮ್ಮ ಮೃತ ಪೋಷಕರ ಹೆಸರಿನಲ್ಲಿ ಆಹಾರ ದಾನ ನೀಡಬೇಕು. 


 ಬೌದ್ಧ ಸಂಪ್ರದಾಯಗಳಲ್ಲಿ ಪೋಷಕರನ್ನು ಅವರು ಸತ್ತ ಮೇಲೂ ನೆನಪಿಸಿಕೊಳ್ಳುತ್ತಾರೆ.  ಅವರು ಯಾವುದಾದರೂ ಪುಣ್ಯ ಕಾರ್ಯ ಮಾಡಿ ಅದರ ಪುಣ್ಯವನ್ನು ಪೋಷಕರಿಗೆ ಹಂಚುತ್ತಾರೆ.  ಅವರಿಗೆ ಪುಣ್ಯ ಬೇಕಿದ್ದರೆ ಅದನ್ನು ಹಂಚುತ್ತಾರೆ.  ಅವು ಹಂಚಲ್ಪಡುತ್ತದೋ ಅಥವಾ ಇಲ್ಲವೋ ಅಂತಹ ಪುಣ್ಯ ಕಾರ್ಯಗಳು ಜೀವಿಗಳಿಗೆ ಸುಖ ತರುತ್ತದೆ.  ಅವರು ಪೋಷಕರ ಬಗ್ಗೆ ಹಿತಚಿಂತನೆಯನ್ನು ಮಾಡುತ್ತಾರೆ.  ಇದರಿಂದಾಗಿ ಆನಂದ ನೀಡುತ್ತಾರೆ.  ಹಾಗೆಯೇ ಅವರು ಕೃತಜ್ಞತೆ ವ್ಯಕ್ತಪಡಿಸಿ ಮುಂದಿನ ಪೀಳಿಗೆಯವರಿಗೆ ಆದರ್ಶ ಪ್ರಾಯರಾಗಿ ನಿಲ್ಲುತ್ತಾರೆ.  

ಆಗಾಗ್ಗೆ ಅವರ ಹೆಸರಿನಲ್ಲಿ ಆಹಾರ ದಾನ ನೀಡುವುದು ಧಾಮರ್ಿಕ, ವಿದ್ಯಾಸಂಸ್ಥೆಗಳು ಮತ್ತು ದಾನ ಸಂಸ್ಥೆಗಳು ಸ್ಥಾಪಿತವಾಗಬೇಕು.  ಧಾಮರ್ಿಕ ಗ್ರಂಥಗಳನ್ನು ಮುದ್ರಿಸಿ ಹಂಚಬೇಕು.  ಪೋಷಕರ ಹೆಸರಿನಲ್ಲಿ ಸ್ಕಾಲರ್ಶಿಪ್ ನೀಡಬೇಕು.  ಈ ರೀತಿಯಲ್ಲಿ ಪೋಷಕರಿಗೆ ಗೌರವ ಸಲ್ಲಿಸಬೇಕು.  

ನಾನು ಈ ಕೃತಿಯನ್ನು ಅಶೋಕನ ಶಿಲಾಶಾಸನದೊಂದಿಗೆ ಮುಗಿಸುತ್ತೇನೆ.  ಬ್ರಹ್ಮಗಿರಿಯ ಎರಡನೆಯ ಶಿಲಾಶಾಸನದಲ್ಲಿ ಮಕ್ಕಳ ಕರ್ತವ್ಯದ ಬಗ್ಗೆ ಹೇಳಲಾಗಿದೆ.  ಇದನ್ನು ಭಗವಾನರು ಲಿಚ್ಚವಿಯವರಿಗೆ ಬೋಧಿಸಿದ್ದರು.  ಅದು ಹೀಗಿದೆ :

ಮಾತಾಪಿತೃಗಳನ್ನು ಮತ್ತು ಗುರುಗಳನ್ನು ಯೋಗ್ಯವಾಗಿ ಸಲಹಬೇಕು (ಸೇವೆ ಮಾಡಬೇಕು) ಸರ್ವಜೀವಿಗಳಿಗೆ ಅನುಕಂಪ ತೋರಬೇಕು, ಸತ್ಯವನ್ನೇ ಹೇಳಬೇಕು ಈ ಸದ್ಗುಣಗಳನ್ನು ಪಾಲಿಸಬೇಕು.

ಯಾವರೀತಿ ಗುರುವು ಶಿಷ್ಯನಿಂದ ಗೌರವ ಪಡೆಯುತ್ತಾರೆಯೋ ಹಾಗೆಯೇ ಸಂಬಂಧಗಳು ಸರಿಯಾಗಿ ಪಾಲಿಸಲ್ಪಡಬೇಕು.

ಇದು ಸನಾತನ ಧಮ್ಮವಾಗಿದೆ.  ಇದರಿಂದಾಗಿ ದೀರ್ಘ ಆಯಸ್ಸು ಲಭಿಸುತ್ತದೆ.  ಆದ್ದರಿಂದಾಗಿ ಸರ್ವರು ಇದನ್ನು ಪಾಲಿಸಬೇಕು.


 

Thursday 27 May 2021

ಸಮ್ಮಸಂಬೋಧಿಪ್ರಾಪ್ತಿಯ ನಂತರದ 7 ವಾರಗಳು. 7 weeks after the enlightenment

   ಸಮ್ಮಸಂಬೋಧಿಪ್ರಾಪ್ತಿಯ ನಂತರದ 7 ವಾರಗಳು

 ಮೊದಲನೇಯ ವಾರ ಬೋಧಿವೃಕ್ಷದ ಕೆಳಗೆ ಪಲ್ಲಂಕ ಸಪ್ತಾಹ



 ಈ ಪ್ರಥಮ ವಾರವನ್ನು ಭಗವಾನರು ಬೋಧಿವೃಕ್ಷದ ಕೆಳಗೆ ಅಪರಾಜಿತ ಸಿಂಹಾಸನದ ಮೇಲೆ ಸಮ್ಮಸಂಬೋಧಿ ಪ್ರಾಪ್ತಿ, ಅರಹತ ಸುಖವಾದ ನಿಬ್ಬಾಣದ ವಿಮುಕ್ತಿ ಸುಖವನ್ನು ಅನುಭವಿಸುತ್ತ ಪರಮಶಾಂತತೆಯನ್ನು ಅನುಭವಿಸಿದರು. ಹಾಗೂ ಪಟಿಚ್ಚ ಸಮುಪ್ಪಾದವನ್ನು ವಿಶ್ಲೇಷಣಾತ್ಮಕವಾಗಿ ಅರಿತರು. ಈಗ ವಿವರವಾಗಿ..

ಭಗವಾನರು ಬೋಧಿಪ್ರಾಪ್ತಿಯ ನಂತರ ಹೀಗೆ ಯೋಚಿಸಿದರು : ಈ ಅಪಾರಜಿತ ಸಿಂಹಾಸನಕ್ಕಾಗಿ ನಾನು 4 ಅಸಂಕ್ಯೇಯ ಹಾಗೂ ಒಂದು ಲಕ್ಷ ಕಲ್ಪಗಳವರೆವಿಗೆ ಸಂಸಾರದಲ್ಲಿ ಸುತ್ತಾಡಬೇಕಾಯಿತು ಹಾಗೂ ಪರಿಶ್ರಮ ಪಡಬೇಕಾಯಿತು. ದಶ ಪಾರಮಿಗಳನ್ನು 3 ಹಂತಗಳಲ್ಲಿ ಪರಿಪೂರ್ಣಗೋಳಿಸಬೇಕಾಯಿತು.. ಈ ಅಪರಾಜಿತ ಗದ್ದುಗೆಗಾಗಿ ನಾನು ಅನೇಕ ಬಾರಿ ಶಿರವನ್ನು, ಹೃದಯವನ್ನು, ಚಕ್ಷುಗಳನ್ನು ಅನೇಕ ಬಾರಿ ನೀಡಬೇಕಾಯಿತು. ಈ ಅಪಾರಜೀತಕ್ಕಾಗಿ ನಾನು ವೆಸ್ಸಂತರನಾಗಿದ್ದಾಗ ನನ್ನ ಪುತ್ರ ಜಾಲಿ ಹಾಗೂ ಮಗಳು ಕಣ್ಹಜಿನ ಮತ್ತು ಮಡದಿಯಾದ ಮಾದ್ರಿಯನ್ನು ಸಹಾ ದಾನ ಮಾಡಬೇಕಾಯಿತು. ಈ ಅಪಾರಜಿತಕ್ಕಾಗಿ ನಾನು ಐದು ವಿಧದ ಮಾರರನ್ನು ಜಯಿಸಿದ್ದೇನೆ. ಇದು ಪರಮ ಮಂಗಳಕರವೂ ಹಾಗೂ ಪರಮಭವ್ಯವು ಆದಂತಹ ಪ್ರಜ್ಞಾಸನವಾಗಿದೆ. ಇದರಿಂದ ನಾನು ಬೋಧಿಸತ್ವನಾಗಿ ಮಾಡಿದ್ದಂತಹ ಎಲ್ಲಾ ಬಯಕೆಗಳು, ಸಮ್ಮಸಂಬೋಧಿಯು ಪ್ರಾಪ್ತವಾಗಿದೆ. ಈ ಗದ್ದುಗೆಯ ಮೇಲೆ ಅರಿಯಬಹುದಾದಂತಹ ಸರ್ವವನ್ನು ಅರಿಯದೇ ನಾನು ಮೇಲೆ ಏಳುವುದಿಲ್ಲ.


ಹೀಗೆಯೇ ನಂತರ ಅವರು ಅದೇ ಆಸನದಲ್ಲಿ ಪಟಿಚ್ಚಸಮುಪ್ಪಾದದ ಅನುಲೋಮ ಕ್ರಮವಾದ ಸರಣಿಯನ್ನು ವಿಶ್ಲೇಷಿಸಿದರು. 

ಇದರಿಂದ, ಇನ್ನೊಂದು ಉದಯಿಸುತ್ತದೆ. ಇದರ ಉದಯದಿಂದ ಇದು ಉದಯಿಸುತ್ತದೆ. ಹೇಗೆಂದರೆ : ಅವಿದ್ಯೆ(ಅಜ್ಞಾನ)ಯಿಂದ ಸಂಖಾರಗಳು (ಮನೋ ನಿಮರ್ಿತಿಗಳು) ಉದಯಿಸುತ್ತದೆ.

ಸಂಖಾರಗಳಿಂದ ವಿನ್ಯಾನವು ಉದಯಿಸುತ್ತದೆ.

ವಿನ್ಯಾನದಿಂದ ನಾಮರೂಪಗಳು ಉದಯಿಸುತ್ತದೆ.

ನಾಮರೂಪಗಳಿಂದ 6 ಇಂದ್ರೀಯಾಧಾರಗಳು ಉದಯಿಸುತ್ತದೆ.

6 ಇಂದ್ರೀಯಾಧಾರಗಳಿಂದ ಸ್ಪರ್ಶವು ಉದಯಿಸುತ್ತದೆ.

ಸ್ಪರ್ಶಗಳಿಂದ ವೇದನೆಗಳು ಉದಯಿಸುತ್ತದೆ.

ವೇದನೆಯಿಂದ ತನ್ಹಾವು ಉದಯಿಸುತ್ತದೆ.

ತನ್ಹಾದಿಂದ ಉಪಾದಾನ ಉದಯಿಸುತ್ತದೆ.

ಉಪಾದಾನದಿಂದ ಭವವು ಉದಯಿಸುತ್ತದೆ.

ಭವದಿಂದ ಜನ್ಮ ಉದಯಿಸುತ್ತದೆ.

ಜನ್ಮದಿಂದ ಜರಾಮರಣ ಒಟ್ಟಾರೆ ದುಃಖರಾಶಿಯು ಉದಯಿಸುವುದು.

ಹೀಗೆ ನುಡಿದ ನಂತರ ಭಗವಾನರು ಉದಾನವೊಂದನ್ನು ನುಡಿದರು. 

ಯಾವಾಗ ಪರಿಶ್ರಮ ಧ್ಯಾನಿ ಜ್ಞಾನಿಗಳು ಅಸ್ತಿತ್ವದ ಸ್ಥಿತಿಗಳನ್ನು ಧ್ಯಾನಿಸುವರೋ, ಆಗ ಅವರು ಕಾರಣ ಮತ್ತು ಪರಿಣಾಮಗಳ ಸ್ವರೂಪವನ್ನು ಅರಿಯುವರು. ಆಗ ಎಲ್ಲಾ ಸಂದೇಹಗಳು ನಿವಾರಣೆಯಾಗುವುವು. 

ನಂತರ ಭಗವಾನರು ಹಾಗೆಯೇ ಕಾರಣ ಮತ್ತು ಪರಿಣಾಮದ ಸರಪಳಿಯನ್ನು ಪರೋಕ್ಷವಾಗಿ ವಿಶ್ಲೇಷಿಸಿದರು. 

ಆ ಸ್ಥಿತಿಯು ಇಲ್ಲದಿದ್ದರೆ, ಈ ಸ್ಥಿತಿಯು ಉಂಟಾಗುವುದಿಲ್ಲ. ಆ ಸ್ಥಿತಿಗಳ ಉದಯಿಸುವಿಕೆಯ ನಿರೋಧದಿಂದ ಈ ಸ್ಥಿತಿಯು ನಿರೋಧವು ಆಗುತ್ತದೆ.

ಹೇಗೆಂದರೆ ಅವಿದ್ಯೆಯ (ಅಜ್ಞಾನ)ದ ಪೂರ್ಣ ನಾಶದಿಂದ ಮತ್ತು ನಿರೋಧದಿಂದ ಸಂಖಾರವು ನಿರೋಧವಾಗುತ್ತದೆ.

ಸಂಖಾರಗಳ ನಿರೋಧದಿಂದ ವಿನ್ಯಾನದ ನಿರೋಧವಾಗುತ್ತದೆ. (ನಿಲುಗಡೆ/ಅಂತ್ಯ)

ವಿನ್ಯಾನದ ನಿರೋಧದಿಂದ ನಾಮರೂಪದ ನಿರೋಧವಾಗುತ್ತದೆ. 

ನಾಮರೂಪದ ನಿರೋಧದಿಂದ 6 ಇಂದ್ರೀಯಗಳ ನಿರೋಧವಾಗುತ್ತದೆ. 

6 ಇಂದ್ರೀಯಗಳ ನಿರೋಧದಿಂದ ಸ್ಪರ್ಶವು ನಿರೋಧವಾಗುತ್ತದೆ. 

ಸ್ಪರ್ಶಗಳ ನಿರೋಧದಿಂದ ವೇದನೆಗಳ ನಿರೋಧವಾಗುತ್ತದೆ. 

ವೇದನೆಗಳ ನಿರೋಧದಿಂದ ತನ್ಹಾ ನಿರೋಧವಾಗುತ್ತದೆ. 

ತನ್ಹಾದ ನಿರೋಧದಿಂದ ಉಪದಾನದ ನಿರೋಧವಾಗುತ್ತದೆ. 

ಉಪದಾನದ ನಿರೋಧದಿಂದ ಭವದ ನಿರೋಧವಾಗುತ್ತದೆ. 

ಭವದ ನಿರೋಧದಿಂದ ಜನ್ಮದ ನಿರೋಧವಾಗುತ್ತದೆ.

ಜನ್ಮದ ನಿರೋಧದಿಂದ ಇಡೀ ದುಃಖರಾಶಿಯ ನಿರೋಧವಾಗುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಭಗವಾನರು ಇನ್ನೊಂದು ಉದಾನವನ್ನು ನುಡಿದರು. 

ಯಾವಾಗ ಪರಿಶ್ರಮ ಧ್ಯಾನಿ ಜ್ಞಾನಿಗಳು ಅಸ್ತಿತ್ವದ ಸ್ಥಿತಿಗಳನ್ನು ವಿಶ್ಲೇಷಿಸುವರೋ ಆಗ ಅವರು ಕಾರಣಗಳ ನಿರೋಧವನ್ನು ಅರಿಯುತ್ತಾರೆ, ಆಗ ಅವರ ಎಲ್ಲಾ ಸಂದೇಹಗಳು ದೂರವಾಗುತ್ತದೆ. 

ಹೀಗೆಯೇ ಭಗವಾನರು ಪಟಿಚ್ಚ ಸಮುಪ್ಪಾದ ಅನುಲೋಮ ಕ್ರಮ ಹಾಗು ಪ್ರತಿಲೋಮ ಕ್ರಮದಿಂದ ಒಟ್ಟಾಗಿ ಅರಿತರು. ನಂತರ ಉದಾನವೊಂದನ್ನು ಹಾಡಿದರು. 

ಯಾವಾಗ ಪರಿಶ್ರಮ ಜ್ಞಾನಿ ಅಸ್ತಿತ್ವದ ಸ್ಥಿತಿಗಳನ್ನು ಧ್ಯಾನಿಸುವನೋ ಆತನು ಮಾರನ ಸೈನ್ಯವನ್ನು ಕತ್ತಲೆಯನ್ನು ದೂರೀಕರಿಸುವ ಸೂರ್ಯನಂತೆ ಚದುರಿಸಿಬಿಡುವನು. ಎಂದು ನುಡಿದರು.

ಈ ರೀತಿಯಾಗಿ ಜ್ಞಾನ ಗಳಿಸಿದ ಅವರು ಎಲ್ಲರ ಆಸ್ತಿತ್ವಕ್ಕೆ ಕಾರಣವಾಗುವ, ಎಲ್ಲರೂ ನಂಬುವ ಹಾಗೆ ಯಾವ ದೇವರನ್ನು (ಸೃಷ್ಟಿಕರ್ತ, ಪಾಲನಕರ್ತ, ನಾಶಕರ್ತ) ಕಾಣಲಿಲ್ಲ. ಯಾವ ಆತ್ಮನನ್ನು ಅವರು ಕಾಣಲಿಲ್ಲ. ಪರರು ಸಮಾಧಿ ಸ್ಥಿತಿಗಳಿಗೆ ದೇವರೆಂದು ಮತ್ತು ಆತ್ಮವೆಂದು ಕರೆಯುತ್ತಾರೆ ಎಂದು ತಿಳಿದರು. ಹೀಗೆ ಬೋಧಿಪ್ರಾಪ್ತಿಯ ದ್ವಿತೀಯ ದಿನದಂದು ಪಟಿಚ್ಚ ಸಮುಪ್ಪಾದ ಸ್ಪಷ್ಟವಾಗಿ ಅರಿತ ನಂತರ ಅವರು ಉಳಿದ ಮೂರನೇಯ, ನಾಲ್ಕನೇಯ, ಐದನೇಯ , ಆರನೇಯ ಹಾಗೂ ಏಳನೇಯ ದಿನದಂದು ಅರಹತ್ವದ ಆನಂದದಲ್ಲಿ ತಲ್ಲಿನರಾದರು.

     ಎರಡನೆಯ ವಾರ ಅನಿಮಿಶ ಸಪ್ತಾಹ (ಬೋಧಿವೃಕ್ಷದ ಕಸಿಣಾ ಧ್ಯಾನ)



ದ್ವಿತೀಯ ವಾರವನ್ನು ಅವರು ಕೃತಜ್ಞತಾಪೂರ್ವಕವಾಗಿ ಬೋಧಿವೃಕ್ಷವನ್ನು ವೀಕ್ಷಸುತ್ತಾ ಧ್ಯಾನ ಮಾಡಿದರು. ಅದಕ್ಕೆ ಮುಂಚೆ ಭಗವಾನರಿಗೆ ಸಾದಾರಣ ದೇವತೆಗಳ ಹಾಗೂ ಬ್ರಹ್ಮರ  ಗೊಂದಲ ಗಮನಕ್ಕೆ ಬಂದಿತು.  ಅದು ಎನೆಂದರೆ ಭಗವಾನರು ಸಮ್ಮಸಂಬೋಧಿಯನ್ನು ಪಡೆದಿದ್ದಾರೋ ಅಥವಾ ಇಲ್ಲವೂ ಎಂಬ ಸಂಶಯವನ್ನು ಅವರಲ್ಲಿ ನಿವಾರಿಸಬೇಕಿತ್ತು. ಹೀಗಾಗಿ ಭಗವಾನರು ತಮ್ಮ ಋದ್ಧಿಶಕ್ತಿಯಿಂದ ಆಕಾಶದಲ್ಲಿ ಪ್ರಥಮ ಬಾರಿಗೆ ಯಮಕ ಪಟಿಹಾರಿಯ ಅಧ್ಭುತ ಪವಾಡವನ್ನು ಪ್ರದರ್ಶಸಿದರು, ಅಂದರೆ ಏಕ ಕಾಲದಲ್ಲಿಯೇ ಅಗ್ನಿ ಹಾಗೂ ಜಲವನ್ನು ದೇಹದಿಂದ ಹೊರ ಹೊಮ್ಮಿಸುವುದು, ನಂತರ ಅವರು ಬೋಧಿವೃಕ್ಷದ ಈಶಾನ್ಯ ದಿಕ್ಕಿಗೆ ನಿಂತು ಬೋಧಿವೃಕ್ಷದ ಅಪರಾಜಿತ ಪಲ್ಲಂಗ(ಸಿಂಹಾಸನ) ಅಂದರೆ ಅವರು ದ್ಯಾನಿಸಿದ ಸ್ಥಳವನ್ನು ಒಟ್ಟಾರೆ ಅನಿಮಿಶವಾಗಿ ಅಂದರೆ ರೆಪ್ಪೆ ಮುಚ್ಚದೆ ವೀಕ್ಷಿಸತೊಡಗಿದರು ಏಕೆಂದರೆ ಅವರ ಬೋಧಿಪ್ರಾಪ್ತಿಯ ವೇಳೆಯಲ್ಲಿ ನೆರಳಾಗಿ ಆಶ್ರಯವಾಗಿ ಅದು ಸಹಾಯ ಮಾಡಿತ್ತು.  ನಾನು ನಿಜಕ್ಕೂ ಈ ಅಪರಾಜಿತ ಸಿಂಹಾಸನದ ಮೇಲೆಯೇ ಸವರ್ೋನ್ನತ ಸರ್ವಜ್ಞತೆಯನ್ನು ಪ್ರಾಪ್ತಿ ಮಾಡಿದೇನೆ. ಎಂದು ನೋಡಲು ಆರಂಬಿಸಿದರು. ಹೀಗೆ ಬುದ್ಧಭಗವಾನರ ಮೂದಲ ಬೋದನೆಯೇ ಕೃತಜ್ಞತೆ ಎಂದು ಮೌನವಾಗಿಯೇ ಬೋಧಿಸಿದ್ದಾರೆ. ಆ ವೃಕ್ಷಕ್ಕೇ ಅವರ ಜೀವಂತ ಕಾಲದಲ್ಲೇ ಗೌರವ ದೊರೆತ್ತಿತ್ತು, ಹಾಗೂ ಅದು ಇರುವವರೆಗೂ ಅದು ಗೌರವ ಪಡೆಯುತ್ತಲೇ ಇರುವುದು. ಹೀಗೆ ಬೋಧಿ ವಂದನೆ ಮೌಡ್ಯವಲ್ಲ ಬದಲಾಗಿ ಕೃತಜ್ಞತಾಪೂರ್ವಕ ಗೌರವಯುತ ವಂದನೆ. ಈ ಸ್ಥಳಕ್ಕೆ ಅನಿಮಿಶ ಚೇತೀಯ ಎಂದು ಕರೆಯುತ್ತಾರೆ. 

  ಮೂರನೆಯ ವಾರ ಸ್ವರ್ಣರತ್ನ ಸೇತುವೆಯಲ್ಲಿ ಚಂಕಮ ಸಪ್ತಾಹ





  ದೇವತೆಗಳು ಅಪರಾಜಿತ ಸಿಂಹಾಸನ ಹಾಗೂ ಅನಿಮಿಶ ಚೇತೀಯಗಳ ನಡುವೆ ರತ್ನಭರಿತಸ್ವರ್ಣ ಸೇತುವೆಯನ್ನು ಆಕಾಶದಲ್ಲೇ ನಿಮರ್ಿಸಿದರು. ಭಗವಾನರು ಅದರ ಮೇಲೆ ಪ್ರತ್ಯಕ್ಷರಾಗಿ ನಡಿಗೆಯ ಧ್ಯಾನವನ್ನು ವಾರದ ಕಾಲ ಮಾಡಿದರು. ಆ ಸಮಯದಲ್ಲಿ ಅವರು ಫಲ ಸಮಾಪತ್ತಿಯ ವಿಶ್ಲೇಶಣೆ ಮಾಡಿದರು. ಆಗ ದೇವತೆಗಳಲ್ಲಿ ಸಂಶಯವು ಪೂರ್ಣವಾಗಿ ನಿವಾರಣೆಯಾಯಿತು.

      ನಾಲ್ಕನೇಯ ವಾರ ರತನ ಘರ್ ಸಪ್ತಾಹ (ರತ್ನ ಘರ್(ಕೋಠಡಿಯಲ್ಲಿ)ನಲ್ಲಿ ಧ್ಯಾನ)






  ಚತುರ್ಥವಾರದಂದು ದೇವತೆಗಳು ಹಾಗೂ ಬ್ರಹ್ಮರು ರತ್ನಗಳ ಸುಂರರವಾದ ಕೋಠಡಿಯೊಂದನ್ನು ನಿಮರ್ಿಸಿದರು. ಅದು ಬೋಧಿವೃಕ್ಷದ ವಾಯುವ್ಯದಿಕ್ಕಿನತ್ತ ಇತ್ತು. ನಂತರ ಅದರೊಳಗೆ ಭಗವಾನರು ಪ್ರವೇಶಿಸಿ ಧ್ಯಾನದಲ್ಲಿ ಕುಳಿತರು. ಅಲ್ಲಿ ಅವರು ಮೋದಲು ವಿನಯ ಪಿಟಕದ ಅಂದರೇ ಶೀಲದ ಕುರಿತು ವಿಶ್ಲೇಷಣೆ ಮಾಡಿದರು, ನಂತರ ಸುತ್ತ ಪಿಟಕದ ಕುರಿತು ಆಂದರೇ ಸಮಾಧಿಯ ಕುರಿತು ವಿಶ್ಲೇಷಣೆ ಮಾಡಿದರು, ನಂತರ ಅಭಿಧಮ್ಮದ ಕುರಿತು ಅಂದರೆ ಪ್ರಜ್ಞಾದ ಕುರಿತು ಧ್ಯಾನ ಮಾಡಲು ತೊಡಗಿದರು. ಅವರು ಹಾಗೇ ಅವರು ರೂಪ, ಚಿತ್ತ, ಚೇತಸಿಕಾ ಹಾಗೂ ನಿಬ್ಬಾಣದ ಬಗ್ಗೆ ವಿಶ್ಲೇಶಣೆ ಆರಂಭಿಸಿದರು. ಮೋದಲ ಆರು ಅಭಿದಮ್ಮದ ವಿಷಯಗಳ ಕುರಿತು ಧ್ಯಾನಿಸಿದ ನಂತರ ಇವುಗಳ ನಡುವೆ ಇರುವಂತಹ ಸಂಬಂಧಗಳ ಬಗ್ಗೆ (ಪಟ್ಠಾನ)ಆಳ ಧ್ಯಾನದಲ್ಲಿ ತೋಡಗಿರುವಾಗ ಅವರ ಶರೀರದಿಂದ 6 ಬಗೆಯ ಪ್ರಭಾಯುತ ಬೃಹತ್ ಕಿರಣಗಳು ಹೊರ ಹೊಮ್ಮಿತು. ಅವೆಂದರೆ ನೀಲಿ, ಹಳದಿ, ಕೆಂಪು, ಬಿಳಿ, ಕಿತ್ತಳೆ, ಹಾಗೂ ಇವುಗಳ ಮಿಶ್ರಿತ ವರ್ಣ. ಈ ಕಿರಣಗಳು ಮೋದಲು ಒಂದು ಮನೆಯಷ್ಟು ದೊಡ್ಡದಾಗಿ ನಂತರ ಬೃಹತ್ ಪರ್ವತದಷ್ಟು ವಿಸ್ತಾರವಾದವು. ಅವರ ತಲೆಯಿಂದ ಹೋರಟಂತಹ ನೀಲಿ ಪ್ರಾಬಲ್ಯಯುಳ್ಳ ಪ್ರಭಾಸಾರವು ಮೇಲಿನ ಆರು ಸುಗತಿ ಹಾಗೂ 20 ಬ್ರಹ್ಮಲೋಕಗಳವರೆವಿಗೂ ಹಬ್ಬಿತು. ಕೇಶ ಹಾಗೂ ಕಣ್ಣುಗಳಿಂದ ನೀಲಿ ಪ್ರಭೇಯು ಪ್ರಬಲ್ಯವಾಗಿಯು, ಚರ್ಮದಿಂದ ಚಿನ್ನದ ಸುವರ್ಣ ವರ್ಣವು ಪ್ರಾಬಲ್ಯವಾಗಿಯು, ಹಲ್ಲು ಹಾಗೂ ಮೂಳೆಗಳಲ್ಲಿ ಬಿಳಿ ವರ್ಣವು ಪ್ರಾಬಲ್ಯವಾಗಿಯು, ರಕ್ತ ಹಾಗೂ ಮಾಂಸದಲ್ಲಿ ಕೆಂಪು ವರ್ಣ ಪ್ರಬಾಲ್ಯವಾಗಿಯು, ನಂತರ ಈ ಎಲ್ಲಾ ವರ್ಣಗಳು ಮಿಶ್ರಿತವಾಗಿ ಈ ಕಿರಣಗಳು ಆ ರತ್ನಘರನಲ್ಲಿ ಪ್ರತಿಫಲಿಸಿ ಅಧ್ಭುತವಾದ ವರ್ಣಗಳ ಹಾಗೂ ಬೆಳಕಿನ ಭವ್ಯ ವೈಭವವನ್ನು ಸೃಷ್ಡಿ ಮಾಡಿತು.. ಅವರ ದೇಹದ ಮುಂಬಾಗದಿಂದ, ಹಿಂಭಾಗದಿಂದ, ಬಲಭಾಗದಿಂದ, ಏಡಭಾಗದಿಂದ, ಮೇಲ್ಭಾಗದಿಂದ ಮತ್ತು ಕೆಳಬಾಗದಿಂದ  ಒಂದೂಂದು ಭಾಗದಿಂದ ಒಂದೂಂದು ವರ್ಣವೂ ಹೊರಹೊಮ್ಮಿ ನಂತರ ಎಲ್ಲಾ ವರ್ಣಗಳ ಸಂಗಮವಾಗಿ ಪರಮ ಅಧ್ಭುತ ದೃಶ್ಯಾವಳಿ ಆ ಸ್ಥಳವೂ ಸಾಕ್ಷಿಯಾಯಿತು. ಇಲ್ಲಿ ಭಗವಾನರು ಧಮ್ಮಾರತನದ ಬಗ್ಗೆ ಧ್ಯಾನಿಸಿದರು, ಈ ಸ್ಥಳಕ್ಕೆ ರತನ ಘರ ಚೇತೀಯ ಎಂದು ಕರೆಯುತ್ತಾರೆ. ಈ ವರ್ಣಗಳನ್ನೇ ಬೌದ್ಧರ ಧ್ವಜಕ್ಕೂ ಆಯ್ಕೆ ಮಾಡಲಾಗಿದೆ. ಈ ಆರು ವರ್ಣಗಳಿಗೆ ಅರ್ಥವಿದೆ ಅದೆಂದರೆ ಬಿಳಿ ವರ್ಣವು ಪರಿಶುದ್ಧತೆಗೆ, ನೀಲಿ ಶ್ರದ್ಧೆಗೆ, ಕೆಂಪು ಪ್ರಜ್ಞಾಗೆ, ಕಿತ್ತಳೆ ವಿರಾಗಕ್ಕೆ, ಮಿಶ್ರಿತ ವರ್ಣವು ಎಲ್ಲಾ ಉದಾತ್ತಗುಣಗಳಿಗೆ ಪ್ರತಿನಿಧಿಸುತ್ತವೆ.

  ಐದನೇಯಯ ವಾರ ಅಜಪಾಲ ವೃಕ್ಷ ಸಪ್ತಾಹ (ಆಲದಮರದ ಕೆಳಗೆ ಧ್ಯಾನ)


  ಅಜಪಾಲ ಎಂದರೆ ಕುರಿಗಳು ಕಾಯುವವರ ಸ್ಥಳ, ಅಂದರೆ ಅದು ಅದಕ್ಕೆ ಮುಂಚೆ ಅದಕ್ಕೆ ಬಳಕೆಯಾಗುತ್ತಿತ್ತು. ಅದು ಮಹಬೋಧಿ ವೃಕ್ಷಕ್ಕೆ ಪೂರ್ವ ದಿಕ್ಕಿನಲ್ಲಿದೆ. ಐದನೆಯ ವಾರ ಇಲ್ಲಿ ಧ್ಯಾನಿಸಲು ಆರಂಬಿಸುವಾಗ ಬ್ರಾಹ್ಮಣನೊಬ್ಬನು ಭಗವಾನರಲ್ಲಿ ಯಾರು ಬ್ರಾಹ್ಮಣ ? ಎಂಬ ಪ್ರಶ್ನೆ ಹಾಕಿ ಅದರ ಉತ್ತರ ಪಡೆದನು. ಭಗವಾನರು ಸಮೀಪದ ಆಲದ ಮರದ ಕೆಳಗೆ ಧ್ಯಾನ ಮಾಡುತ್ತಿದ್ದಾಗ ಮಾರನ ಆಗಮನವಾಗುತ್ತದೆ, ಅತನು ತನ್ನ ನಿಯಂತ್ರಣದಲ್ಲಿ ಲೋಕಗಳೆಲ್ಲವಿದ್ದರೂ ಭಗವಾನರು ಇಲ್ಲದಿರುವುದನ್ನು ಕಂಡು ಬುದ್ಧರೋಂದಿಗೆ ಮಾತಾನಾಡಿ ನಿರಾಶನಾಗಿ ದುಃಖಿತನಾಗಿರುವುದನ್ನು ಕಂಡು ಮಾರನ ಪುತ್ರಿಯರು ಭಗವಾನರಲ್ಲಿ ಕಾಮವನ್ನು ಪ್ರಚೋದಿಸಲು ಸಿದ್ಧರಾಗಿ ಬರುತ್ತಾರೆ. ಮಾರನ ಪುತ್ತಿಯರಾದ ತನ್ಹಾ, ರತಿ, ಹಾಗೂ ರಾಗ ಎಂಬ ಹೆಸರಿನ ಮೂವರು ಪರಮಸುಂದರ ಯುವತಿಯರು ಅವರ ಗಮನ ಸೆಳೆಯಲು, ಆಕಷರ್ಿಸಲು, ಮೋಹವನ್ನುಂಟು ಮಾಡಲು, ವಶಮಾಡಿಕೊಳ್ಳಲು ಅತ್ಯಂತ ಉದ್ರೇಕಕಾರಿ ನೃತ್ಯ, ಗೀತೆಗಳು, ಇನ್ನೀತರ ಸರ್ವಮೋಹಿನಿ ತಂತ್ರಗಳನ್ನೇಲ್ಲವನ್ನು ಮಾಡಿದರು, ವಿವಿಧ ವಯಸ್ಸಿನ ಸ್ತೀಯರಾಗಿ ಕಾಣಿಸಿಕೊಂಡು, ವಿವಿದ ಬಗೆಯ ವಸ್ತ್ರಗಳಿಂದ ,ವಿವಿಧ ಬಗೆಯ ರೂಪಗಳಿಂದ ವೈವಿಧ್ಯಮಯ ಶೃಂಗಾರಗಳಿಂದ ಪ್ರಚೋಧಿಸುತ್ತಾರೆ. ಅದರೆ ಭಗವಾನರ ಗಮನವು ಅಣು ಮಾತ್ರವೂ, ಕ್ಷಣಾರ್ಧ ಮಾತ್ರವೂ ಆ ಕಡೆ ವಾಲಲಿಲ್ಲ. ಬದಲಾಗಿ, ಫಲ ಸಮಾಪತ್ತಿ ಹಾಗೂ ನಿಬ್ಬಾಣ ಸುಖದಲ್ಲಿ ತಲ್ಲಿನರಾಗಿರುತ್ತಾರೆ. 


ಯಾರ ಜಯವು ಯಾರಿಂದಲೂ, ಯಾವುದರಿಂದಲೂ ಅಪಜಯವಾಗದೇ, ಜಯಿಸಿದ ಲೋಕಗಳ ಕಲ್ಮಶಗಳು ಯಾರನ್ನು ಹಿಂಬಾಲಿಸುವುದಿಲ್ಲವೋ ಅಂತಹ ಬುದ್ಧರು ಅನಂತ ವ್ಯಾಪ್ತಿವುಳ್ಳವರು, ಅಂತಹವರನ್ನು ಯಾವ ಹಾದಿಯಿಂದ ನೀನು

  ಶೋಧಿಸುವೆ? (179)

ಯಾರಲ್ಲಿ ಜಾಲದಲ್ಲಿ ಸಿಕ್ಕಿಸಿಕೊಳ್ಳುವ, ಗೊಂದಲದಲ್ಲಿ ಸಿಲುಕುವ, ವಿಷಯವಾದ ತನ್ಹಾ ಇಲ್ಲವಾಗಿದೆಯೋ ಅಂತಹ ಅನಂತ ವ್ಯಾಪ್ತಿವುಳ್ಳವರಿಗೆ ಹಾದಿಯೇ ಇಲ್ಲ. ಅಂತಹವರನ್ನು ಯಾವ ಹಾದಿಯಿಂದ ನೀನು

  ಶೋಧಿಸುವೆ. (180

ನಂತರ ಆ ಮಾರಪುತ್ರಿಯರು ಬಳಲಿ, ನಿರಾಶರಾಗಿ ಅಲ್ಲಿಂದ ಹೊರಟರು.




  ನಂತರ ಭಗವಾನರು ಯಾರು ಲೋಕಗಳಿಗೆಲ್ಲಾ ಶೀಲದಲ್ಲಿ, ಸಮಾಧಿಯಲ್ಲಿ, ಪ್ರಜ್ಞಾದಲಿ, ಮತ್ತು ವಿಮುಕ್ತಿಯಲ್ಲಿ ಶ್ರೇಷ್ಟರು ಎಂದು ಶೋಧಿಸಿದಾಗ ಅವರಿಗಿಂತ ಪರಮಶ್ರೇಷ್ಟರು ಯಾರು ಇಲ್ಲ ಎಂದು ಅವರಿಗೆ ಅರಿವಾಯಿತು. ಹೀಗಾಗಿ ಅವರು ಧಮ್ಮವನ್ನೇ ಗೌರವಿಸುವುದು ಎಂದು ನಿಧರ್ಾರ ಮಾಡಿದರು.. ಆಗ ಅವರ ಚಿತ್ತವನ್ನು ಓದಿದಂತಹ ಬ್ರಹ್ಮ ಸಹಂಪತಿಯು ಕಾಣಿಸಿಕೊಂಡು ಹಿಂದಿನ ಬುದ್ಧರು ಸಹಾ ಹೀಗೆಯೇ ಯಾವ ವ್ಯಕ್ತಿಯನ್ನು ಬುದ್ಧರಿಗಿಂತ ಶ್ರೇಷ್ಟರಾಗಿ ಕಾಣದೆ ತಾವು ಶೋದಿಸಿದಂತಹ ಧಮ್ಮವನ್ನೇ ಗೌರವಿಸಿದರು. ಎಂಬಂತಹ ವಿಷಯವನ್ನು ತಿಳಿಸುತ್ತಾರೆ. ಹಾಗೂ ಬುದ್ಧರಿಗೆ ವಂದಿಸಿ ಅದೃಷ್ಯರಾಗುತ್ತಾರೆ.

 ಆರನೇಯ ವಾರ ಮುಚಲಿಂದ(ಮರದ ಕೆಳಗೆ ಧ್ಯಾನ)ಸಪ್ತಾಹ 


 ಆರನೆಯ ವಾರದಂದು ಅವರು ಸಮೀಪದ ಮುಚಲಿಂದ ವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡಿತ್ತಿದ್ದರು. ಅವರು ಫಲ ಸಮಾಪತ್ತಿಯಲ್ಲಿ ತಲ್ಲಿನರಾಗಿದ್ದರು. ಈ ಸ್ಥಳವು ಮಹಾಬೋಧಿವೃಕ್ಷಕ್ಕೇ ಈಶಾನ್ಯ ದಿಕ್ಕಿನಲ್ಲಿದೆ. ಆಗ ಭೀಕರ ಸಿಡಿಲು ಮಿಂಚಿನಿಂದ ಕೂಡಿದ ಬéೀಷಣ ಮಳೆಯು ಆಕ್ರಮಣ ಮಾಡಿತು, ಆಗ ಆವೃಕ್ಷದ ಕೇಳಗೆ ವಾಸವಾಗಿದ್ದಂತಹ ದಿವ್ಯ ಬೃಹತ್ ನಾಗರಾಜವು ಅವರು ನೆನಯದಿರಲೇಂದು ಅವರ ಸುತ್ತಲು ಏಳು ಬಾರಿ ಸುತ್ತಿಕೊಂಡು ಬೃಹತ್ ಹೆಡೆಯಿಂದ ಅವರ ತಲೆಯನ್ನು ಮಳೆಯಿಂದ ನೆನೆಯಲು ಬಿಡಲಿಲ್ಲ, ಆ ಬೃಹತ್ ಮಳೆಯು ವಾರವಿಡಿ ಬಿದ್ದಿತು, ಆ ಮುಚಲಿಂದ ನಾಗರಾಜನೂ ಸಹಾ ಏಳು ದಿನದವರೆವಿಗೂ ಅವರಿಗೆ ಹೀಗೇ ಮಳೆಯಿಂದ ರಕ್ಷಣೆಯನ್ನು ನೀಡಿದನು. ನಂತರ ಮಳೆಯು ನಿಂತಿತು , ಆ ನಾಗರಾಜನೂ ಸಹಾ ಅವರ ಶರೀರವನ್ನು ಬಿಟ್ಟು ಅವರ ಮುಂದೆ ಯುವಕನ ರೂಪದಲ್ಲಿ ರೂಪಾಂತರ ಹೊಂದಿ ಭಕ್ತಿಗೌರವದಿಂದ ಕೈಮುಗಿಯುತ್ತ ನಿಂತನು. ನಂತರ ಭಗವಾನರು ಧ್ಯಾನದಿಂದ ಎದ್ದರು, ಹಾಗೂ ಆತನನ್ನು ನೋಡಿ ಹೀಗೆ ಉದಾನವನ್ನು ನುಡಿದರು, :


    ಸಂತೃಪ್ತರು ಸುಖಿಗಳು,

   ಧಮ್ಮವನ್ನು ಆಲಿಸಿದವರು ಹಾಗೂ 

ಅರ್ಥಮಾಡಿಕೊಂಡಿರುವವರು ಸುಖಿಗಳು,

ಈ ಲೋಕಗಳಲ್ಲಿ ಸರ್ವಜೀವಿಗಳ ಬಗ್ಗೆ 

ಮೆತ್ತವನ್ನು ಹೊಂದಿರುವವರು ಸುಖಿಗಳು.


ಯಾರಲ್ಲಿ ಅಂಟುವಿಕೆಯಿಲ್ಲವೋ ಹಾಗೂ 

ಇಂದ್ರಿಯ ಬಯಕೆಗಳಿಂದ ಮೀರಿರುವವರೊ ಅವರು ಸುಖಿಗಳು.

ನಾನು ಎಂಬ ಭಾವನೆ ಯಾರಲ್ಲಿ ಅದೃಷ್ಯವಾಗಿದೆಯೋ 

ಅವರು ಪರಮ ಸುಖಿಗಳು

  ಏಳನೇಯ ವಾರ ರಾಜಾಯತನ(ಮರದ ಕೆಳಗೆ ಧ್ಯಾನ) ಸಪ್ತಾಹ


ಏಳನೇಯ ವಾರ ಅವರು ಸಮೀಪದ ರಾಜಯಾತನ ಮರದ ಕೆಳಗೆ ಅರಹತ್ವ ಸುಖದಲ್ಲಿಯೇ ಧ್ಯಾನಿಸಿದರು.. ಅದು ಮಹಾಬೋಧಿವೃಕ್ಷದ ದಕ್ಷಿಣ ದಿಕ್ಕಿನಲ್ಲಿದೆ. ಹೀಗೆ ಅವರು ಏಳು ದಿನಗಳ ಕಾಲ ಅರಹತ್ವ ಸುಖದಲ್ಲಿಯೇ ಇದ್ದರು. 

ನಂತರ ಭಗವಾನರು ಫಲಸಮಾಪತ್ತಿಯಿಂದ ಎದ್ದರು.. ಅಂದಿಗೆ 49 ದಿನಗಳು ಕಳೆದಿದ್ದರು. ಅಂದಿಗೆ ಬೋಧಿ ಪ್ರಾಪ್ತಿಯಾಗಿ 50ನೇ ದಿನವಾಗಿತ್ತು. ಅಂದು ಬುಧವಾರ ಶುಕ್ಲಪಕ್ಷ ಪಂಚಮಿಯಾಗಿತ್ತು.. 

ಏಳು ವಾರಗಳ ನಂತರದ 50ನೇಯ ದಿನದಂದು ಅವರ ಬಳಿಗೆ ದೇವೆಂದ್ರ ಶಕ್ರನು ಬಂದು ಅಳಲೇಕಾಯಿಯನ್ನು ನೀಡುತ್ತಾರೆ. ಅದನ್ನು ಸೇವಿಸಿ 49 ದಿನಗಳ ಉಪವಾಸ ಭಂಗ ಮಾಡುತ್ತಾರೆ. ಸಮ್ಮಕ್ ಸಂಬೋಧಿಪ್ರಾಪ್ತಿಯ ಬಳಿಕ 49 ದಿನಗಳ ನಂತರ ಸೇವಿಸಿದಂತಹ ಆಹಾರವೂ ಇದೇ ಆಗಿತ್ತು ,ಅಲ್ಲಿಯವರೆಗೆ ಭಗವಾನರು ಆಹಾರ, ನಿದ್ರೆ, ವಿಶ್ರಾಂತಿ ಯಾವುದು ಮಾಡಿರಲಿಲ್ಲ. ನಂತರ ಶಕ್ರನು ಅವರಿಗೆ ಹಲ್ಲುಜ್ಜಲು ನಾಗಲತೆಯನ್ನು ಹಾಗೂ ಮುಖತೋಳೆಯಲು ಅನೊತ್ತತ್ತ ಸರೋವರದಿಂದ ನೀರನ್ನು ತಂದು ಕೊಡುತ್ತಾನೆ. ನಂತರ ಅವರು ಅದೇ ರಾಜಾಯತನ ವೃಕ್ಷದ ಬಳಿಯಲ್ಲಿಯೇ ಕುಳಿತಿರುವಾಗ ಅವರ ಬಳಿಗೆ ಬರ್ಮ ದೇಶದ ಇಬ್ಬರು ವರ್ತಕರು ಅವರ ಬಳಿಗೆ ಬಂದರು ಅವರೇ ತಪುಸ್ಸ ಹಾಗೂ ಭಲ್ಲಿಕಾ. ಅವರು ಭಗವಾನರಿಗೆೆ ಕಜ್ಜಾಯ ಹಾಗೂ ಜೇನುತುಪ್ಪವನ್ನು ದಾನವಾಗಿ ನೀಡಲು ಬರುತ್ತಾರೆ, ಅದರೆ ಭಗವಾನರ ಬಳಿ ಪಿಂಡಪಾತ್ರೆಯು ಇರುವುದಿಲ್ಲ.  ಆಗ ಚತರ್ ಮಹರಾಜಿಕ ದೇವತೆಗಳು ಪಚ್ಚೆಯ ಪಿಂಡಪಾತ್ರೆಯನ್ನು ನೀಡುತ್ತಾರೆ. ಅವೆಲ್ಲವೂ ಭಗವಾನರ ಸಂಕಲ್ಪದಿಂದ ಒಂದಾಗಿ ಬಿಡುತ್ತದೆ. ಅದರಿಂದ ತಪುಸ್ಸ ಭಲ್ಲಿಕಾರ ಆಹಾರ ಸ್ವೀಕರಿಸುತ್ತಾರೆ.


 ನಂತರ ಆ ವ್ಯಾಪಾರಿಗಳು ಬುದ್ದರಲ್ಲಿ, ಹಾಗೂ ಧಮ್ಮದಲ್ಲಿ ಶರಣು ಹೋದರು. ಇವರೇ ಬುದ್ಧರ ಮೊದಲ ಹಿಂಬಾಲಕರು. ಆಗಿನ್ನೂ ಭಿಕ್ಖುಸಂಘ ನಿಮರ್ಾಣವಾಗದ ಕಾರಣ ಸಂಘಕ್ಕೆ ಶರಣು ಹೋಗಿರಲಿಲ್ಲ. ನಂತರ ಅವರು ಭಗವಾನರಲ್ಲಿ ಅವರ ನೆನಪಿಗಾಗಿ ಹಾಗೂ ಪೂಜೆಗಾಗಿ ಸ್ಮರಣಾತ್ಮಕ ಕಾಣಿಕೆ ಆಶಿಸಿದರು. ಆಗ ಬುದ್ಧ ಭಗವಾನರು ಅವರಿಗಾಗಿ ತಮ್ಮ ತಲೆಯ ಕೂದಲುಗಳನ್ನು ಸವರಿ ಆ ಕೇಶಧಾತುವನ್ನು ನೀಡಿದರು. ಅದನ್ನು ಆ ಇಬ್ಬರು ವರ್ತಕರು ಪರಮ ಐಶ್ವರ್ಯದಂತೆ, ಪರಮ ಪೂಜ್ಯತೆಯ  ಪ್ರತಿನಿಧಿಸುವ ಪರಮರತ್ನದಂತೆ ಸೀಕರಿಸಿದರು. ಹಾಗೂ ಅವನ್ನು ಪುಕ್ಕರಾವತಿ (ಬರ್ಮ)ದೇಶದ ಉಕ್ಕಾಲದಲ್ಲಿ (ರಂಗೂನ್ನಲಿ)್ಲ ಬೃಹತ್ ಸ್ತೂಪವನ್ನು ನಿಮರ್ಿಸಿ ಅದರಲ್ಲಿ ಚಿನ್ನದ ಕಳಶದಲ್ಲಿ ಪವಿತ್ರವಾದ ಕೇಶದಾತುವನ್ನಿಟ್ಟು ಪೂಜಿಸತೊಡಗಿದರು. ಇಂದಿಗೂ ಅದು ಇದೆ. ಆ ಬೃಹತ್ ಸ್ವರ್ಣ ಸ್ತೂಪಕ್ಕೆ  ಬರ್ಮದ ರಂಗೂನ್ನಲ್ಲಿ ಶ್ವೇಡಗಾನ್ ಪಗೂಡ ಎಂದು ಕರೆಯುತ್ತಾರೆ.








 

Tuesday 25 May 2021

ಬುದ್ಧಪುರ್ಣಮಿಯ ಆ ದಿನದ 63 ವೈಶಿಷ್ಟತೆಗಳು the significance of vesak or buddha purnima

 ಬುದ್ಧಪುರ್ಣಮಿಯ ಆ ದಿನದ 63 ವೈಶಿಷ್ಟತೆಗಳು


  ಬುದ್ಧ ಭಗವಾನರ ಜನ್ಮದ ದಿನ ಏನೇನೂ ಅಧ್ಭುತಗಳು ಸಂಭವಿಸಿದವು !?


         ಅಂದು ಒಟ್ಟು 32 ಅಧ್ಭುತಗಳು ಸಂಭವಿಸಿದವು.  ಬೋದಿಸತ್ತರ ಜನ್ಮ , ಅಸಿತ ಮುನಿಯ ಭವಿಷ್ಯವಾಣಿ ಹಾಗೂ ನಾಮಕರಣ ಒಟ್ಟು 35 ಘಟನೆಗಳು ನಡೆದವು 

  ಅಂದಿನ ವಾತವರಣವು ಅತ್ಯಂತ ಆಹ್ಲಾದಕರವಾಗಿ ತಂಪಾಗಿತ್ತು, ಪಕ್ಷಿಗಳೆಲ್ಲಾ ಇಂಪಾಗಿ ಹಾಡತೊಡಗಿದವು,  .ಲಘು ಭೂಕಂಪವು ಆಯಿತು, ಎಲ್ಲೇಡೆ ಸ್ವಗರ್ೀಯ ಹೊಂಬೆಳಕು, ಸ್ವಗರ್ೀಯ ಸಂಗೀತವು ಕೇಳಿಸಿತ್ತಿತ್ತು, ಸ್ವಗರ್ೀಯ ಸುಗಂಧಗಳು ಎಲ್ಲರನ್ನು ಮತ್ತೇರಿಸುವಂತಿತ್ತು,, ಅಲ್ಲಿ ದಶಸಹಸ್ರ ದೇವ ದೇವತೆಗಳ ಸಮೂಹವು ನೇರೆದಿತ್ತು,, ಅಂದು ಯಾರಿಗೂ ಹಸಿವಾಗಲಿಲ್ಲ, ಯಾರಿಗೂ ಬಾಯರಿಕೆಯಾಗಲಿಲ್ಲ, ಬಳಲಿಕೆಯೂ ಆಗಲಿಲ್ಲ, ಅಂದು ಅವೇಳೆಯಲ್ಲಿಯೂ ಹೂಗಳು ಹಾಗೂ ಹಣ್ಣುಗಳು ಗಿಡಗಳಲ್ಲಿ, ವೃಕ್ಷಗಳಲ್ಲಿ ಅವಿರ್ಭವಿಸಿದವು, ಅಂದು ರೋಗಿಗಳ ರೋಗಗಳು ವಾಸಿಯಾಯಿತು, ಕುರುಡರಿಗೆ ದೃಷ್ಟಿಯುಂಟಾಯಿತು, ಕಿವುಡರಿಗೆ ದ್ವನಿಯು ಕೇಳಿಸಿತು, ಮೂಕರಿಗೆ ಮಾತು ಬಂದಿತು, ಅಂಗವಿಕಲಿರಿಗೆ ಚೈತನ್ಯ ಬಂದಿತು, ಅಂದು ಸ್ವರ್ಣ ಹಾಗೂ ವಿವಿಧ ಬಗೆಯ ರತ್ನಗಳು ಸ್ವಯಂ ಪ್ರಕಾಶಮಾನವಾಗಿ ಹೊಳೆಯಲಾರಂಬಿಸಿದವು, ಅಂದು ಎಲ್ಲಾ ಜೀವಿಗಳಲ್ಲಿ ಹಾಗೂ ಮಾನವರಲ್ಲಿ ಮೆತ್ತಾ ಭಾವನವು ಸ್ವಯಂ ಆಗಿ ಹೊರಹೊಮ್ಮಿತು, ಅಂದು ನರಕಗಳಲ್ಲಿ ನರಕಾಗ್ನಿಯು ನಂದಿಹೋಯಿತು, ಸದಾ ಕತ್ತಲಿನಿಂದ ಕೂಡಿರುತ್ತಿದ್ದ ಲೋಕೋಂಧಕಾರ ನರಕಗಳಲ್ಲಿಯು ಸಹಾ ಅಂದು ದಿವ್ಯ ಬೆಳಕು ಪ್ರಕಾಶಿಸಿತು, ಮುಚ್ಚಿದ ಬಾಗಿಲುಗಳು ತೆರೆಯಲ್ಪಟ್ಟವು, ಪಾಪಿಗಳಲ್ಲಿಯು ಪುಣ್ಯಚಾರಣೆಯ ಬಯಕೆಗಳು ಉಂಟಾಯಿತು, ದಾರಿತಪ್ಪಿದ್ದಂತಹ ಹಡಗುಗಳು ಸರಿಯಾದ ಗುರಿ ತಲುಪಿದವು, ಅಂದು ಸಮುದ್ರಗಳು ಸಹಾ ತಾತ್ಕಲಿಕವಾಗಿ ಸಿಹಿಯಾದವು, 


     ಬೋಧಿಸತ್ವರ ಜನ್ಮವು ಪ್ರಕೃತಿಯ ಮಧ್ಯೆ ಸಾಲ ವೃಕ್ಷದ ಕೆಳಗೆ ಆಯಿತು, ಮಹಾಮಾತೆ ಮಹಾಮಾಯೆಯವರು ನಿಂತೆ ಸಾಲ ವೃಕ್ಷವನ್ನು ಹಿಡಿಯಲು ಹೋದಾಗ ವೃಕ್ಷದ ಕೊಂಬೆಯೇ ಕೈಗೆ ತಾಗಿತು, ಅದೇ ವೇಳೆಯಲ್ಲಿ ಯಾವುದೇ ಪ್ರಸವ ವೇದನೆಯಿಲ್ಲದೆ ಜನ್ಮ ನೀಡಿದರು, ನಿಂತುಕೊಂಡೆ ಜನ್ಮ ನೀಡಿದರು, ಅವರ ಜನ್ಮವೂ ದೇಹದ ಪಾಶ್ರ್ವದಿಂದ ಆಯಿತು, ಬೋಧಿಸತ್ವರನ್ನು ಭೂಮಿಗೆ ಬೀಳದಂತೆ ಮೂದಲು ಬ್ರಹ್ಮರೂ ಹಿಡಿದರು, ನಂತರ ಚತುಮರ್ಾರಾಜಿಕ ದೇವತೆಗಳು ಹಿಡಿದವು, ನಂತರ ಮಹಾಮಾಯೆಯ ಸಖೀಯರು ಹಿಡಿದರು, ಆ ಮಗುವು ಅವರಿಂದಲೂ ಜಾರಿ ಭೂಮಿಯ ಮೇಲೆ ನಿಧಾನವಾಗಿ ಭೂಮಿಯ ಮೇಲೆ ಸ್ಥಿರವಾಗಿ ನಿಂತಿತು. ಆ ಸಮಯದಲ್ಲಿ ಮೇಲಿನ ಎಲ್ಲಾ ಅಧ್ಭುತಗಳು ಸಂಭವಿಸಿದವು. ನಂತರ ಆ ಬೋಧಿಸತ್ವ ಏಳು ಹೆಜ್ಜೆ ಉತ್ತರ ದಿಕ್ಕಿನೆಡೆಗೆ ನಡೆಯಿತು, ಅದು ಹೆಜ್ಜೆ ಇಟ್ಟ ಸ್ಥಳಗಳಲ್ಲಿ ಪದ್ಮಗಳು ಉದಯಿಸಿದವು, ನಂತರ ಆ ಪರಮಶ್ರೇಷ್ಡ ಮಗುವು ಹೀಗೆ ನುಡಿಯಿತು : 

"ಅಗ್ಗೊ ಹಂ ಅಸ್ಮಿ ಲೊಕಸ್ಸಾ

ಜೆಟ್ಟ್ಗೊ ಹಂ ಅಸ್ಮಿ ಲೊಕಸ್ಸಾ

ಸೆಟ್ಟೊ  ಹಂ ಅಸ್ಮಿ ಲೊಕಸ್ಸಾ

ಅಯಂ ಅಂತಿಮ ಜಾತಿ

ನತ್ಥಿ ದಾನಿ ಪುನಭ್ಭವೊ"


  ಅಗ್ರನು ನಾನು ಲೋಕಗಳಿಗೆಲ್ಲಾ

   ಜೇಷ್ಡನು ನಾನು ಲೋಕಗಳಿಗೆಲ್ಲಾ

  ಶ್ರೇಷ್ಡನು ನಾನು ಲೋಕಗಳಿಗೆಲ್ಲಾ

 ಇದೇ ನನ್ನ ಅಂತಿಮ ಜನ್ಮವು

 ನನಗೆ ಮುಂದೆ ಪುನರ್ಜನ್ಮವಿಲ್ಲ.


ಬೋದಿಸತ್ವರು 3 ಜನ್ಮಗಳಲ್ಲಿ ಮಾತ್ರ ಶಿಶುವಾಗಿರುವಾಗಲೇ ಮಾತನಾಡಿದ್ದಾರೆ. ಅವೇಂದರೆ ಮಹಾಔಷಧಕುಮಾರನಾಗಿದ್ದಾಗ,  ವೆಸ್ಸಂತರನಾಗಿದ್ದಾಗ ಹಾಗೂ ಕೋನೆಯ ಜನ್ಮವಾದ ಸಿಧ್ಧಾರ್ಥ ಗೋತಮರಾಗಿದ್ದಾಗ. ಅವರು ಮಹಾಔಷಧಕುಮಾರನಾಗಿದ್ದಾಗ ಜನ್ಮದಿಂದಲೇ ಕೈಯಲ್ಲಿ ಹಿಡಿದು ಬಂದಿದ್ದ ಮೂಲಿಕೆ ಬಗ್ಗೆ ಹೀಗೆ ಮಾತನಾಡಿದ್ದರು : ಅಮ್ಮ, ಇದು ಔಷಧಿ ಎಂದು ತಾಯಿಯು ತನ್ನ ಕೈಯಲಿನ ಮೂಲಿಕೆ ಏನೆಂದು ಕೇಳಿದಾಗ ಉತ್ತರಿಸಿದ್ದರು. ಅವರು ವೆಸ್ಸಂತರ ಬೋಧಿಸತ್ತನಾಗಿ ಹುಟ್ಟಿದ್ದಾಗ ತಮ್ಮ ತಾಯಿಗೆ ಹೀಗೆ ಪ್ರಶ್ನೀಸಿದ್ದರು ಅಮ್ಮ ನನ್ನ ಸ್ವರ್ಣಅರಮನೆಯಲ್ಲಿ ದಾನ ನೀಡಲೂ ಏನೆಲ್ಲಾ ಇವೆ. ಎಂದು ಪ್ರಶ್ನಿಸಿದಾಗ ಆ ಮಹಾ ಮಾತೆಯು ಕಂದನೇ ನೀನೂ ಸ್ವರ್ಣಅರಮನೆಯ ಐಶ್ವರ್ಯದಲ್ಲಿ ಹುಟ್ಟಿರುವೆ. ಎಂದು ಉತ್ತರಿಸಿದರು.


  ಬೋಧಿಸತ್ವರು ಹುಟ್ಟಿದ ಸಮಯದಲ್ಲೇ ಯಾರ್ಯಾರು ಹುಟ್ಟಿದ್ದರು ?

1.ಯಸೋಧರೆ

2.ಪೂಜ್ಯ ಆನಂದ

3. ಸಾರಥಿಯಾಗಿದ್ದ ಛನ್ನ

4.ಬಾಲ್ಯ ಮಿತ್ರ ಕಾಲೂದಾಯಿ

5. ಕುದರೆ ಕಂಥಕ

6. ಬೋಧಿವೃಕ್ಷ

7.ನಾಲ್ಕು ಬೃಹತ್ ಕೊಪ್ಪರಿಗೆ ಸ್ವರ್ಣರಾಶಿ 


ಬೋಧಿಸತ್ವರು 32 ಮಹಾಪುರುಷ ಲಕ್ಷಣಗಳನ್ನು 80 ಅಸಿತಿ ಅನುವ್ಯಂಜನ (ಉಪ ಮಹಾಪುರುಷ ಲಕ್ಷಣಗಳು) ಒಟ್ಟಾರೆ ಶತ ಪುಣ್ಯಲಕ್ಷಣಗಳನ್ನು ಹೊಂದಿದ್ದರು. 


ಬುದ್ಧ ಭಗವಾನರ 32 ಮಹಾಪುರುಷ ಲಕ್ಷಣಗಳುಳ್ಳ ಶರೀರ

1. ಸಂದಿಲ್ಲದ ಸಮತಟ್ಟಾದ ಪಾದಗಳು 

2. ಪಾದಗಳಲ್ಲಿ ಸಾವಿರ ಅರೆಗಳುಳ್ಳ ನೇಮಿ ನಾಭಿಸಹಿತ ಚಕ್ರ ಚಿಹ್ನೆ

3. ತೆಳ್ಳನೆಯ ಉದ್ದವಾದ ಬೆರಳುಗಳು

4. ಸುಲಭವಾಗಿ ಮಣಿಯುವ(ಮೃದುವಾದ) ಕೈ ಹಾಗು ಕಾಲುಗಳು

5. ಅಂಗೈ(ಬೆರಳು)ಗಳು ಹಾಗೂ ಪಾದಗಳು(ಬೆರಳು)ಬಲೆಯಂತೆ (ಇರುವ ರೇಖೆಗಳು) ಇರುತ್ತವೆ

6. ಅಗಲವಾದ ಚಾಚಿದ ಶಂಕಾಕೃತಿಯ ಹಿಮ್ಮಡಿಗಳು

7. ಕಮಾನಿನಂತಿರುವ ಮೇಲ್ಕಾಲು

8. ಸಾರಂಗ (ನಿಗ್ರೋದ)ದಂತಿರುವ ಕಾಲು(ತೋಡೆ)ಗಳು

9. ನಿಂತಿರುವಾಗ ಹಸ್ತಗಳು ಮೊಳಕಾಲುಗಳ ಕೆಳಗೆ ತಾಕುತ್ತದೆ

10. ಕೋಶದಿಂದ ಆವೃತವಾದ ಪುರುಷೇಂದ್ರೇಯ

11. ಬಾಹುಗಳನ್ನು ವಿಸ್ತರಿಸದಷ್ಟೇ ಎತ್ತರವಿರುವ ದೇಹಾಕೃತಿ, ಅಥವಾ ದೇಹಾಕೃತಿಯಷ್ಟು ಉದ್ದಾವಾದ ತೋಳುಗಳು

12. ಪ್ರತಿ ಕೂದಲು ಗಾಡನೀಲಿವರ್ಣದ್ದು ಹಾಗೂ ಪ್ರತಿ ರೋಮಕೂಪದಲ್ಲು ಒಂದೇ ಕೂದಲಿರುತ್ತದೆ.

13. ದೇಹದ ಕೂದಲು ಅಕರ್ಷಣೆಯಿಂದ ಹಾಗೂ ಗುಂಗರೂ ಆಗಿರುತ್ತದೆ. ಹಾಗೂ ಮೇಲ್ಮುವಾಗಿ ಹಾಗು ಬಲಗಡೆಗೆ ತಿರುಗಿರುತ್ತದೆ.

14. ಸುವರ್ಣವರ್ಣದ ತ್ವಚೆಯ ಬಣ್ಣ, 

15. ಹತ್ತು ಅಡಿ ಉದ್ದದ ಪ್ರಭೆ ಸದಾ ಸುತ್ತಲೂ ಆವೃತವಾಗಿರುವುದು.

16. ಕೋಮಲವಾದ ತ್ವಚೆ, ಚರ್ಮದ ಮೇಲೆ ಧೂಳಿರುವುದಿಲ್ಲ.

17. ಪಾದಗಳು, ಅಂಗೈ, ಭುಜಗಳು, ಹಾಗೂ ಶಿರವೂ ಗುಂಡನೆಯ ಆಕೃತಿಯನ್ನು ಹೊಂದಿದೆ.(ದೇಹದಲ್ಲಿ ಸಪ್ತ ಉಬ್ಬುಗಳಿರುತ್ತದೆ)

18. ಆಲದ ಮರದಂತೆ ಸಮಪ್ರಮಾಣದ ಅಂಗಾಂಗಗಳು

19. ಸಿಂಹಾಕೃತಿಯಂತೆ ಕತ್ತು ಹಾಗೂ ಸೊಂಟವಿರುವ ಶರೀರ

20. ಬ್ರಹ್ಮಲೋಕದವರಂತೆ ನೆಟ್ಟಗಿರುವ ಹಾಗೂ ನೇರವಾದ ಶರೀರ

21. ಪೂರ್ಣವಾದ ದುಂಡಾದ ಭುಜಗಳು, ನಡುವೆ ತಗ್ಗು ಇರುವುದಿಲ್ಲ.

22. ಹುಟ್ಟಿದಾಗಲೇ 40 ಹಲ್ಲುಗಳು

23. ಹಲ್ಲುಗಳು ಬಿಳಿ, ಸಮನಾದುದು, ಮಧ್ಯೆ ರಂದ್ರಗಳಿಲ್ಲದೆ ಕೂಡಿರುತ್ತವೆ.

24. ಕ್ಷತ್ರೀಯರಂತಿರುವ ಎದೆಯ ಆಕಾರ

25. ಸಿಂಹದಂತಹ ದವಡೆ, ಸಮಮಟ್ಟದ ಹಲ್ಲಿನ ಸಾಲು

26. ಶ್ರೇಷ್ಟ ಅಭಿರುಚಿಯನ್ನು ಹೊಂದಿರುತ್ತಾರೆ ಆಹಾರ ಸೇವಿಸಿದಾಗ ನಾಲಿಗೆಗೆ ಅಷ್ಟೇ ಅಲ್ಲದೆ, ಎಲ್ಲಾ ಭಾಗಗಳಿಗೂ ರುಚಿ ಸಿಗುವುದು.

27. ಹಣೆ ಹಾಗೂ ಕಿವಿಗಳನ್ನು ಸುಲಭವಾಗಿ ತಾಗುವಂತಹ ಉದ್ದವಾದ ನಾಲಿಗೆ

28. ಚಕ್ರವಾಕ ಪಕ್ಷಿಯಂತೆ ಅಥವಾ ಕೋಗಿಲೆ(ಕರವಿಕ)ಯಂತಹೆ ಪರಮ ಮಾಧುರ್ಯದ ಬ್ರಹ್ಮಸ್ವರವಿರುತ್ತದೆ..

29. ಗಾಢ ಅಭಿನೀಲಿವರ್ಣದ ಕಣ್ಣುಗಳು

30. ರಾಜವೃಷಭಕ್ಕೆರುವಂತಹ ನಯನಗೂದಲುಗಳು

31. ಭೃಮಧ್ಯೆ ಒಂದು ಉಬ್ಬಿದ್ದು ಅದರಲ್ಲಿ ಊದ್ರ್ವಮುಖಿಯಾಗಿರುವ ಅರಳೆಯಂತಹ ಒಂದು ಬಿಳಿ ಕೂದಲಿರುತ್ತದೆ.

32. ಕಿರೀಟದಂತಿರುವಂತಹ ದುಂಡನೆಯ ಶಿರಸ್ಸಿನ ಆಕಾರ.


ಕಾಲದೇವಿಲರ ಅರಮನೆ ಬೇಟಿ 

ಮಹಾಸತ್ವ ಬೋಧಿಸತ್ವರನ್ನು ಕಾಣಲು ಮಹಾಋಷಿಯಾದ ಕಾಲದೇವಿಲ ಅಥವಾ ಅಸಿತ ಋಷಿಯು ಸಹಾ ಆ ದಿನದಂದೆ ಅರಮನೆಗೆ ಬೇಟಿ ನೀಡಿದ್ದರು. ಹಾಗೂ ಶತ ಪುಣ್ಯಲಕ್ಷಣಗಳನ್ನು ನೋಡಿ ಹಾಗೂ ದಿವ್ಯದೃಷ್ಠಿಯಿಂದ ವೀಕ್ಷಿಸಿ , ಮೋದಲು ಹಷರ್ಿಸಿ ನಂತರ ಅತ್ತರು, ಇದಕ್ಕೆ ಕಾರಣ ಕೇಳೀದಾಗ ಈ ಬಾಲಕನು ಮುಂದೆ ಸಂಯಕ್ ಸಮ್ಮಸಂಬುದ್ಧರು ಆಗುವರು ಎಂದು ಭವಿಷ್ಯವಾಣಿ ನುಡಿದರು. .ಹಾಗೂ ಅದನ್ನು ಆಲಿಸಲು ತಾನೂ ಇರುವುದಿಲ್ಲ ಎಂದು ವ್ಯಥೆಪಟ್ಟರು.

     ಅದೇದಿನದಂದು ಅವರ ಹೆಸರು ಸಿದ್ಧಾರ್ಥನೆಂದು ನಾಮಕರಣ ಮಾಡಲಾಯಿತು.

 ಇವಿಷ್ಟು ಘಟನೆಗಳು ಬುದ್ದಭಗವಾನರ ಜನನದ ಆ ದಿನದಂದು ನಡೆಯಿತು.


ಸಮ್ಮಸಂಬೋಧಿಪ್ರಾಪ್ತಿಯ ಆ ದಿನದಂದು ಏನೆಲ್ಲಾ ನಡೆಯಿತು !?


.ಅಂದು ಒಟ್ಟು 11 ಘಟನೆಗಳು ನಡೆದವು. ಅವೆಂದರೆ

1. ಮುಂಜಾನೆ 5 ಸ್ವಪ್ನಗಳು ಕಂಡಿದ್ದು

2. ಸುಜಾತಳಿಂದ ಘನ ಪಾಯಸ ಸ್ವೀಕಾರ ಹಾಗೂ ಸೇವನೆ

3. ಆ ಸುವರ್ಣಪಾತ್ರೆಯನ್ನು ಸತ್ಯಕ್ರಿಯೆ ಮಾಡಿ ಹೊಳೆಯ ಮೇಲ್ಮುಖವಾಗಿ ಕಳುಹಿಸಿದ್ದು

4. ಸೋತ್ಥಿಯನಿಂದ ಹುಲ್ಲು ಸ್ವೀಕಾರ ಹಾಗೂ ಅಪರಿಜಿತ ವಜ್ರಸನದಪೀಠದ ಸಿದ್ಧತೆ

5. ಮಹಾ ಧೃಢಸಂಕಲ್ಪ

6. ಮಾರ ಪರಾಜಯ

7. ಪುಬ್ಬೆನಿವಾಸಾನುಸ್ಸತಿ ಅಭಿಜ್ಞಾ

8. ದಿವ್ಯಚಕ್ಕು ಅಭಿಜ್ಞಾ

9. ಅಸವಕ್ಖಯ ಜ್ಞಾನ

10. ಸಂಯಕ್ ಸಂಬುದ್ಧತ್ವದ ಪ್ರಾಪ್ತಿ 

11. ಉದಾನ ನುಡಿದಿದ್ದು.

ಆಗ ನುಡಿದಿದ್ದಂಹ ಉದಾನ ಏನೆಂದರೆ


ಅನೇಕ ಜನ್ಮಗಳನ್ನು ಈ ಸಂಸಾರದಲ್ಲಿ ಪಡೆದಿದ್ದೇನೆ. 

ಅನ್ವೇಷಿಸಿದೆ ಆಪಾರ, ಆದರೆ ಪಡೆಯಲಿಲ್ಲ ಗೃಹ ನಿಮರ್ಾತನನು; 

ಪುನಃ ಪುನಃ ಜನ್ಮವೆತ್ತುವುದು ನಿಜಕ್ಕೂ ದುಃಖಕರ. (153)



ಓ ಗೃಹ ನಿಮರ್ಾತನೇ ! ನಿನ್ನನ್ನು ನೋಡಿಯಾಯಿತು, 

ಹೀಗಾಗಿಯೇ ಮತ್ತೆ ನೀನು ಮನೆ ಕಟ್ಟಲಾರೆ, ನಿನ್ನೆಲ್ಲಾ ತೋಲೆ ನಿಲುವುಗಳೆಲ್ಲಾ ಚೂರಾಗಿದೆ.

 ಗೃಹದ ಆಧಾರ ಕಂಬವು ಮುರಿದಿದೆ, 

ಸ್ಥಿತಿಗೆ ಅತೀತವಾಗಿದೆ (ಸಂಖಾರತೀತವಾಗಿದೆ) ಚಿತ್ತವು, ತನ್ಹಾ ಕ್ಷಯವನ್ನು ಸಾಧಿಸಿದ್ದಾಗಿದೆ. (154)




ಮಹಾಪರಿನಿಬ್ಬಾಣದ ಆ ದಿನದಂದು ಎನೆಲ್ಲಾ ನಡೆಯಿತು !?



 ಅಂದು ಒಟ್ಟು 17 ಘಟನೆಗಳು ನಡೆದವು. ಅವೆಂದರೆ

 1.ವೈಶಾಲಿಯನ್ನು ಕೋನೆಯ ಬಾರಿ ನೋಡಿದ್ದು

2. ಆರ್ಯ ಸತ್ಯಗಳನ್ನು ಅರಿಯದೆ ಸಂಸಾರ ಸುತ್ತಾಟ ಎಂಬ ಬೋದನೆ ನೀಡಿದ್ದು

3. ಬೋದನೆಗಳನ್ನು 4 ರೀತಿ ಪ್ರಮಾಣ ತಾಳೆ ನೋಡುವ ಬಗೆ ತಿಳಿಸಿದ್ದು

4. ಕಮ್ಮಾರ ಪುತ್ತ ಚುಂದನ ಬಳಿ ಕೋನೆಯ ಆಹಾರ ಸೇವನೆ

5. ದೇಹಕ್ಕೇ ಆಪಾರ ನೋವು ಅನುಭವ

6. ಕುಸಿನಾರಕ್ಕೆ ಆಗಮನ

7. ಕೆಂಪು ಬಗ್ಗಡ ನೀರನ್ನು ತಿಳಿಯಾಗಿಸಿ ಸೇವಿಸಿದ್ದು

8. ಮಲ್ಲಪುತ್ತ ಪುಕ್ಕಸನಿಗೆ ಶಬ್ಧತೀತ ಅಭಂಗ ಸಮಾಧಿಯ ಬಗ್ಗೆ ತಿಳಿಸಿದ್ದು

9. ಪುಕ್ಕಸನು ಚಿನ್ನದ ಶಾಲು ಹೊದೆಸಿದ್ದು

10. ಶಾಲ ವೃಕ್ಷದ ವರ್ಣನೆ

11. ನಾಲ್ಕು ಶ್ರದ್ಧಾಸ್ಥಳಗಳ ಬಗ್ಗೆ ಅರಿವು ಮೂಡಿಸಿದ್ದು

12. ಸ್ತೂಪಕ್ಕೆ ಅರ್ಹ ವ್ಯಕ್ತಿಗಳ ಬಗ್ಗೆ ತಿಳಿಸಿದ್ದು

13. ಆನಂದರ ಪ್ರಶಂಸೆ ಮಾಡಿದ್ದು

14. ಮಹಾಸುದಸ್ಸನ ಸುತ್ತ ವಿವರಿಸಿದ್ದು

15. ಸುಭದ್ಧ ಪರಿಬ್ಬಾಜ್ಜಕನಿಗೆ ಆರ್ಯರು ಇಲ್ಲಿ ಮಾತ್ರವೇ ಎಂಬ ಬೋದನೆ ನೀಡಿದರು

16. ಕೋನೆಯ ವಚನಗಳನ್ನು ನುಡಿದಿದ್ದು

"ಭಿಕ್ಖುಗಳೇ ಒತ್ತಿ ನುಡಿಯುತ್ತಿದ್ದೇನೆ, ಎಲ್ಲಾ ಸಂಖಾರಗಳು ಶಿಥಿಲವಾಗಿ ನಾಷಗೊಳ್ಳುವವು ಅಪ್ರಮತ್ತತೆಯಿಂದ ಅರಹತ್ವವನ್ನು ಸಂಪಾದಿಸಿಕೋಳ್ಳಿರಿ."

17. ಮಹಾಪರಿನಿಬ್ಬಾಣ ಪ್ರಾಪ್ತಿ ಮಾಡಿದರು.



 

Thursday 24 September 2020

*ಪರಮ ಪೂಜ್ಯ ಆಚಾರ್ಯ ಬುದ್ಧರಕ್ಖೀತ ಥೇರ ಬಡಾ ಭಂತೆಜೀ*

 

*ಪರಮ ಪೂಜ್ಯ ಆಚಾರ್ಯ ಬುದ್ಧರಕ್ಖೀತ ಥೇರ ಬಡಾ ಭಂತೆಜೀ*




 

ಆಚಾರ್ಯ ಬುದ್ಧರಕ್ಖೀತ ಥೇರರವರು(1922-2013) ಖ್ಯಾತ ಬೌದ್ಧಭಿಕ್ಖುವು ಹಾಗೂ ಗಮನಾರ್ಹ ಲೇಖಕರು ಆಗಿದ್ದರು. ಅವರು ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಸಂಸ್ಥಾಪಕರು ಹಾಗೂ ಅದರ ಸೋದರ ಸಂಸ್ಥೆಗಳ ಸಂಸ್ಥಾಪಕರು ಹೌದು.

 

ಅವರು ಹುಟ್ಟಿದ್ದು ಮಣಿಪುರದ ಇಂಫಾಲ್ ನಲ್ಲಿ.

 

1942 ರಿಂದ 1942 ರವರೆಗಿನ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಹಾ ಅವರು ಭಾಗವಹಿಸಿದ್ದರು.

 

*ಜನ್ಮ*

12ನೇ ಮಾರ್ಚ್ 1922

ಮಣಿಪುರದ ಇಂಫಾಲ್,ಭಾರತ.

 

*ಮರಣ*

23ನೇ ಸೆಪ್ಟೆಂಬರ್ 2013(೯೧ನೇ ವಯಸ್ಸಿನಲ್ಲಿ) ಬೆಂಗಳೂರು,.ಭಾರತ.

 

*ಆಲ್ಮ ಮಾಸ್ಟರ್*

ಕಲ್ಕತ್ತಾದ ಇಂಜಿನೀಯರಿಂಗ್ ಟೆಕ್ನಾಲಜಿ ಇಸ್ಟಿಟ್ಯೂಟ್ನಲ್ಲಿ.

 

*ಗಮನಾರ್ಹ ಕೃತಿ*

ಧಮ್ಮಪದ(ಆಂಗ್ಲಭಾಷೆಯಲ್ಲಿ)

 

*ಗಮನಾರ್ಹ ಪುರಸ್ಕಾರಗಳು*

ಆಚಾರ್ಯ,ಡಾಕ್ಟರೇಟ್,

ಅಭಿಧಜ ಅಗ್ಗಮಹಾ ಸಧಮ್ಮಜೋತಿಕಾ

 

*ವೆಬ್ ಸೈಟ್*

mahabodhi.info/about_us.html

 

ಅವರು ಕಲ್ಕತ್ತಾದ ವಿಧ್ಯಾಭ್ಯಾಸದ ನಂತರ ಭಾರತೀಯ ರಕ್ಷಣಾ ಸೇವೆಗಳಲ್ಲಿ ಸೇರಿದರು. ಅವರು ದ್ವಿತೀಯ ಮಹಾಯುದ್ಧದಲ್ಲಿಯೂ ಭಾಗವಹಿಸಿದ್ದರು. ನಂತರ ಸತ್ಯ ಹಾಗೂ ವಿಮುಕ್ತಿಗಾಗಿ ಸೇವಾ ವೃತ್ತಿಯನ್ನು ತೊರೆದರು.

 

ಅವರು 15-8-1947ರಂದೇ  ಗೃಹತ್ಯಾಗ ಮಾಡಿ ಸಂನ್ಯಾಸ ಸ್ವೀಕರಿಸಿದ್ದರು.

 

 ಅವರು ಸತ್ಯದ ಅನ್ವೇಷಣೆಯಲ್ಲಿ ಅವರು ಮಾತೆ ಆನಂದಮಯಿ ಮಾ, ರಮಣ ಮಹರ್ಷಿ,ರಂತಹ ದಿಗ್ಗಜರ,   ರಾಮಕೃಷ್ಣ ಮಠ ಇತ್ಯಾದಿಗಳ ಮೂಲಕ ಹಾದು ಹೋದರು. ಅವರು ಕನ್ಹೆರಿ ಗು಼ಹೆಗಳತ್ತ ಬಂದಾಗ ಅವರಿಗೆ ಪೂರ್ವ ಜನ್ಮದ ಸ್ಮರಣೆಯುಂಟಾಗಿ ತಾವು ಹಿಂದಿನ ಜನ್ಮದಲ್ಲಿ ಬೌದ್ಧ ಭಿಕ್ಖುವಾಗಿದ್ಧನ್ನು ನೆನಪಿಸಿಕೊಂಡು ನಂತರ ಬೌದ್ಧ ಭಿಕ್ಖುಗಳಾಗಲು ಧೃಡಸಂಕಲ್ಷ ತಾಳಿದರು.

 

ಅವರು 1949ರಲ್ಲಿ ಬೌದ್ಧಭಿಕ್ಖುಗಳಾದರು.

 

 12-5-1949 ಬುದ್ಧಪುರ್ಣಮಿಯಂದು ಕುಸಿನಾರದಲ್ಲಿ ಪರಮಪೂಜ್ಯ ಚಂಡಮಣಿ ಥೇರರಿಂದ ಭಿಕ್ಖುದೀಕ್ಷೆ ಸ್ವೀಕರಿಸಿದರು.

 

 ನಂತರ ಶ್ರೀಲಂಕದಲ್ಲಿ 1948ರಿಂದ 1951ರವರಿಗೆ ಹಾಗೂ ಬರ್ಮದಲ್ಲಿ 1951 ರಿಂದ 1954 ರವರಿಗೆ  ಧಮ್ಮ ಅನ್ವೇಷಣೆ ಹಾಗೂ ಅಧ್ಯಯನ ಮಾಡಿದರು.

 

ನಂತರ 1952ರಿಂದ 1954 ರವರಿಗೆ ನಡೆದ ಛಟ್ಠಸಂಘಯನ ಬೌದ್ಧ ಮಹಾ ಸಮ್ಮೇಳನದಲ್ಲಿ ಪಟಿವಿಸೋಧಕ ಅಂದರೆ ಸಂಪಾದಕರಾಗಿ ಕಾರ್ಯವಹಿಸಿದ್ದರು.

 

ನಂತರ ದೇಶ ವಿದೇಶಗಳಲ್ಲಿ ಧಮ್ಮಬೋಧಕರಾಗಿ ಕಾರ್ಯನಿರ್ವಹಣೆ ಮಾಡಿದರು.

 

ಅವರಿಗೆ ಶ್ರೀಲಂಕದಲ್ಲಿ 1951ರಲ್ಲಿ *ಆಚಾರ್ಯ* ಪದವಿ ನೀಡಿದರು‌‌

 

ಹಾಗೂ ಬರ್ಮದೇಶದಲ್ಲಿ ಅವರ ಧಮ್ಮಸೇವೆ ಗಮನಿಸಿ ಅವರಿಗೆ *ಅಭಿದಜ ಅಗ್ಗಮಹಾ ಸಧಮ್ಮಜೋತಿಕಾ*

ಪದವಿ ನೀಡಲಾಯಿತು.

 

ಹಾಗೂ ತುಮಕೂರು ವಿಶ್ವವಿದ್ಯಾಲಯದಲ್ಲಿ ಹಾಗೂ ಥಾಯ್ಲೆಂಡ್ನ ಸರ್ಕಾರವೇ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ.

 

1952 ರಲ್ಲಿ. ಪರಮಪೂಜ್ಯ ಬೌದ್ಧ ಪುನರ್ಜೀವಕರಾದ ಅನಗಾರಿಕ ಧಮ್ಮಪಾಲರ ಸೋದರಿಯ ಮಗಳಾದ ಮೂನಸಿಂಗೆಗೆ ಮೈಸೂರಿನ ಮಹಾರಾಜರು ಆಗ ಬೆಂಗಳೂರುನಲ್ಲಿ ಮಹಾಬೋಧಿಯ ಸ್ಥಾಪನೆಗೆ ನೆಲವನ್ನು ಉಡುಗೊರೆಯಾಗಿ ನೀಡಿದ್ದರು. ಅವರು ಅದನ್ನು ಬುದ್ಧರಕ್ಖೀತ ಥೇರರಿಗೆ ವಹಿಸಿ ಅದನ್ನು ಮುಂದುವರಿಸುವಂತೆ ಕೋರಿಕೊಂಡರು.

 

ಹೀಗೆ 5-6-1956 ರಲ್ಲಿ ಮಹಾಬೋಧಿ ಸೊಸೈಟಿ ಸ್ಥಾಪನೆ ಮಾಡಿದರು.

 

ನಂತರ ಅವರು 150ಕ್ಕಿಂತ ಹೆಚ್ಚು ಬೌದ್ಧ ಗೃಂಥಗಳನ್ನು ಬರೆದರು.ಬುದ್ಧವಚನ ಪ್ರಕಾಶನವನ್ನು,  *Dhamma* magazine , *ಕನ್ನಡ ಧಮ್ಮ* ಮ್ಯಾಗಜಿನ್ ನ್ನು ಹೋರತಂದರು. ತಿಪಿಟಕದ ಕನ್ನಡದ ಅನುವಾದದ ಗೃಂಥಗಳನ್ನು ಹಾಗೆ ತೆಲುಗಿನ ತಿಪಿಟಕದ ಅನುವಾದದ ಸರಣಿ ಹೊರತಂದರು.

 

ಅನೇಕ ಚೈತ್ಯ, ಸ್ತೂಪ, ವಿಹಾರಗಳನ್ನು ನಿರ್ಮಿಸಿದರು.

 

ಆಧುನಿಕ ಭಾರತದಲ್ಲಿ ಭಿಕ್ಖುಸಂಘವನ್ನು ಸ್ಥಾಪಿಸಿದರು. ಭಿಕ್ಖುಗಳ ಅಧ್ಯಯನ ಕೇಂದ್ರಗಳನ್ನು ಸ್ದಾಪಿಸಿದರು

 

ಧ್ಯಾನಕೇಂದ್ರಗಳನ್ನು ಸ್ಥಾಪಿಸಿದರು.

 

ಆಸ್ಪತ್ರೆಗಳನ್ನು, ಸ್ಕೂಲ್ಗಳನ್ನು, ಹಾಸ್ಟೆಲ್ ಗಳನ್ನು ಮತ್ತು ಕೃತಕ ಅಂಗಾಂಗಗಳ ಕೇಂದ್ರಗಳನ್ನು ಸ್ಥಾಪಿಸಿದರು.

 

ಹೀಗೆ ನೂರಾರು ಸೇವಕಾರ್ಯಗಳನ್ನು ಮುಂದುವರೆಸಿದರು.

 

ನಂತರ ಈಗಿನ ಧಮ್ಮಸೂರ್ಯವು 2013 ಸೆಪ್ಟೆಂಬರ್ 23ರಂದು ಅಸ್ತಂಗತವಾಯಿತು.

 

ಅವರ ಅಂತ್ಯಕ್ರಿಯೆಯನ್ನು ಬುದ್ಧರ  ಅಂತ್ಯಕ್ರಿಯೆಯ ರೀತಿ ಮಾಡಿದರು. ಅಂದು ಅಗಸದಲ್ಲಿ ದಿವ್ಯವಾದ ಫ್ರಭಾವಳಿಯು ಅಧ್ಬುತವಾಗಿ ಏರ್ಪಟ್ಟಿತ್ತು.